ರಾಷ್ಟ್ರೀಯ ಸುದ್ದಿ

“ವೋಟ್ ಚೋರಿ, ಸರ್ಕಾರ ಚೋರಿ ನಂತರ ಇದೀಗ ಸೀಟ್ ಚೋರಿ; BJP – EC ಜುಗಲ್‌ಬಂದಿ” – ರಾಹುಲ್ ಗಾಂಧಿ

Reading…
Follow Us

ದೇಶದಲ್ಲಿ ನಡೆಯುತ್ತಿರುವ ರಾಜ್ಯಸಭಾ ಚುನಾವಣೆಯ ನಾಮಪತ್ರ ಪರಿಶೀಲನೆ ಪ್ರಕ್ರಿಯೆಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಚುನಾವಣಾ ಆಯೋಗ (ಇಸಿಐ) ಶಾಮೀಲಾಗಿವೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಮಧ್ಯಪ್ರದೇಶ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ವೇಳೆ ಚುನಾವಣಾ ಆಯೋಗವು ಎರಡು ಬೇರೆ ಬೇರೆ ಮಾನದಂಡಗಳನ್ನು ಬಳಸಿದೆ ಎಂದು ಆರೋಪಿಸಿರುವ ಅವರು, ಇದು ಪ್ರಜಾಪ್ರಭುತ್ವದಲ್ಲಿ ನಡೆಯುತ್ತಿರುವ ‘ಸೀಟ್ ಚೋರಿ’ (ಸ್ಥಾನಗಳ ಕಳ್ಳತನ) ಎಂದು ಕಟುವಾಗಿ ಟೀಕಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಮತ ಚೋರಿ ಮತ್ತು ಸರ್ಕಾರ ಚೋರಿಯ ನಂತರ, ಈಗ ಬಿಜೆಪಿ-ಚುನಾವಣಾ ಆಯೋಗದ ಜುಗಲ್‌ಬಂದಿಯು ಸ್ಪರ್ಧೆ ಆರಂಭವಾಗುವ ಮುನ್ನವೇ ‘ಸೀಟ್ ಚೋರಿ’ ಮಾಡುವ ಮೂಲಕ ಸ್ಪರ್ಧೆಯನ್ನು ಮುಗಿಸಿದೆ. ಬಿಜೆಪಿಗೆ ಚುನಾವಣೆ ಗೆಲ್ಲುವುದಕ್ಕಿಂತ ಅದನ್ನು ಮೊದಲೇ ಫಿಕ್ಸ್ ಮಾಡುವುದು ತುಂಬಾ ಸುಲಭದ ಕೆಲಸವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕೃತಗೊಂಡಿರುವುದು ಮತ್ತು ಜಾರ್ಖಂಡ್‌ನಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಪರಿಮಳ್ ನತ್ವಾಣಿ ಅವರ ನಾಮಪತ್ರ ಅಂಗೀಕಾರವಾಗಿರುವುದು ಈಗ ಈ ರಾಜಕೀಯ ಜಿದ್ದಾಜಿದ್ದಿಗೆ ಮುಖ್ಯ ಕಾರಣವಾಗಿದೆ.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಚುನಾವಣಾಧಿಕಾರಿ ಅರವಿಂದ್ ಶರ್ಮಾ ಅವರು ತಿರಸ್ಕರಿಸಿದ್ದಾರೆ. ಹೈದರಾಬಾದ್‌ನ ನ್ಯಾಯಾಲಯವೊಂದರಲ್ಲಿ ಇರುವ ಖಾಸಗಿ ದೂರಿಗೆ ಸಂಬಂಧಿಸಿದ ಮಾಹಿತಿ ಹಾಗೂ ಅಪೂರ್ಣ ಅಫಿಡವಿಟ್ ಸಲ್ಲಿಕೆಯನ್ನು ನಾಮಪತ್ರ ತಿರಸ್ಕಾರಕ್ಕೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಮೀನಾಕ್ಷಿ ನಟರಾಜನ್ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಮತ್ತು ನ್ಯಾಯಾಲಯವು ಯಾವುದೇ ಚಾರ್ಜ್‌ಶೀಟ್ ಹಾಕಿಲ್ಲ. ಕೇವಲ ಖಾಸಗಿ ದೂರಿನ ನೋಟಿಸ್ ಅನ್ನು ಬಾಕಿ ಇರುವ ಕ್ರಿಮಿನಲ್ ಪ್ರಕರಣ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂಬುದು ಕಾಂಗ್ರೆಸ್ ವಾದ. ಈ ತಿರಸ್ಕಾರದ ಬೆನ್ನಲ್ಲೇ ಮಧ್ಯಪ್ರದೇಶದ ಮೂರೂ ಸ್ಥಾನಗಳಲ್ಲಿ ಬಿಜೆಪಿಯ ತರುಣ್ ಚುಗ್, ರಜನೀಶ್ ಅಗರ್ವಾಲ್ ಮತ್ತು ಮಹೇಶ್ ಕೇವತ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇತ್ತ ಜಾರ್ಖಂಡ್‌ನಲ್ಲಿ ಬಿಜೆಪಿ ಬೆಂಬಲಿತ ಉದ್ಯಮಿ ಪರಿಮಳ್ ನತ್ವಾಣಿ ಅವರ ನಾಮಪತ್ರದಲ್ಲಿ ತಪ್ಪುಗಳಿದ್ದರೂ ಅವರಿಗೆ ಸರಿಪಡಿಸಿಕೊಳ್ಳಲು ಕಾಲಾವಕಾಶ ನೀಡಲಾಗಿತ್ತು ಎಂದು ಕಾಂಗ್ರೆಸ್ ಆರೋಪಿಸಿದೆ. ನತ್ವಾಣಿ ಅವರ ಅಫಿಡವಿಟ್‌ನಲ್ಲಿ ಆಸ್ತಿ ವಿವರ, ಕಂಪನಿಗಳ ಮಾಹಿತಿ ಮತ್ತು ಪತ್ನಿಯ ವಿವರಗಳ ಕಾಲಂಗಳು ಅಪೂರ್ಣವಾಗಿದ್ದವು. ಆದರೂ ಚುನಾವಣಾಧಿಕಾರಿಗಳು ಅವರ ನಾಮಪತ್ರವನ್ನು ಅಂಗೀಕರಿಸಿದ್ದಾರೆ. “ವಿರೋಧ ಪಕ್ಷಕ್ಕೊಂದು ನ್ಯಾಯ, ಆಡಳಿತ ಪಕ್ಷಕ್ಕೊಂದು ನ್ಯಾಯವೇ?” ಎಂದು ಕಾಂಗ್ರೆಸ್ ನಾಯಕರಾದ ಅಭಿಷೇಕ್ ಮನು ಸಿಂಘ್ವಿ ಮತ್ತು ಕೆ.ಸಿ. ವೇಣುಗೋಪಾಲ್ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ನಿಯೋಗವು ಈ ಕುರಿತು ಚುನಾವಣಾ ಆಯೋಗವನ್ನು ಭೇಟಿ ಮಾಡಿ ಪ್ರತಿಭಟನೆ ನಡೆಸಿದೆ. ಮತ್ತೊಂದೆಡೆ, ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ ಅವರು ಮಧ್ಯಪ್ರದೇಶ ಚುನಾವಣಾಧಿಕಾರಿಯ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಸುಪ್ರೀಂ ಕೋರ್ಟ್‌ನ ರಜಾಕಾಲದ ಪೀಠವು ಈ ಅರ್ಜಿಯನ್ನು ಜೂನ್ 12 ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲು ಒಪ್ಪಿಕೊಂಡಿದೆ. 

How does this story make you feel?
Share:

About Us

ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ. ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'. ಬ್ರೇಕಿಂಗ್ ನ್ಯೂಸಿನ ನಾಗಾಲೋಟದ ಸ್ಪರ್ಧೆಯಲ್ಲಿ ನಾವಿಲ್ಲ!! ನಾ ಮುಂದು, ನಮ್ಮಲ್ಲೇ ಮೊದಲೆಂಬ ಯೋಚನೆ ಸುಳಿಯಲ್ಲ!! ಸುದ್ದಿ ಎಷ್ಟು ಕೊಟ್ಟಿದ್ದೇವೆ ಎನ್ನುವುದಕ್ಕಿಂತ ಏನು ಕೊಟ್ಟಿದ್ದೇವೆ ಎಂಬ ಗುಣಮಟ್ಟದ ಸಿದ್ಧಾಂತವನ್ನು ಮೈಗೂಡಿಸಿಕೊಂಡು ತೆವಳುತ್ತಾ ವರದಿಗಾರ ಸಾಗುತ್ತಿದೆ.

ನಮ್ಮ ಬಗ್ಗೆ ತಿಳಿಯಿರಿ →
Join our WhatsApp Channel Get every Varadigara story instantly
Follow Us

More Stories

ಸಾಮಾಜಿಕ ತಾಣ

AI ಎಡಿಟ್ ಮಾಡಿ ಬಿಹಾರದಲ್ಲಿ ಅಭಿವೃದ್ಧಿ ತೋರಿಸಲು ಪ್ರಯತ್ನಿಸಿದ ಬಿಜೆಪಿ; ಅಸಲಿಯತ್ತನ್ನು ಬಯಲಿಗೆಳೆದ ನೆಟ್ಟಿಗರು!

ರಾಷ್ಟ್ರೀಯ ಸುದ್ದಿ

ಪಂಜಾಬ್‌ ಸ್ಥಳೀಯ ಸಂಸ್ಥೆ ಚುನಾವಣೆ: ‘ಆಪ್’ ಭರ್ಜರಿ ಜಯಭೇರಿ; ‘ವೋಟ್ ಚೋರಿ’ ಆರೋಪ ಹೊರಿಸಿದ ಬಿಜೆಪಿ!

ರಾಷ್ಟ್ರೀಯ ಸುದ್ದಿ

“ನಿಮ್ಮದೇ ಹೋಟೆಲ್‌ನಲ್ಲಿ ಮಟನ್ ಮಸಾಲಾ ಮಾರುವುದು ನೆನಪಿಲ್ಲವೇ?” : ‘ವರ್ಚುವಲ್ ಬಕ್ರೀದ್’ ಸಲಹೆ ನೀಡಿದ್ದ ಬಿಜೆಪಿಯ ನಿತೇಶ್ ರಾಣೆಗೆ ಸ್ವಪಕ್ಷ  ನಾಯಕನ ಬಹಿರಂಗ ಸವಾಲು

ರಾಷ್ಟ್ರೀಯ ಸುದ್ದಿ

ರಾಜಕೀಯ ನಿರ್ಧಾರಗಳ ವಿಮರ್ಶೆ ತಡೆಯಲು ಸಾಧ್ಯವಿಲ್ಲ: ರಾಘವ್ ಚಡ್ಡಾಗೆ ಮಧ್ಯಂತರ ಪರಿಹಾರ ನಿರಾಕರಿಸಿದ ದೆಹಲಿ ಹೈಕೋರ್ಟ್

ಕಾಣಿಸದ್ದು - ಕೇಳಿಸದ್ದು

ಉತ್ತರ ಪ್ರದೇಶ: ವಾರ್ಡ್ ಅಭಿವೃದ್ಧಿ ನಿರ್ಲಕ್ಷ್ಯದ ವಿರುದ್ಧ ತಲೆ ಬೋಳಿಸಿ ಪ್ರತಿಭಟಿಸಿದ ಬಿಜೆಪಿ ಕೌನ್ಸಿಲರ್

From Across Varadigara

ರಾಷ್ಟ್ರೀಯ ಸುದ್ದಿ

ದೆಹಲಿಯ ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ

ರಾಷ್ಟ್ರೀಯ ಸುದ್ದಿ

ಗುಜರಾತ್: ₹2,000 ಬಾಡಿಗೆ ಹಣದ ಬದಲು ಹೆಂಡತಿ, 13 ವರ್ಷದ ಮಗಳ ಮೇಲೆಯೇ ಅತ್ಯಾಚಾರಕ್ಕೆ ಅವಕಾಶ ಮಾಡಿಕೊಟ್ಟ ವ್ಯಕ್ತಿ ಬಂಧನ

ರಾಜ್ಯ ಸುದ್ದಿ

ಕೇರಳ ನೂತನ ಸಿಎಂ ಸತೀಶನ್ ಗೆ ಸಿದ್ದರಾಮಯ್ಯ ಅಭಿನಂದನೆ

ರಾಜ್ಯ ಸುದ್ದಿ

“ಅಲ್ಲಿ ಇನ್ನು ಮುಂದೆ ಕೋಮುಗಲಭೆ ನಡೆಯಬಾರದಷ್ಟೇ”; ಜಿಲ್ಲಾಧಿಕಾರಿಯಾಗಿದ್ದಾಗ ಸಿದ್ದರಾಮಯ್ಯ ನೀಡಿದ್ದ ಸೂಚನೆಯನ್ನು ಹಂಚಿಕೊಂಡ ಸಸಿಕಾಂತ್ ಸೆಂಥಿಲ್

ರಾಜ್ಯ ಸುದ್ದಿ

ಡಿಕೆ ಶಿವಕುಮಾರ್‌ ನೇತೃತ್ವದ ನೂತನ ಸರ್ಕಾರಕ್ಕೆ ಇಂದು ಪ್ರಮಾಣ ವಚನ: ಉಪಮುಖ್ಯಮಂತ್ರಿ ಸೇರಿ 13 ಸಚಿವರು ಪ್ರಮಾಣ ವಚನ ಸ್ವೀಕಾರ

ರಾಷ್ಟ್ರೀಯ ಸುದ್ದಿ

NEET ಪ್ರಶ್ನೆಪತ್ರಿಕೆ ಸೋರಿಕೆ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಜಾಕ್ಕೆ ರಾಹುಲ್ ಗಾಂಧಿ ಆಗ್ರಹ

ರಾಷ್ಟ್ರೀಯ ಸುದ್ದಿ

ಬಿಹಾರದಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಆತಂಕಕಾರಿ ಹೆಚ್ಚಳ: ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ವಿರುದ್ಧ ತೇಜಸ್ವಿ ಯಾದವ್ ವಾಗ್ದಾಳಿ

ಸಾಮಾಜಿಕ ತಾಣ

AI ಎಡಿಟ್ ಮಾಡಿ ಬಿಹಾರದಲ್ಲಿ ಅಭಿವೃದ್ಧಿ ತೋರಿಸಲು ಪ್ರಯತ್ನಿಸಿದ ಬಿಜೆಪಿ; ಅಸಲಿಯತ್ತನ್ನು ಬಯಲಿಗೆಳೆದ ನೆಟ್ಟಿಗರು!

ರಾಷ್ಟ್ರೀಯ ಸುದ್ದಿ

“ಗಂಗಾ ನದಿಗೆ ಮಾಂಸಾಹಾರದ ತ್ಯಾಜ್ಯ ಎಸೆಯುವುದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ”: ವಾರಣಾಸಿ ಇಫ್ತಾರ್ ಪ್ರಕರಣದ ಎಂಟು ಮಂದಿಗೆ ಅಲಹಾಬಾದ್ ಹೈಕೋರ್ಟ್‌ನಿಂದ ಜಾಮೀನು

ರಾಷ್ಟ್ರೀಯ ಸುದ್ದಿ

ಮುಂಬೈ: ಬಕ್ರೀದ್ ರಾಜಕೀಯ ಕೈಗೆತ್ತಿಕೊಂಡ ಬಿಜೆಪಿ; ವಸತಿ ಪ್ರದೇಶಗಳಲ್ಲಿ ಪ್ರಾಣಿ ಬಲಿ ನಿಯಂತ್ರಣಕ್ಕೆ ಕಿರೀಟ್ ಸೋಮಯ್ಯ ಪತ್ರ

ಕಾಣಿಸದ್ದು - ಕೇಳಿಸದ್ದು

ಉತ್ತರ ಪ್ರದೇಶ: ವಾರ್ಡ್ ಅಭಿವೃದ್ಧಿ ನಿರ್ಲಕ್ಷ್ಯದ ವಿರುದ್ಧ ತಲೆ ಬೋಳಿಸಿ ಪ್ರತಿಭಟಿಸಿದ ಬಿಜೆಪಿ ಕೌನ್ಸಿಲರ್

ರಾಷ್ಟ್ರೀಯ ಸುದ್ದಿ

ಪಂಜಾಬ್‌ ಸ್ಥಳೀಯ ಸಂಸ್ಥೆ ಚುನಾವಣೆ: ‘ಆಪ್’ ಭರ್ಜರಿ ಜಯಭೇರಿ; ‘ವೋಟ್ ಚೋರಿ’ ಆರೋಪ ಹೊರಿಸಿದ ಬಿಜೆಪಿ!

ರಾಜ್ಯ ಸುದ್ದಿ

“ಸಂವಿಧಾನವೇ ನನಗೆ ಧರ್ಮ, ಜನರೇ ನನ್ನ ಪಾಲಿನ ದೇವರು” : ಸಿದ್ದರಾಮಯ್ಯ

ರಾಷ್ಟ್ರೀಯ ಸುದ್ದಿ

ಪುಣೆ ಆಸ್ಪತ್ರೆಯಲ್ಲಿ ಬಾಂಬ್ ಆತಂಕ: ಆರೋಪಿ ಶಿವಾಜಿ ರಾಥೋಡ್‌ನನ್ನು ಬಂಧಿಸಿದ ಮಹಾರಾಷ್ಟ್ರ ಎಟಿಎಸ್‌

ರಾಷ್ಟ್ರೀಯ ಸುದ್ದಿ

“ನಿಮ್ಮದೇ ಹೋಟೆಲ್‌ನಲ್ಲಿ ಮಟನ್ ಮಸಾಲಾ ಮಾರುವುದು ನೆನಪಿಲ್ಲವೇ?” : ‘ವರ್ಚುವಲ್ ಬಕ್ರೀದ್’ ಸಲಹೆ ನೀಡಿದ್ದ ಬಿಜೆಪಿಯ ನಿತೇಶ್ ರಾಣೆಗೆ ಸ್ವಪಕ್ಷ  ನಾಯಕನ ಬಹಿರಂಗ ಸವಾಲು

ಕಾಣಿಸದ್ದು - ಕೇಳಿಸದ್ದು

‘ಐಐಟಿ ಬಾಬಾ’ ಬಂಧನ: ಆಧ್ಯಾತ್ಮಿಕತೆಯ ಹೆಸರಲ್ಲಿ ಯುವತಿಯರ ಲೈಂಗಿಕ ಕಿರುಕುಳ, ಬ್ಲಾಕ್‌ಮೇಲ್ ಆರೋಪ!

ರಾಷ್ಟ್ರೀಯ ಸುದ್ದಿ

ಮುಂಬೈ: ಬಕ್ರೀದ್ ಆಡುಗಳಿಗೆ ಪ್ರತಿಯಾಗಿ ಹಂದಿ ತಂದ ಹಿಂದುತ್ವ ಸಂಘಟನೆಗಳು; ಸಾಮಾಜಿಕ ಕಾಳಜಿಯ ಹೆಸರಲ್ಲಿ ಕೋಮು ಪ್ರಚೋದನೆ?

ರಾಷ್ಟ್ರೀಯ ಸುದ್ದಿ

ಕೇರಳದ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಆಯ್ಕೆ ಮಾಡಲು ಕಾಂಗ್ರೆಸ್ ನಿರ್ಧಾರ

ರಾಷ್ಟ್ರೀಯ ಸುದ್ದಿ

ಬಿಜೆಪಿಯನ್ನು ದೆಹಲಿಯ ಅಧಿಕಾರದಿಂದ ಕೆಳಗಿಳಿಸುವ ಹೋರಾಟ ಮುಂದುವರಿಯುತ್ತದೆ: ಮಮತಾ ಬ್ಯಾನರ್ಜಿ ಶಪಥ

ರಾಷ್ಟ್ರೀಯ ಸುದ್ದಿ

ಅಧಿಕಾರ ಹಸ್ತಾಂತರದ ಬೆನ್ನಲ್ಲೇ ಸಿದ್ದರಾಮಯ್ಯ ಕಾರ್ಯವೈಖರಿಗೆ ಸಂಜಯ್ ರಾವುತ್ ಶ್ಲಾಘನೆ: “ಇಂತಹ ನಾಯಕತ್ವ ಭಾರತೀಯ ರಾಜಕಾರಣದಲ್ಲಿ ಅಪರೂಪ, ಅವರು ನಿಜವಾದ ಜನನಾಯಕ”