ಮುಂಬೈ ಸಮೀಪದ ಮೀರಾ ರೋಡ್ನ ವಸತಿ ಸಮುಚ್ಚಯವೊಂದರಲ್ಲಿ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಆಡುಗಳನ್ನು ತಂದಿಟ್ಟ ವಿಚಾರವಾಗಿ ಆರಂಭವಾದ ವಿವಾದ, ತೀವ್ರ ಕೋಮು ಸಂಘರ್ಷಕ್ಕೆ ತಿರುಗಿ ಈಗ ಪೊಲೀಸರ ಸಕಾಲಿಕ ಹಸ್ತಕ್ಷೇಪದಿಂದ ಹತೋಟಿಗೆ ಬಂದಿದೆ. ಪೂನಂ ಎಸ್ಟೇಟ್ ಕ್ಲಸ್ಟರ್ ಒನ್ ವಸತಿ ಸಮುಚ್ಚಯದಲ್ಲಿ ಮೇ 26, 2026 ರಂದು ನಡೆದ ಜಟಾಪಟಿಯ ವೇಳೆ ಹಿಂದೂ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆಯ ಭಾಗವಾಗಿ ಜೀವಂತ ಹಂದಿಯೊಂದನ್ನು ತಂದಿಟ್ಟಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿತ್ತು. ನೈರ್ಮಲ್ಯ ಮತ್ತು ಪ್ರಾಣಿ ಕಲ್ಯಾಣದ ಹೆಸರಿನಲ್ಲಿ ಆರಂಭವಾದ ಪ್ರತಿಭಟನೆ, ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಹಂತಕ್ಕೆ ತಲುಪಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ವಸತಿ ಸಮುಚ್ಚಯದಲ್ಲಿ ಮುಸ್ಲಿಂ ನಿವಾಸಿಗಳು ಹಬ್ಬದ ಹಿನ್ನೆಲೆಯಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ಆಡುಗಳನ್ನು ತಂದಿರಿಸಿದಾಗ ಸ್ಥಳೀಯ ಕೆಲವು ಹಿಂದೂ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಜನನಿಬಿಡ ಪ್ರದೇಶದಲ್ಲಿ ಪ್ರಾಣಿಗಳನ್ನು ಇಡುವುದರಿಂದ ವಾಸನೆ, ತ್ಯಾಜ್ಯ ಮತ್ತು ಆರೋಗ್ಯದ ಸಮಸ್ಯೆಗಳು ಎದುರಾಗುತ್ತವೆ ಎಂದು ಅವರು ದೂರಿದ್ದರು. ಅಲ್ಲದೆ ವಸತಿ ಪ್ರದೇಶಗಳಲ್ಲಿ ಪ್ರಾಣಿಗಳನ್ನು ಇರಿಸುವುದಕ್ಕೆ ಮುಂಬೈ ಹೈಕೋರ್ಟ್ ವಿಧಿಸಿರುವ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾಗಿತ್ತು. ಈ ದೂರಿನ ಅನ್ವಯ ನಗರ ಪಾಲಿಕೆ ಅಧಿಕಾರಿಗಳು ಶೆಡ್ ತೆರವುಗೊಳಿಸಿದ್ದರು. ಆದರೆ, ಮತ್ತೆ ಅಲ್ಲಿ ಶೆಡ್ ನಿರ್ಮಿಸಲಾಗಿದೆ ಎಂಬ ವದಂತಿ ಹರಡುತ್ತಿದ್ದಂತೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಹನುಮಾನ್ ಚಾಲೀಸಾ ಪಠಣ ಹಾಗೂ ಘೋಷಣೆಗಳನ್ನು ಕೂಗಲಾರಂಭಿಸಿದರು. ಈ ವೇಳೆ ನಡೆದ ಗಲಾಟೆಯಲ್ಲಿ 3 ಜನರು ಗಾಯಗೊಂಡಿದ್ದರು.
Location: Mira Road, Mumbai
Activists from a Hindutva organization brought a pig into Poonam Cluster Society to protest goats kept there for Eid al-Adha. Note: these activists are primarily targeting and harassing the Muslim families living in the society. pic.twitter.com/tHmuIGYGWs— The Muslim (@TheMuslim786) May 26, 2026
ಕಾಣಿಸದ್ದು - ಕೇಳಿಸದ್ದುಗಂಗಾ ನದಿಯ ಉಗಮ ಸ್ಥಾನದಲ್ಲೇ ಕುಡಿಯುವ ನೀರಿಗೆ ಹಾಹಾಕಾರ: ಉತ್ತರಾಖಂಡದ ದೇವಪ್ರಯಾಗದಲ್ಲಿ ಗ್ರಾಮಸ್ಥರಿಂದ ಪಂಜಿನ ಮೆರವಣಿಗೆ
ರಾಜ್ಯ ಸುದ್ದಿ“ಮಿತಿಮೀರಿದ ಚಮಚಾಗಿರಿ” : ಡಿ.ಕೆ. ಶಿವಕುಮಾರ್ ಅವರನ್ನು ‘ಶಿವ’ನನ್ನಾಗಿ ಬಿಂಬಿಸಿದ ಪತ್ರಿಕೆ; ‘ಹೊಗಳುಭಟ್ಟ’ರ ವಿರುದ್ಧ ಸಾರ್ವಜನಿಕ ಆಕ್ರೋಶ!
ರಾಜ್ಯ ಸುದ್ದಿ“ಆರ್ ಎಸ್ ಎಸ್ ಎಂಬ ಆಧುನಿಕ ಬಸ್ಮಾಸುರ ದೇಶವನ್ನೇ ಸುಡುತ್ತಿದೆ!” ಕಲ್ಲಡ್ಕ ಭಟ್ ಕೋರ್ಟ್ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಕಿಡಿ!
ಸಾಮಾಜಿಕ ತಾಣAI ಎಡಿಟ್ ಮಾಡಿ ಬಿಹಾರದಲ್ಲಿ ಅಭಿವೃದ್ಧಿ ತೋರಿಸಲು ಪ್ರಯತ್ನಿಸಿದ ಬಿಜೆಪಿ; ಅಸಲಿಯತ್ತನ್ನು ಬಯಲಿಗೆಳೆದ ನೆಟ್ಟಿಗರು!
ಅಂತಾರಾಷ್ಟ್ರೀಯಅಮೆರಿಕ ಶಾಕ್: ಭಾರತದ ವಸ್ತುಗಳಿಗೆ ಶೇ. 12.5 ಹೆಚ್ಚುವರಿ ಸುಂಕ ಪ್ರಸ್ತಾಪ!
ಕಾಣಿಸದ್ದು - ಕೇಳಿಸದ್ದು‘ಐಐಟಿ ಬಾಬಾ’ ಬಂಧನ: ಆಧ್ಯಾತ್ಮಿಕತೆಯ ಹೆಸರಲ್ಲಿ ಯುವತಿಯರ ಲೈಂಗಿಕ ಕಿರುಕುಳ, ಬ್ಲಾಕ್ಮೇಲ್ ಆರೋಪ!
ರಾಜ್ಯ ಸುದ್ದಿಡಿಕೆ ಶಿವಕುಮಾರ್ ನೇತೃತ್ವದ ನೂತನ ಸರ್ಕಾರಕ್ಕೆ ಇಂದು ಪ್ರಮಾಣ ವಚನ: ಉಪಮುಖ್ಯಮಂತ್ರಿ ಸೇರಿ 13 ಸಚಿವರು ಪ್ರಮಾಣ ವಚನ ಸ್ವೀಕಾರ
ಸಾಮಾಜಿಕ ತಾಣದೇವಾಲಯದ ಬಳಿ ಬಡ ವ್ಯಾಪಾರಿಯ ಬಂಧನದ ಬೆನ್ನಲ್ಲೇ ಮುಗಿಬಿದ್ದು ಸಿಹಿ ತಿಂಡಿ ಲೂಟಿ ಮಾಡಿದ ಜನ; ಎತ್ತ ಸಾಗುತ್ತಿದೆ ನಮ್ಮ ನೈತಿಕತೆ?
ಕಾಣಿಸದ್ದು - ಕೇಳಿಸದ್ದುದೆಹಲಿ ಅಗ್ನಿ ದುರಂತ: ತಮ್ಮ ಅಂಗಡಿಯ ಲಕ್ಷಾಂತರ ರೂಪಾಯಿ ಮೌಲ್ಯದ ಹಾಸಿಗೆಗಳನ್ನು ರಸ್ತೆಗೆ ಹಾಸಿ 8 ಜನರ ಪ್ರಾಣ ಉಳಿಸಿದ ರಿಯಾಝುದ್ದೀನ್ – ಅರ್ಮಾನ್
ಪ್ರತಿಭಟನೆಯ ತೀವ್ರತೆ ಹೆಚ್ಚಾದಂತೆ, ಕಾರ್ಯಕರ್ತರು ಸೊಸೈಟಿಯ ಗೇಟ್ ಬಳಿ ಹಂದಿಯೊಂದನ್ನು ತಂದು ನಿಲ್ಲಿಸಿದರು. ಇದನ್ನು ‘ವರಾಹ ಪೂಜೆ’ಗೆ ತರಲಾಗಿದೆ ಎಂದು ಸಮರ್ಥಿಸಿಕೊಳ್ಳಲು ಯತ್ನಿಸಲಾಯಿತಾದರೂ, ಇದು ಮುಸ್ಲಿಂ ನಿವಾಸಿಗಳು ಆಡುಗಳನ್ನು ತಂದಿದ್ದಕ್ಕೆ ಪ್ರತಿಯಾಗಿ, ಅವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಹೂಡಿದ ಕುತಂತ್ರ ಎಂಬುದು ನಂತರ ಹಂದಿ ತಂದ ಕಿಡಿಗೇಡಿ India Today ವರದಿಗಾರನೊಂದಿಗೆ ಮಾತನಾಡಿದಾಗ ಸ್ಪಷ್ಟವಾಗಿತ್ತು. ಪರಿಸ್ಥಿತಿ ಕೈಮೀರುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು, ಸೊಸೈಟಿ ಆವರಣದಲ್ಲಿದ್ದ ಆಡುಗಳನ್ನು ಹಾಗೂ ಪ್ರತಿಭಟನೆಗೆ ಬಳಸಲಾಗಿದ್ದ ಹಂದಿಯನ್ನು ವಶಕ್ಕೆ ಪಡೆದು ಅಲ್ಲಿಂದ ತೆರವುಗೊಳಿಸಿದ್ದಾರೆ. ಸದ್ಯ ಇಡೀ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮೂಲಕ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಹತೋಟಿಗೆ ತರಲಾಗಿದೆ.
ಈ ಇಡೀ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಪ್ರತಿಭಟನಾಕಾರರ ದ್ವಂದ್ವ ನಿಲುವು ಮತ್ತು ಸೋಗಲಾಡಿತನ ಎದ್ದು ಕಾಣುತ್ತದೆ. ವಸತಿ ಪ್ರದೇಶದಲ್ಲಿ ಆಡುಗಳಿಂದ ನೈರ್ಮಲ್ಯ ಹಾಳಾಗುತ್ತದೆ ಎಂಬುದು ಅವರ ನಿಜವಾದ ಕಾಳಜಿಯಾಗಿದ್ದರೆ, ಅದೇ ಜಾಗಕ್ಕೆ ಮತ್ತೊಂದು ಪ್ರಾಣಿಯನ್ನು ತಂದು ಗದ್ದಲ ಎಬ್ಬಿಸಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಮೂಡುತ್ತದೆ. ಜನನಿಬಿಡ ವಸತಿ ಪ್ರದೇಶಕ್ಕೆ ಹಂದಿಯನ್ನು ತರುವುದರಿಂದ ಉಂಟಾಗುವ ಗಲೀಜು ಮತ್ತು ಸಾಂಕ್ರಾಮಿಕ ರೋಗಗಳ ಭೀತಿ, ಇವರದ್ದೇ ಆದ ನೈರ್ಮಲ್ಯದ ವಾದಕ್ಕೆ ತದ್ವಿರುದ್ಧವಾಗಿದೆ. ಮತ್ತೊಂದೆಡೆ, ಭಯದಿಂದ ಕಿರುಚಾಡುತ್ತಿದ್ದ ಆ ಹಂದಿಯ ಸ್ಥಿತಿ, ಇವರ ‘ಪ್ರಾಣಿ ಪ್ರೇಮ’ ಹಾಗೂ ಪ್ರಾಣಿ ರಕ್ಷಣೆಯ ವಾದ ಕೇವಲ ಸೋಗಲಾಡಿತನ ಎಂಬುದನ್ನು ಸಾಬೀತುಪಡಿಸಿದೆ.. ಇದು ಸಾಮಾಜಿಕ ಕಾಳಜಿಯ ಹೋರಾಟವಾಗಿರದೆ, ಕೇವಲ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಸಂಘರ್ಷ ಸೃಷ್ಟಿಸುವ ರಾಜಕೀಯ ತಂತ್ರವಾಗಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿವೆ.
ಸಾರ್ವಜನಿಕ ಸುರಕ್ಷತೆ ಮತ್ತು ನೈರ್ಮಲ್ಯದ ದೃಷ್ಟಿಯಿಂದ ಧಾರ್ಮಿಕ ಆಚರಣೆಗಳ ಪ್ರಾಣಿ ಬಲಿಯನ್ನು ವಸತಿ ಪ್ರದೇಶಗಳ ಬದಲು ನಿಯೋಜಿತ ಕೇಂದ್ರಗಳಲ್ಲೇ ನಡೆಸಬೇಕು ಎಂದು ಮುಂಬೈ ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಈ ನಿಯಮ ಎಲ್ಲ ಸಮುದಾಯಗಳಿಗೂ ಸಮಾನವಾಗಿ ಅನ್ವಯಿಸುತ್ತದೆ. ಮುಸ್ಲಿಂ ಮುಖಂಡರು ಬೇರೆ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ಆಗುವ ಸಾರ್ವಜನಿಕ ಅಡಚಣೆಗಳನ್ನು ಯಾರೂ ಪ್ರಶ್ನಿಸುವುದಿಲ್ಲ, ನಮ್ಮ ಹಬ್ಬಕ್ಕೆ ಮಾತ್ರ ಆಕ್ಷೇಪ ಏಕೆ ಎಂದು ಪ್ರಶ್ನಿಸುತ್ತಿದ್ದರೆ, ನ್ಯಾಯಾಲಯದ ಆದೇಶಗಳನ್ನು ಪದೇ ಪದೇ ಉಲ್ಲಂಘಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹಿಂದೂ ಸಂಘಟನೆಗಳು ವಾದಿಸುತ್ತಿವೆ. ಸದ್ಯಕ್ಕೆ ಪರಿಸ್ಥಿತಿ ತಣ್ಣಗಾಗಿದ್ದರೂ, ಇಂತಹ ಪ್ರಚೋದನಾತ್ಮಕ ಯತ್ನಗಳು ಮುಂದಿನ ದಿನಗಳಲ್ಲಿ ನಗರದ ನೆಮ್ಮದಿಗೆ ಕೊಳ್ಳಿ ಇಡುವುದರಲ್ಲಿ ಸಂಶಯವಿಲ್ಲ.
