ಯುದ್ಧಪೀಡಿತ ಯೆಮನ್ನಲ್ಲಿ ಉಲ್ಬಣಗೊಂಡಿರುವ ಹೊಸ ಸುತ್ತಿನ ಹಿಂಸಾಚಾರದಿಂದಾಗಿ ಕೇವಲ ಎರಡೇ ವಾರಗಳಲ್ಲಿ 1,04,000ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದು, ಇದರಲ್ಲಿ 57,000ಕ್ಕೂ ಹೆಚ್ಚು ಮಕ್ಕಳು ಸೇರಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ (UNICEF) ವರದಿ ಮಾಡಿದೆ. ವೆಸ್ಟರ್ನ್ ತೈಜ್, ದಕ್ಷಿಣ ಹುದೈದಾ ಮತ್ತು ಮಾರಿಬ್ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಘರ್ಷಣೆ ತೀವ್ರಗೊಂಡಿದ್ದು, ಸೆಪ್ಟೆಂಬರ್ 3ರಿಂದೀಚೆಗೆ ಕನಿಷ್ಠ 9 ಮಕ್ಕಳು ಕೊಲ್ಲಲ್ಪಟ್ಟಿದ್ದಾರೆ ಹಾಗೂ 12 ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದಾರೆ. ಇಷ್ಟೇ ಅಲ್ಲದೆ, ಏಡೆನ್ ಮಾರ್ಗದಲ್ಲಿ ನಡೆದ ದಾಳಿಯ ನಂತರ ಮೂವರು ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಯೂನಿಸೆಫ್ ಕಳವಳ ವ್ಯಕ್ತಪಡಿಸಿದೆ.
ಈ ಹೊಸ ಸಂಘರ್ಷವು ಯೆಮನ್ನ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವನ್ನು ಸಂಪೂರ್ಣವಾಗಿ ಹಳಿ ತಪ್ಪಿಸಿದೆ. ಯೂನಿಸೆಫ್ನ ಅಂಕಿ ಅಂಶಗಳ ಪ್ರಕಾರ, ಹಿಂಸಾಚಾರದಿಂದಾಗಿ ಸಂಸ್ಥೆಯು ಬೆಂಬಲಿಸುತ್ತಿದ್ದ 26 ಆರೋಗ್ಯ ಕೇಂದ್ರಗಳ ಸೇವೆಗಳು ಸ್ಥಗಿತಗೊಂಡಿವೆ. ಜೊತೆಗೆ 243 ಶಾಲೆಗಳು ಮುಚ್ಚಲ್ಪಟ್ಟಿದ್ದು ಅಥವಾ ಬೋಧನೆಯನ್ನು ಅಮಾನತುಗೊಳಿಸಿದ್ದು, 1,37,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಭೀಕರ ಪರಿಸ್ಥಿತಿಯಿಂದಾಗಿ 2,000ಕ್ಕೂ ಹೆಚ್ಚು ಜನರು ಬಾಬ್ ಎಲ್-ಮಂಡೇಬ್ ಜಲಸಂಧಿ ದಾಟಿ ನೆರೆಯ ಜಿಬೌಟಿಗೆ ಅಪಾಯಕಾರಿ ಸಮುದ್ರ ಮಾರ್ಗದ ಮೂಲಕ ಪಲಾಯನ ಮಾಡಿದ್ದಾರೆ.
ಈ ಹೊಸ ಬಿಕ್ಕಟ್ಟು ಆರಂಭವಾಗುವುದಕ್ಕೂ ಮುನ್ನವೇ ಯೆಮನ್ನಲ್ಲಿ ಒಟ್ಟು 1.22 ಕೋಟಿ ಮಕ್ಕಳಿಗೆ ತುರ್ತು ಮಾನವೀಯ ನೆರವಿನ ಅಗತ್ಯವಿತ್ತು ಎಂದು ಯೂನಿಸೆಫ್ ದಾಖಲೆಗಳು ತಿಳಿಸುತ್ತವೆ. ಪ್ರಸ್ತುತ ಐದು ವರ್ಷಕ್ಕಿಂತ ಕೆಳಗಿನ 22 ಲಕ್ಷಕ್ಕೂ ಹೆಚ್ಚು ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಅದರಲ್ಲಿ 5,15,000ಕ್ಕೂ ಹೆಚ್ಚು ಮಕ್ಕಳು ಮಾರಕ ಅಪೌಷ್ಟಿಕತೆಗೆ ಈಡಾಗಿದ್ದಾರೆ. ದೇಶದಲ್ಲಿ ಒಟ್ಟು 32 ಲಕ್ಷ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಶೇಕಡಾ 60ರಷ್ಟು ಆರೋಗ್ಯ ಕೇಂದ್ರಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.
ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆ ಸ್ಥಾನಮಾನ ನೀಡಲು ಸರ್ಕಾರದ ಸಿದ್ಧತೆ: ಸೂಚನೆ ನೀಡಿದ ಸಚಿವ ಶಿವರಾಜ್ ತಂಗಡಗಿ
‘ದೇಶ ನಿಮಗೇನು ಮಾಡಿದೆ ಎಂದು ಕೇಳುವ ಬದಲು, ದೇಶಕ್ಕೆ ನಿಮ್ಮ ಕೊಡುಗೆ ಏನು ಎಂಬುದರತ್ತ ಗಮನಹರಿಸಿ’ : ಯುವಜನತೆಗೆ ನಿರ್ಮಲಾ ಸೀತಾರಾಮನ್ ಸಲಹೆ
ಸ್ವಇಚ್ಛೆಯಿಂದ ಇಸ್ಲಾಂ ಸ್ವೀಕರಿಸಿದೆ ಎಂದ ಆಯುಷ್ ಮಲಿಕ್: 31 ವರ್ಷದ ಯುವಕನನ್ನು ತಂದೆಯ ಅಕ್ರಮ ವಶದಿಂದ ಮುಕ್ತಗೊಳಿಸಿದ ಅಲಹಾಬಾದ್ ಹೈಕೋರ್ಟ್
‘ಅಸ್ಸಲಾಮು ಅಲೈಕುಮ್’, ‘ಇನ್ಶಾ ಅಲ್ಲಾಹ್’ ಎಂದಿದ್ದಕ್ಕೆ ಕ್ರಮ?: ಹಿಂದೂ ಸಂಘಟನೆಯ ದೂರಿನ ಬೆನ್ನಲ್ಲೇ ಐಪಿಎಸ್ ಅಧಿಕಾರಿ ಬುಷ್ರಾ ಬಾನೋ ವರ್ಗಾವಣೆ
ರಾಜಸ್ಥಾನ ಸ್ಥಳೀಯ ಚುನಾವಣೆ: ಬಿಜೆಪಿ ಅಭ್ಯರ್ಥಿಗೆ ಬಿದ್ದಿದ್ದು ಒಂದೇ ಮತ; ವಾರ್ಡ್ನಲ್ಲಿ ಸ್ವಪಕ್ಷದ ಕಾರ್ಯಕರ್ತರೂ ಕೈಬಿಟ್ಟರಾ?
ಯೆಮನ್ನಲ್ಲಿ ತೀವ್ರಗೊಂಡ ಸಂಘರ್ಷ: 14 ದಿನಗಳಲ್ಲಿ 57,000 ಮಕ್ಕಳು ಬೀದಿಗೆ, ಕನಿಷ್ಠ 9 ಮಕ್ಕಳ ಬಲಿ ಎಂದ ಯೂನಿಸೆಫ್!
200ಕ್ಕೂ ಹೆಚ್ಚು ಶಂಕಿತರ ಬಂಧನದ ಬೆನ್ನಲ್ಲೇ ‘ಶಹಜಾದ್ ಭಟ್ಟಿ ನೆಟ್ವರ್ಕ್’ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ ಗೃಹ ಸಚಿವಾಲಯ
ಹಿಂಸಾಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, 2,31,000 ಜನರಿಗೆ ತುರ್ತು ನೀರು, ನೈರ್ಮಲ್ಯ ಕಿಟ್ಗಳು ಹಾಗೂ ಮೊಬೈಲ್ ಆರೋಗ್ಯ ತಂಡಗಳ ಮೂಲಕ ನೆರವು ತಲುಪಿಸಲು ತುರ್ತು ಸ್ಪಂದನಾ ಯೋಜನೆಯನ್ನು ವಿಸ್ತರಿಸುತ್ತಿರುವುದಾಗಿ ಯೂನಿಸೆಫ್ ಸ್ಪಷ್ಟಪಡಿಸಿದೆ. ಯುದ್ಧನಿರತ ಎಲ್ಲಾ ಗುಂಪುಗಳು ಅಂತಾರಾಷ್ಟ್ರೀಯ ಮಾನವೀಯ ಕಾನೂನುಗಳನ್ನು ಗೌರವಿಸಬೇಕು ಮತ್ತು ಆಸ್ಪತ್ರೆ ಹಾಗೂ ಶಾಲೆಗಳಂತಹ ನಾಗರಿಕ ಸ್ಥಳಗಳ ಮೇಲೆ ದಾಳಿ ಮಾಡಬಾರದು ಎಂದು ಯೂನಿಸೆಫ್ನ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ಪ್ರಾದೇಶಿಕ ನಿರ್ದೇಶಕ ಎಡ್ವರ್ಡ್ ಬೀಗ್ಬೆಡರ್ ಆಗ್ರಹಿಸಿದ್ದಾರೆ.
