ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಯ ಹಾದಿ ಕುರಿತು ಸ್ಥಳೀಯ ಪೊಲೀಸ್ ಇನ್ಸ್ಪೆಕ್ಟರ್ ಧನಂಜಯ್ ನೀಡಿರುವ ಮುಂಜಾಗ್ರತಾ ಸೂಚನೆಗಳಿಗೆ ಮಾಜಿ ಸಂಸದ ಪ್ರತಾಪ್ ಸಿಂಹ ಕಠಿಣ ಭಾಷೆಯಲ್ಲೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಾಂತಿ ಸಭೆಯಲ್ಲಿ ಇನ್ಸ್ಪೆಕ್ಟರ್ ಅವರು “ಮಸೀದಿ ಮುಂಭಾಗ ಮೆರವಣಿಗೆ ನಿಲ್ಲಿಸಿ ಪಟಾಕಿ ಹೊಡೆಯುವುದು ಅಥವಾ ಗಲಾಟೆ ಮಾಡಿದರೆ ಗ್ರಾಚಾರ ಬಿಡಿಸುತ್ತೇನೆ” ಎಂದು ನೀಡಿದ್ದ ಎಚ್ಚರಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ, ಮಾಜಿ ಸಂಸದರು ಆ ರೀತಿಯ ಧಾಟಿಯನ್ನು ಬಹಿರಂಗವಾಗಿ ಪ್ರಶ್ನಿಸಿದ್ದಾರೆ. ಅಸಹಾಯಕ ಯುವಕರ ಮುಂದೆ ಬ್ರಿಟಿಷರ ಕಾಲದ ದರ್ಪ ತೋರಿಸುವುದು ಬಿಟ್ಟು, ಧೈರ್ಯವಿದ್ದರೆ ತಮ್ಮ ಎದುರು ಪೌರುಷ ತೋರಿಸಲಿ ಎಂದು ಅವರು ಪೋಲಿಸ್ ಅಧಿಕಾರಿಗೆ ಸವಾಲೆಸೆದಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, “ಮಸೀದಿ ಎದುರುಗಡೆ ಯುವಕರು ಡ್ಯಾನ್ಸ್ ಮಾಡಿದರೆ ಅಥವಾ ಮೆರವಣಿಗೆ ಸಾಗಿದರೆ ಏನಾಗುತ್ತದೆ?” ಎಂದು ನೇರವಾಗಿ ಕೇಳಿದ್ದಾರೆ . ಸಾರ್ವಜನಿಕವಾಗಿ ದಿನಕ್ಕೆ ಐದು ಬಾರಿ ಮೈಕ್ ಬಳಸಿ ಪ್ರಾರ್ಥನೆ ಕೂಗುವಾಗ ಜಾರಿಯಾಗದ ಕಾನೂನು ಮತ್ತು ನಿಯಮಗಳು, ಹಿಂದೂಗಳ ಗಣೇಶೋತ್ಸವ ಬಂದಾಗ ಮಾತ್ರ ಏಕ ಪ್ರಮಾಣದಲ್ಲಿ ಜಾರಿಯಾಗುತ್ತವೆ ಎಂದು ಅವರು ಆರೋಪಿಸಿದ್ದಾರೆ. ಇನ್ಸ್ಪೆಕ್ಟರ್ ಅವರು ಮತ್ತೆ ಯುವಕರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡಿದರೆ, ತಾವು ಸ್ವತಃ ನೇರವಾಗಿ ಪೊಲೀಸ್ ಠಾಣೆಗೆ ನುಗ್ಗುವುದಾಗಿ ಎಚ್ಚರಿಕೆ ನೀಡಿದ್ದು, ಸ್ಥಳೀಯ ಪೋಲಿಸ್ ಇಲಾಖೆ ಹಾಗೂ ರಾಜಕೀಯ ವಲಯದಲ್ಲಿ ಈ ಹೇಳಿಕೆ ತೀವ್ರ ಸಂಚಲನ ಮೂಡಿಸಿದೆ.
ವರ್ಷಂಪ್ರತಿ ಸಾರ್ವಜನಿಕ ಉತ್ಸವಗಳ ಸಂದರ್ಭದಲ್ಲಿ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳಲು ಪೋಲಿಸ್ ಇಲಾಖೆಯು ಮೆರವಣಿಗೆಗಳಿಗೆ ಮಾರ್ಗಸೂಚಿಗಳನ್ನು ನಿಗದಿಪಡಿಸುವುದು ಸಾಮಾನ್ಯ ಆಡಳಿತಾತ್ಮಕ ಪ್ರಕ್ರಿಯೆಯಾಗಿದೆ. ಟಿ. ನರಸೀಪುರ ಪೊಲೀಸ್ ಇನ್ಸ್ಪೆಕ್ಟರ್ ಧನಂಜಯ್ ಅವರು ಕೂಡ ಶಾಂತಿ ಸಭೆಯಲ್ಲಿ ಮಾತನಾಡಿ, “ಹಬ್ಬದ ಹೆಸರಿನಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಅನಗತ್ಯ ಗಲಾಟೆ ಎಬ್ಬಿಸುವುದು ಅಥವಾ ಮಸೀದಿಗಳ ಮುಂದೆ ಪಟಾಕಿ ಹೊಡೆದು ಪ್ರಚೋದನೆ ನೀಡುವುದನ್ನು ಸಹಿಸುವುದಿಲ್ಲ” ಎಂದು ಸಂಘಟಕರಿಗೆ ಸ್ಪಷ್ಟ ಸೂಚನೆ ನೀಡಿದ್ದರು.
ನ್ಯಾಯಾಲಯದಿಂದ ಶಿಕ್ಷೆಯಾದ ಅತ್ಯಾಚಾರಿಗೆ ಮುಖ ಪುಟದ ಜಾಹೀರಾತು: ತೀವ್ರ ಆಕ್ರೋಶದ ಬಳಿಕ ಬೇಷರತ್ ಕ್ಷಮೆ ಯಾಚಿಸಿದ ‘ದಿ ಹಿಂದೂ’ ಪತ್ರಿಕೆ
‘ಮಸೀದಿ ಎದುರು ಡ್ಯಾನ್ಸ್ ಮಾಡಿದ್ರೆ ಏನಾಗುತ್ತೆ?’: ಇನ್ಸ್ಪೆಕ್ಟರ್ ಮುಂಜಾಗ್ರತಾ ಸೂಚನೆಗೆ ಪ್ರತಾಪ್ ಸಿಂಹ ಆಕ್ಷೇಪ, ಠಾಣೆಗೆ ನುಗ್ಗುವ ಎಚ್ಚರಿಕೆ
ಇಸ್ರೇಲ್ ಪ್ರಧಾನಿ ನೆತನ್ಯಾಹು ಮೇಕಪ್ಗೆ ₹4.45 ಕೋಟಿ ವೆಚ್ಚ: ಯುದ್ಧದ ನಡುವೆಯೂ ಮುಂದುವರಿದ ಮೇಕಪ್ – ಸ್ಟೈಲಿಂಗ್ ಬಜೆಟ್
