ರಾಜಸ್ಥಾನದ ಬಾಲೋತ್ರಾ ಜಿಲ್ಲೆಯ ಪಚಪದ್ರ ನಿವಾಸಿ ಮಂಗಿಲಾಲ್ ಮೇಘವಾಲ್ (50) ಎಂಬ ರೈತ, ಸೈಟ್ ಮಾರಾಟದಿಂದ ಬಂದಿದ್ದ ₹5 ಲಕ್ಷ ನಗದನ್ನು ಕಳ್ಳತನ ಹಾಗೂ ಕುಟುಂಬದ ಖರ್ಚಿನಿಂದ ರಕ್ಷಿಸಲು ಪ್ಲಾಸ್ಟಿಕ್ ಕವರ್ನಲ್ಲಿ ಸುತ್ತಿ ತಮ್ಮ ಹೊಲದಲ್ಲೇ ಹೂತಿಟ್ಟಿದ್ದರು. ಆದರೆ, ಮರೆವಿನ ಕಾರಣದಿಂದ ಹಣ ಹೂತಿಟ್ಟ ಜಾಗ ಮರೆತುಹೋಗಿದ್ದು, ಸುಮಾರು ಒಂದು ವರ್ಷದ ಬಳಿಕ ಜಮೀನು ಹದಗೊಳಿಸುವಾಗ ಮತ್ತು ಬೇಲಿ ದುರಸ್ತಿ ಮಾಡುವ ಸಂದರ್ಭದಲ್ಲಿ ಈ ಹಣದ ಬ್ಯಾಗ್ ಮೇಲಕ್ಕೆ ಬಂದಿದೆ.
ಆದರೆ, ಅಷ್ಟರಲ್ಲಾಗಲೇ ಗೆದ್ದಲುಗಳು ಬಹುತೇಕ ನೋಟುಗಳನ್ನು ತಿಂದು ಸಂಪೂರ್ಣವಾಗಿ ನಾಶಪಡಿಸಿದ್ದವು. ಹಾನಿಗೊಳಗಾದ ₹500 ನೋಟುಗಳ ತುಂಡುಗಳನ್ನು ಹಿಡಿದುಕೊಂಡು ರೈತನ ಕುಟುಂಬವು ಸ್ಥಳೀಯ ಎಸ್ಬಿಐ (SBI) ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿದರೂ, ನೋಟುಗಳ ದುಸ್ಥಿತಿಯನ್ನು ನೋಡಿ ಬದಲಾಯಿಸಿಕೊಡಲು ಬ್ಯಾಂಕ್ ನಿರಾಕರಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೋ ಒಂದರಲ್ಲಿ ರೈತ ನಾಶವಾದ ನೋಟುಗಳನ್ನು ಹಿಡಿದು ಕಂಗಾಲಾಗಿರುವುದು ಕಂಡುಬಂದಿದೆ.
ವೀಡಿಯೊ ವೀಕ್ಷಿಸಿ:
