ಮುಂಬೈ: ಮಹಾನಗರದ ಮೂಲಸೌಕರ್ಯ, ಟ್ರಾಫಿಕ್ ಬಿಕ್ಕಟ್ಟು ಮತ್ತು ಸ್ಥಳೀಯ ನಾಗರಿಕ ಸಮಸ್ಯೆಗಳ ಕುರಿತು ಧ್ವನಿ ಎತ್ತುವ ಬದಲಾಗಿ, ಮುಂಬೈ ಬಿಜೆಪಿ ನಾಯಕರು ಮತ್ತೆ ಧಾರ್ಮಿಕ ಮತ್ತು ಕೋಮು ಸೂಕ್ಷ್ಮ ವಿಚಾರಗಳನ್ನು ಮುನ್ನೆಲೆಗೆ ತರಲು ಆರಂಭಿಸಿದ್ದಾರೆ. ಮುಂಬರುವ ಬಕ್ರೀದ್ (ಈದ್-ಉಲ್-ಅದ್ಹಾ) ಹಬ್ಬದ ಸಂದರ್ಭದಲ್ಲಿ ವಸತಿ ಸಮುಚ್ಚಯಗಳು ಹಾಗೂ ಚಾಲ್ಗಳಲ್ಲಿ ಸಾರ್ವಜನಿಕವಾಗಿ ಆಡು ಅಥವಾ ಕುರಿಗಳನ್ನು ಬಲಿ ನೀಡುವುದನ್ನು ತಡೆಯಲು ಅಸ್ತಿತ್ವದಲ್ಲಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಮಾಜಿ ಬಿಜೆಪಿ ಸಂಸದ ಕಿರೀಟ್ ಸೋಮಯ್ಯ ಆಗ್ರಹಿಸಿದ್ದಾರೆ. ಈ ಕುರಿತು ಅವರು ಮುಂಬೈ ಮಹಾಪೌರರಾದ ರಿತು ತಾವ್ಡೆ, ಬೃಹನ್ಮುಂಬೈ ಮಹಾನಗರ ಪಾಲಿಕೆ (BMC) ಮತ್ತು ಮುಂಬೈ ಪೊಲೀಸ್ ಕಮಿಷನರ್ಗೆ ಶನಿವಾರ ಪತ್ರ ಬರೆದಿದ್ದಾರೆ.
"Bakri" Goats cannot be slaughtered in residential complexes, housing societies and chawls on the occasion of Bakri Eid
— Kirit Somaiya (@KiritSomaiya) May 17, 2026
I have requested the Mumbai Mayor, BMC & Police Commissioner
We will NOT allow Open Slaughter in the Name of Religious Ceremony pic.twitter.com/PMsALxpCzf
ಬೃಹನ್ಮುಂಬೈ ಮಹಾನಗರ ಪಾಲಿಕೆ (BMC) ಈಗಾಗಲೇ ಹಬ್ಬದ ಆಚರಣೆಗಾಗಿ ವ್ಯವಸ್ಥಿತ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವ ನಡುವೆಯೇ, ಮೇ 16 ರ ದಿನಾಂಕದ ಈ ಪತ್ರದ ಮೂಲಕ ಸೋಮಯ್ಯ ಅವರು ಧಾರ್ಮಿಕ ಆಚರಣೆಗಳ ನೆಪದಲ್ಲಿ ನಿಯಮ ಉಲ್ಲಂಘನೆಯಾಗುತ್ತಿದೆ ಎಂಬ ಆರೋಪ ಹೊರಿಸಿದ್ದಾರೆ. ನಗರದ ನೈರ್ಮಲ್ಯ ಮತ್ತು ಸಾರ್ವಜನಿಕ ಆರೋಗ್ಯದ ನೆಪದಲ್ಲಿ ಹಬ್ಬದ ಸೌಹಾರ್ದತೆಗೆ ಧಕ್ಕೆ ತರುವಂತಹ ಹೊಸ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ದೇವಾಲಯದ ಬಳಿ ಬಡ ವ್ಯಾಪಾರಿಯ ಬಂಧನದ ಬೆನ್ನಲ್ಲೇ ಮುಗಿಬಿದ್ದು ಸಿಹಿ ತಿಂಡಿ ಲೂಟಿ ಮಾಡಿದ ಜನ; ಎತ್ತ ಸಾಗುತ್ತಿದೆ ನಮ್ಮ ನೈತಿಕತೆ?
“ಮಿತಿಮೀರಿದ ಚಮಚಾಗಿರಿ” : ಡಿ.ಕೆ. ಶಿವಕುಮಾರ್ ಅವರನ್ನು ‘ಶಿವ’ನನ್ನಾಗಿ ಬಿಂಬಿಸಿದ ಪತ್ರಿಕೆ; ‘ಹೊಗಳುಭಟ್ಟ’ರ ವಿರುದ್ಧ ಸಾರ್ವಜನಿಕ ಆಕ್ರೋಶ!
ಅಮೆರಿಕ ಶಾಕ್: ಭಾರತದ ವಸ್ತುಗಳಿಗೆ ಶೇ. 12.5 ಹೆಚ್ಚುವರಿ ಸುಂಕ ಪ್ರಸ್ತಾಪ!
ಡಿಕೆ ಶಿವಕುಮಾರ್ ನೇತೃತ್ವದ ನೂತನ ಸರ್ಕಾರಕ್ಕೆ ಇಂದು ಪ್ರಮಾಣ ವಚನ: ಉಪಮುಖ್ಯಮಂತ್ರಿ ಸೇರಿ 13 ಸಚಿವರು ಪ್ರಮಾಣ ವಚನ ಸ್ವೀಕಾರ
ಗಂಗಾ ನದಿಯ ಉಗಮ ಸ್ಥಾನದಲ್ಲೇ ಕುಡಿಯುವ ನೀರಿಗೆ ಹಾಹಾಕಾರ: ಉತ್ತರಾಖಂಡದ ದೇವಪ್ರಯಾಗದಲ್ಲಿ ಗ್ರಾಮಸ್ಥರಿಂದ ಪಂಜಿನ ಮೆರವಣಿಗೆ
“ಆರ್ ಎಸ್ ಎಸ್ ಎಂಬ ಆಧುನಿಕ ಬಸ್ಮಾಸುರ ದೇಶವನ್ನೇ ಸುಡುತ್ತಿದೆ!” ಕಲ್ಲಡ್ಕ ಭಟ್ ಕೋರ್ಟ್ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಕಿಡಿ!
AI ಎಡಿಟ್ ಮಾಡಿ ಬಿಹಾರದಲ್ಲಿ ಅಭಿವೃದ್ಧಿ ತೋರಿಸಲು ಪ್ರಯತ್ನಿಸಿದ ಬಿಜೆಪಿ; ಅಸಲಿಯತ್ತನ್ನು ಬಯಲಿಗೆಳೆದ ನೆಟ್ಟಿಗರು!
‘ಐಐಟಿ ಬಾಬಾ’ ಬಂಧನ: ಆಧ್ಯಾತ್ಮಿಕತೆಯ ಹೆಸರಲ್ಲಿ ಯುವತಿಯರ ಲೈಂಗಿಕ ಕಿರುಕುಳ, ಬ್ಲಾಕ್ಮೇಲ್ ಆರೋಪ!
ದೆಹಲಿ ಅಗ್ನಿ ದುರಂತ: ತಮ್ಮ ಅಂಗಡಿಯ ಲಕ್ಷಾಂತರ ರೂಪಾಯಿ ಮೌಲ್ಯದ ಹಾಸಿಗೆಗಳನ್ನು ರಸ್ತೆಗೆ ಹಾಸಿ 8 ಜನರ ಪ್ರಾಣ ಉಳಿಸಿದ ರಿಯಾಝುದ್ದೀನ್ – ಅರ್ಮಾನ್
ಕೋರ್ಟ್ ಆದೇಶಗಳನ್ನೇ ರಾಜಕೀಯ ಅಸ್ತ್ರವಾಗಿಸಿಕೊಂಡ ಬಿಜೆಪಿ
ಮುಂಬೈನ ಜನನಿಬಿಡ ವಸತಿ ಪ್ರದೇಶಗಳ ಒಳಗೆ ಪ್ರಾಣಿ ಬಲಿ ನೀಡುವುದರ ವಿರುದ್ಧ ಬಾಂಬೆ ಹೈಕೋರ್ಟ್ 2019 ರ ‘ಜೀವ್ ಮೈತ್ರಿ ಟ್ರಸ್ಟ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ’ ಪ್ರಕರಣದಲ್ಲಿ ನೀಡಿದ್ದ ಹಳೆಯ ತೀರ್ಪನ್ನೇ ಬಿಜೆಪಿ ನಾಯಕರು ಈಗ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬ ಟೀಕೆಗಳು ಕೇಳಿಬಂದಿವೆ. ವೈಯಕ್ತಿಕ ವಸತಿ ಫ್ಲಾಟ್ಗಳ ಒಳಗೆ ಕುರಿ ಅಥವಾ ಆಡುಗಳನ್ನು ಕೊಲ್ಲುವುದನ್ನು ನಿಷೇಧಿಸಿರುವ ಹಾಗೂ ಅಧಿಕೃತ ಕಸಾಯಿಖಾನೆ ಅಥವಾ ನಿಗದಿಪಡಿಸಿದ ಸ್ಥಳಗಳಿಂದ 1 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಹೌಸಿಂಗ್ ಸೊಸೈಟಿಗಳಿಗೆ ಪ್ರಾಣಿ ಬಲಿಯ ವಿಶೇಷ ಪರವಾನಗಿ ನೀಡದಂತೆ ನ್ಯಾಯಾಲಯ ಬಿಎಂಸಿಗೆ ನೀಡಿರುವ ಹಳೆಯ ನಿರ್ದೇಶನಗಳನ್ನೇ ಸೋಮಯ್ಯ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮಹಾನಗರದ ರಸ್ತೆಗಳ ದುರಸ್ತಿ, ಕುಡಿಯುವ ನೀರಿನ ಸಮಸ್ಯೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯಂತಹ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳಿಗಿಂತ ಹಬ್ಬದ ಸಂದರ್ಭದಲ್ಲಿ ಇಂತಹ ನಿಯಮಗಳ ಜಾರಿಗೆ ಒತ್ತಾಯಿಸುವುದು ರಾಜಕೀಯ ಪ್ರೇರಿತ ಎಂಬ ಚರ್ಚೆಗಳು ಶುರುವಾಗಿವೆ.
ನಿಯಮಾವಳಿಗಳ ನಡುವೆಯೂ ಅನಗತ್ಯ ವಿವಾದದ ಸೃಷ್ಟಿ?
ವಾಸ್ತವವಾಗಿ, ಬಿಎಂಸಿ ಈಗಾಗಲೇ ನ್ಯಾಯಾಲಯದ ಆದೇಶಗಳಿಗೆ ಪೂರಕವಾಗಿ ಮೇ 28 ರಿಂದ 30 ರವರೆಗೆ ನಿಗದಿಯಾಗಿರುವ ಬಕ್ರೀದ್ ಹಬ್ಬಕ್ಕಾಗಿ ನಗರದಾದ್ಯಂತ 109 ನಿಗದಿತ ಸ್ಥಳಗಳನ್ನು ಗುರುತಿಸಿದೆ. ಈ ಸ್ಥಳಗಳಲ್ಲಿ ಪ್ರಾಣಿ ಬಲಿ ನೀಡಲು ಇಚ್ಛಿಸುವವರು ‘MyBMC’ ಆ್ಯಪ್ ಮೂಲಕ ಮುಂಚಿತವಾಗಿ ಅನುಮತಿ ಪಡೆಯುವ ವ್ಯವಸ್ಥೆಯೂ ಚಾಲ್ತಿಯಲ್ಲಿದೆ. ದನ (ಕೋಣ/ಎಮ್ಮೆ) ಬಲಿಯನ್ನು ಕೇವಲ ದೇವನಾರ್ ಕಸಾಯಿಖಾನೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ಮೇ 17 ರಿಂದ 30 ರವರೆಗೆ ದೇವನಾರ್ನಲ್ಲಿ ಪ್ರಾಣಿ ಮಾರುಕಟ್ಟೆ ಕಾರ್ಯನಿರ್ವಹಿಸಲಿದ್ದು, ಅಲ್ಲಿ 500 ಕ್ಕೂ ಹೆಚ್ಚು ಪೊಲೀಸರು ಮತ್ತು 200 ಸೆಕ್ಯೂರಿಟಿ ಗಾರ್ಡ್ಗಳ ಭದ್ರತೆ ಒದಗಿಸಲಾಗಿದೆ. ಹಬ್ಬದ ದಿನಗಳಲ್ಲಿ ಉತ್ಪತ್ತಿಯಾಗುವ ಸುಮಾರು 7,500 ಮೆಟ್ರಿಕ್ ಟನ್ ತ್ಯಾಜ್ಯ ವಿಲೇವಾರಿಗೆ 200 ಕ್ಕೂ ಹೆಚ್ಚು ನೈರ್ಮಲ್ಯ ಕಾರ್ಮಿಕರನ್ನು ನಿಯೋಜಿಸಲಾಗಿದ್ದು, 24×7 ನಿಯಂತ್ರಣ ಕೊಠಡಿಯನ್ನು ತೆರೆಯಲಾಗಿದೆ.
ಯಾವುದೇ ಹೌಸಿಂಗ್ ಸೊಸೈಟಿ ಅಥವಾ ಖಾಸಗಿ ಜಾಗದಲ್ಲಿ ಪ್ರಾಣಿ ಬಲಿ ನೀಡಬೇಕಾದರೆ ಆಯಾ ವಾರ್ಡ್ ಆಫೀಸರ್ ಹಾಗೂ ಸೊಸೈಟಿಯ ಆಕ್ಷೇಪಣಾ ರಹಿತ ಪತ್ರ (NOC) ಕಡ್ಡಾಯವಾಗಿದ್ದು, ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದರೆ ಇಂತಹ ಎನ್ಒಸಿಗಳನ್ನು ರದ್ದುಪಡಿಸುವ ಅಧಿಕಾರ ಪಾಲಿಕೆಗಿದೆ. ಇಷ್ಟೆಲ್ಲಾ ನಿಯಮಗಳು ಜಾರಿಯಲ್ಲಿದ್ದರೂ, ಕಿರೀಟ್ ಸೋಮಯ್ಯ ಅವರ ಪತ್ರವು ಹಬ್ಬದ ಮುನ್ನ ಸಾರ್ವಜನಿಕ ವಲಯದಲ್ಲಿ ಅನಗತ್ಯ ಧ್ರುವೀಕರಣಕ್ಕೆ ಕಾರಣವಾಗುತ್ತಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
