ರಾಷ್ಟ್ರೀಯ ಸುದ್ದಿ

ಮುಂಬೈ: ಬಕ್ರೀದ್ ಆಡುಗಳಿಗೆ ಪ್ರತಿಯಾಗಿ ಹಂದಿ ತಂದ ಹಿಂದುತ್ವ ಸಂಘಟನೆಗಳು; ಸಾಮಾಜಿಕ ಕಾಳಜಿಯ ಹೆಸರಲ್ಲಿ ಕೋಮು ಪ್ರಚೋದನೆ?

Reading…
Follow Us

ಸಾರಾಂಶ

ಮೀರಾ ರೋಡ್ ವಸತಿ ಸಮುಚ್ಚಯದಲ್ಲಿ ಬಕ್ರೀದ್ ಆಡುಗಳ ವಿರುದ್ಧದ ಪ್ರತಿಭಟನೆಗೆ ಹಿಂದೂ ಸಂಘಟನೆಗಳು ಹಂದಿಯನ್ನು ತಂದಿಟ್ಟ ಘಟನೆಯ ಬಳಿಕ ಉಂಟಾಗಿದ್ದ ತೀವ್ರ ಉದ್ವಿಗ್ನತೆ ಸದ್ಯ ಪೊಲೀಸರ ಮಧ್ಯಪ್ರವೇಶದಿಂದ ಹತೋಟಿಗೆ ಬಂದಿದೆ. ನೈರ್ಮಲ್ಯದ ನೆಪದಲ್ಲಿ ಧಾರ್ಮಿಕ ಭಾವನೆ ಕೆರಳಿಸಲು ಯತ್ನಿಸಿದ ಪ್ರತಿಭಟನಾಕಾರರ ದ್ವಂದ್ವ ನಿಲುವಿಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಮುಂಬೈ ಸಮೀಪದ ಮೀರಾ ರೋಡ್‌ನ ವಸತಿ ಸಮುಚ್ಚಯವೊಂದರಲ್ಲಿ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಆಡುಗಳನ್ನು ತಂದಿಟ್ಟ ವಿಚಾರವಾಗಿ ಆರಂಭವಾದ ವಿವಾದ, ತೀವ್ರ ಕೋಮು ಸಂಘರ್ಷಕ್ಕೆ ತಿರುಗಿ ಈಗ ಪೊಲೀಸರ ಸಕಾಲಿಕ ಹಸ್ತಕ್ಷೇಪದಿಂದ ಹತೋಟಿಗೆ ಬಂದಿದೆ. ಪೂನಂ ಎಸ್ಟೇಟ್ ಕ್ಲಸ್ಟರ್ ಒನ್ ವಸತಿ ಸಮುಚ್ಚಯದಲ್ಲಿ ಮೇ 26, 2026 ರಂದು ನಡೆದ ಜಟಾಪಟಿಯ ವೇಳೆ ಹಿಂದೂ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆಯ ಭಾಗವಾಗಿ ಜೀವಂತ ಹಂದಿಯೊಂದನ್ನು ತಂದಿಟ್ಟಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿತ್ತು. ನೈರ್ಮಲ್ಯ ಮತ್ತು ಪ್ರಾಣಿ ಕಲ್ಯಾಣದ ಹೆಸರಿನಲ್ಲಿ ಆರಂಭವಾದ ಪ್ರತಿಭಟನೆ, ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಹಂತಕ್ಕೆ ತಲುಪಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ವಸತಿ ಸಮುಚ್ಚಯದಲ್ಲಿ ಮುಸ್ಲಿಂ ನಿವಾಸಿಗಳು ಹಬ್ಬದ ಹಿನ್ನೆಲೆಯಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ಆಡುಗಳನ್ನು ತಂದಿರಿಸಿದಾಗ ಸ್ಥಳೀಯ ಕೆಲವು ಹಿಂದೂ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಜನನಿಬಿಡ ಪ್ರದೇಶದಲ್ಲಿ ಪ್ರಾಣಿಗಳನ್ನು ಇಡುವುದರಿಂದ ವಾಸನೆ, ತ್ಯಾಜ್ಯ ಮತ್ತು ಆರೋಗ್ಯದ ಸಮಸ್ಯೆಗಳು ಎದುರಾಗುತ್ತವೆ ಎಂದು ಅವರು ದೂರಿದ್ದರು. ಅಲ್ಲದೆ ವಸತಿ ಪ್ರದೇಶಗಳಲ್ಲಿ ಪ್ರಾಣಿಗಳನ್ನು ಇರಿಸುವುದಕ್ಕೆ ಮುಂಬೈ ಹೈಕೋರ್ಟ್ ವಿಧಿಸಿರುವ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾಗಿತ್ತು. ಈ ದೂರಿನ ಅನ್ವಯ ನಗರ ಪಾಲಿಕೆ ಅಧಿಕಾರಿಗಳು ಶೆಡ್ ತೆರವುಗೊಳಿಸಿದ್ದರು. ಆದರೆ, ಮತ್ತೆ ಅಲ್ಲಿ ಶೆಡ್ ನಿರ್ಮಿಸಲಾಗಿದೆ ಎಂಬ ವದಂತಿ ಹರಡುತ್ತಿದ್ದಂತೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಹನುಮಾನ್ ಚಾಲೀಸಾ ಪಠಣ ಹಾಗೂ ಘೋಷಣೆಗಳನ್ನು ಕೂಗಲಾರಂಭಿಸಿದರು. ಈ ವೇಳೆ ನಡೆದ ಗಲಾಟೆಯಲ್ಲಿ 3 ಜನರು ಗಾಯಗೊಂಡಿದ್ದರು.

ಪ್ರತಿಭಟನೆಯ ತೀವ್ರತೆ ಹೆಚ್ಚಾದಂತೆ, ಕಾರ್ಯಕರ್ತರು ಸೊಸೈಟಿಯ ಗೇಟ್ ಬಳಿ ಹಂದಿಯೊಂದನ್ನು ತಂದು ನಿಲ್ಲಿಸಿದರು. ಇದನ್ನು ‘ವರಾಹ ಪೂಜೆ’ಗೆ ತರಲಾಗಿದೆ ಎಂದು ಸಮರ್ಥಿಸಿಕೊಳ್ಳಲು ಯತ್ನಿಸಲಾಯಿತಾದರೂ, ಇದು ಮುಸ್ಲಿಂ ನಿವಾಸಿಗಳು ಆಡುಗಳನ್ನು ತಂದಿದ್ದಕ್ಕೆ ಪ್ರತಿಯಾಗಿ, ಅವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಹೂಡಿದ ಕುತಂತ್ರ ಎಂಬುದು ನಂತರ ಹಂದಿ ತಂದ ಕಿಡಿಗೇಡಿ India Today ವರದಿಗಾರನೊಂದಿಗೆ ಮಾತನಾಡಿದಾಗ ಸ್ಪಷ್ಟವಾಗಿತ್ತು. ಪರಿಸ್ಥಿತಿ ಕೈಮೀರುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು, ಸೊಸೈಟಿ ಆವರಣದಲ್ಲಿದ್ದ ಆಡುಗಳನ್ನು ಹಾಗೂ ಪ್ರತಿಭಟನೆಗೆ ಬಳಸಲಾಗಿದ್ದ ಹಂದಿಯನ್ನು ವಶಕ್ಕೆ ಪಡೆದು ಅಲ್ಲಿಂದ ತೆರವುಗೊಳಿಸಿದ್ದಾರೆ. ಸದ್ಯ ಇಡೀ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮೂಲಕ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಹತೋಟಿಗೆ ತರಲಾಗಿದೆ.

ಈ ಇಡೀ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಪ್ರತಿಭಟನಾಕಾರರ ದ್ವಂದ್ವ ನಿಲುವು ಮತ್ತು ಸೋಗಲಾಡಿತನ ಎದ್ದು ಕಾಣುತ್ತದೆ. ವಸತಿ ಪ್ರದೇಶದಲ್ಲಿ ಆಡುಗಳಿಂದ ನೈರ್ಮಲ್ಯ ಹಾಳಾಗುತ್ತದೆ ಎಂಬುದು ಅವರ ನಿಜವಾದ ಕಾಳಜಿಯಾಗಿದ್ದರೆ, ಅದೇ ಜಾಗಕ್ಕೆ ಮತ್ತೊಂದು ಪ್ರಾಣಿಯನ್ನು ತಂದು ಗದ್ದಲ ಎಬ್ಬಿಸಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಮೂಡುತ್ತದೆ. ಜನನಿಬಿಡ ವಸತಿ ಪ್ರದೇಶಕ್ಕೆ ಹಂದಿಯನ್ನು ತರುವುದರಿಂದ ಉಂಟಾಗುವ ಗಲೀಜು ಮತ್ತು ಸಾಂಕ್ರಾಮಿಕ ರೋಗಗಳ ಭೀತಿ, ಇವರದ್ದೇ ಆದ ನೈರ್ಮಲ್ಯದ ವಾದಕ್ಕೆ ತದ್ವಿರುದ್ಧವಾಗಿದೆ. ಮತ್ತೊಂದೆಡೆ, ಭಯದಿಂದ ಕಿರುಚಾಡುತ್ತಿದ್ದ ಆ ಹಂದಿಯ ಸ್ಥಿತಿ, ಇವರ ‘ಪ್ರಾಣಿ ಪ್ರೇಮ’ ಹಾಗೂ ಪ್ರಾಣಿ ರಕ್ಷಣೆಯ ವಾದ ಕೇವಲ ಸೋಗಲಾಡಿತನ ಎಂಬುದನ್ನು ಸಾಬೀತುಪಡಿಸಿದೆ.. ಇದು ಸಾಮಾಜಿಕ ಕಾಳಜಿಯ ಹೋರಾಟವಾಗಿರದೆ, ಕೇವಲ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಸಂಘರ್ಷ ಸೃಷ್ಟಿಸುವ ರಾಜಕೀಯ ತಂತ್ರವಾಗಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿವೆ. 

ಸಾರ್ವಜನಿಕ ಸುರಕ್ಷತೆ ಮತ್ತು ನೈರ್ಮಲ್ಯದ ದೃಷ್ಟಿಯಿಂದ ಧಾರ್ಮಿಕ ಆಚರಣೆಗಳ ಪ್ರಾಣಿ ಬಲಿಯನ್ನು ವಸತಿ ಪ್ರದೇಶಗಳ ಬದಲು ನಿಯೋಜಿತ ಕೇಂದ್ರಗಳಲ್ಲೇ ನಡೆಸಬೇಕು ಎಂದು ಮುಂಬೈ ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಈ ನಿಯಮ ಎಲ್ಲ ಸಮುದಾಯಗಳಿಗೂ ಸಮಾನವಾಗಿ ಅನ್ವಯಿಸುತ್ತದೆ. ಮುಸ್ಲಿಂ ಮುಖಂಡರು ಬೇರೆ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ಆಗುವ ಸಾರ್ವಜನಿಕ ಅಡಚಣೆಗಳನ್ನು ಯಾರೂ ಪ್ರಶ್ನಿಸುವುದಿಲ್ಲ, ನಮ್ಮ ಹಬ್ಬಕ್ಕೆ ಮಾತ್ರ ಆಕ್ಷೇಪ ಏಕೆ ಎಂದು ಪ್ರಶ್ನಿಸುತ್ತಿದ್ದರೆ, ನ್ಯಾಯಾಲಯದ ಆದೇಶಗಳನ್ನು ಪದೇ ಪದೇ ಉಲ್ಲಂಘಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹಿಂದೂ ಸಂಘಟನೆಗಳು ವಾದಿಸುತ್ತಿವೆ. ಸದ್ಯಕ್ಕೆ ಪರಿಸ್ಥಿತಿ ತಣ್ಣಗಾಗಿದ್ದರೂ, ಇಂತಹ ಪ್ರಚೋದನಾತ್ಮಕ ಯತ್ನಗಳು ಮುಂದಿನ ದಿನಗಳಲ್ಲಿ ನಗರದ ನೆಮ್ಮದಿಗೆ ಕೊಳ್ಳಿ ಇಡುವುದರಲ್ಲಿ ಸಂಶಯವಿಲ್ಲ.

How does this story make you feel?
Share:

About Us

ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ. ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'. ಬ್ರೇಕಿಂಗ್ ನ್ಯೂಸಿನ ನಾಗಾಲೋಟದ ಸ್ಪರ್ಧೆಯಲ್ಲಿ ನಾವಿಲ್ಲ!! ನಾ ಮುಂದು, ನಮ್ಮಲ್ಲೇ ಮೊದಲೆಂಬ ಯೋಚನೆ ಸುಳಿಯಲ್ಲ!! ಸುದ್ದಿ ಎಷ್ಟು ಕೊಟ್ಟಿದ್ದೇವೆ ಎನ್ನುವುದಕ್ಕಿಂತ ಏನು ಕೊಟ್ಟಿದ್ದೇವೆ ಎಂಬ ಗುಣಮಟ್ಟದ ಸಿದ್ಧಾಂತವನ್ನು ಮೈಗೂಡಿಸಿಕೊಂಡು ತೆವಳುತ್ತಾ ವರದಿಗಾರ ಸಾಗುತ್ತಿದೆ.

ನಮ್ಮ ಬಗ್ಗೆ ತಿಳಿಯಿರಿ →
Join our WhatsApp Channel Get every Varadigara story instantly
Follow Us

More Stories

ರಾಷ್ಟ್ರೀಯ ಸುದ್ದಿ

ಕೋಮು ಸೌಹಾರ್ದತೆಯ ಬೆಲೆ: ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದ ‘ಮೊಹಮ್ಮದ್ ದೀಪಕ್’ ಜಿಮ್ ಮುಚ್ಚುವ ಭೀತಿಯಲ್ಲಿ!

ರಾಷ್ಟ್ರೀಯ ಸುದ್ದಿ

“ನಿಮ್ಮದೇ ಹೋಟೆಲ್‌ನಲ್ಲಿ ಮಟನ್ ಮಸಾಲಾ ಮಾರುವುದು ನೆನಪಿಲ್ಲವೇ?” : ‘ವರ್ಚುವಲ್ ಬಕ್ರೀದ್’ ಸಲಹೆ ನೀಡಿದ್ದ ಬಿಜೆಪಿಯ ನಿತೇಶ್ ರಾಣೆಗೆ ಸ್ವಪಕ್ಷ  ನಾಯಕನ ಬಹಿರಂಗ ಸವಾಲು

ರಾಷ್ಟ್ರೀಯ ಸುದ್ದಿ

ಮುಂಬೈ: ಬಕ್ರೀದ್ ರಾಜಕೀಯ ಕೈಗೆತ್ತಿಕೊಂಡ ಬಿಜೆಪಿ; ವಸತಿ ಪ್ರದೇಶಗಳಲ್ಲಿ ಪ್ರಾಣಿ ಬಲಿ ನಿಯಂತ್ರಣಕ್ಕೆ ಕಿರೀಟ್ ಸೋಮಯ್ಯ ಪತ್ರ

From Across Varadigara

ಸಾಮಾಜಿಕ ತಾಣ

AI ಎಡಿಟ್ ಮಾಡಿ ಬಿಹಾರದಲ್ಲಿ ಅಭಿವೃದ್ಧಿ ತೋರಿಸಲು ಪ್ರಯತ್ನಿಸಿದ ಬಿಜೆಪಿ; ಅಸಲಿಯತ್ತನ್ನು ಬಯಲಿಗೆಳೆದ ನೆಟ್ಟಿಗರು!

ರಾಷ್ಟ್ರೀಯ ಸುದ್ದಿ

ವಾಣಿಜ್ಯ ಸಿಲಿಂಡರ್ ಬೆಲೆ ಮತ್ತಷ್ಟು ದುಬಾರಿ: ಐದೇ ತಿಂಗಳಲ್ಲಿ ದುಪ್ಪಟ್ಟಾದ ದರ!

ರಾಷ್ಟ್ರೀಯ ಸುದ್ದಿ

‘ಕಮಾಲ್ ಮೌಲಾ ಮಸೀದಿ – ಭೋಜಶಾಲಾ’ ಇನ್ನು ಸರಸ್ವತಿ ಮಂದಿರ: ಹೈಕೋರ್ಟ್‌ನಿಂದ ನಮಾಜ್ ಸ್ಥಗಿತಕ್ಕೆ ಆದೇಶ, ಪರ್ಯಾಯ ಜಾಗಕ್ಕೆ ಮುಸ್ಲಿಂ ಮಂಡಳಿಗೆ ಅವಕಾಶ!

ರಾಜ್ಯ ಸುದ್ದಿ

“ಅಲ್ಲಿ ಇನ್ನು ಮುಂದೆ ಕೋಮುಗಲಭೆ ನಡೆಯಬಾರದಷ್ಟೇ”; ಜಿಲ್ಲಾಧಿಕಾರಿಯಾಗಿದ್ದಾಗ ಸಿದ್ದರಾಮಯ್ಯ ನೀಡಿದ್ದ ಸೂಚನೆಯನ್ನು ಹಂಚಿಕೊಂಡ ಸಸಿಕಾಂತ್ ಸೆಂಥಿಲ್

ರಾಷ್ಟ್ರೀಯ ಸುದ್ದಿ

ಕೋಮು ಸೌಹಾರ್ದತೆಯ ಬೆಲೆ: ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದ ‘ಮೊಹಮ್ಮದ್ ದೀಪಕ್’ ಜಿಮ್ ಮುಚ್ಚುವ ಭೀತಿಯಲ್ಲಿ!

ರಾಷ್ಟ್ರೀಯ ಸುದ್ದಿ

“ದೇಶ ಆರ್ಥಿಕ ಬಿರುಗಾಳಿ ಎದುರಿಸಲಿದೆ”; ಇಂಧನ ಬೆಲೆ ಏರಿಕೆಗೆ ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ರಾಷ್ಟ್ರೀಯ ಸುದ್ದಿ

ಮುಂಬೈ: ಬಕ್ರೀದ್ ರಾಜಕೀಯ ಕೈಗೆತ್ತಿಕೊಂಡ ಬಿಜೆಪಿ; ವಸತಿ ಪ್ರದೇಶಗಳಲ್ಲಿ ಪ್ರಾಣಿ ಬಲಿ ನಿಯಂತ್ರಣಕ್ಕೆ ಕಿರೀಟ್ ಸೋಮಯ್ಯ ಪತ್ರ

ರಾಷ್ಟ್ರೀಯ ಸುದ್ದಿ

ಪಂಜಾಬ್‌ ಸ್ಥಳೀಯ ಸಂಸ್ಥೆ ಚುನಾವಣೆ: ಬ್ಯಾಲೆಟ್ ಪೇಪರ್ ಬಳಸಲು ಚುನಾವಣಾ ಆಯೋಗದ ನಿರ್ಧಾರ; ಇವಿಎಂಗಾಗಿ ಬಿಜೆಪಿ ಪಟ್ಟು!

ರಾಜ್ಯ ಸುದ್ದಿ

ಪ್ರಧಾನಿ ಮೋದಿ ಪಂಚಾಯತ್ ಸದಸ್ಯರ ರೀತಿ ರಾಜಕಾರಣ ಮಾಡುವುದು ಬಿಡಬೇಕು: ಬಿಕೆ ಹರಿಪ್ರಸಾದ್‌ ತಿರುಗೇಟು

ರಾಷ್ಟ್ರೀಯ ಸುದ್ದಿ

ಗುಜರಾತ್: ₹2,000 ಬಾಡಿಗೆ ಹಣದ ಬದಲು ಹೆಂಡತಿ, 13 ವರ್ಷದ ಮಗಳ ಮೇಲೆಯೇ ಅತ್ಯಾಚಾರಕ್ಕೆ ಅವಕಾಶ ಮಾಡಿಕೊಟ್ಟ ವ್ಯಕ್ತಿ ಬಂಧನ

ರಾಷ್ಟ್ರೀಯ ಸುದ್ದಿ

UAPA ಕಾಯ್ದೆಯಡಿ ಶಿಕ್ಷೆಯಾಗುವ ಪ್ರಮಾಣ ಕೇವಲ 1.5% – 4% ಮಾತ್ರ : ಸುಪ್ರೀಂ ಕೋರ್ಟ್

ರಾಷ್ಟ್ರೀಯ ಸುದ್ದಿ

NEET ಹಗರಣ ತನಿಖೆ ತೀವ್ರಗೊಳಿಸಿದ ಸಿಬಿಐ: ನಾಗ್ಪುರ–ಚಂದ್ರಪುರದಲ್ಲಿ ವಿದ್ಯಾರ್ಥಿಗಳ ಮನೆಗಳ ಮೇಲೆ ದಾಳಿ

ರಾಷ್ಟ್ರೀಯ ಸುದ್ದಿ

ಯೋಗಿ ಆದಿತ್ಯನಾಥ್‌ಗೆ ಇಕ್ರಾ ಹಸನ್ ತಿರುಗೇಟು: “ಯಾವುದೇ ಸಮುದಾಯವನ್ನು ಗುರಿ ಮಾಡುವ ಹಕ್ಕು ಅವರಿಗಿಲ್ಲ”

ರಾಷ್ಟ್ರೀಯ ಸುದ್ದಿ

ಪಶ್ಚಿಮ ಬಂಗಾಳ: ಬಿಜೆಪಿ ಅಧಿಕಾರಕ್ಕೇರಿದ ಒಂದೇ ವಾರದಲ್ಲಿ ಪ್ರಾಣಿ ಹತ್ಯೆಗೆ ಕಟ್ಟುನಿಟ್ಟಿನ ನಿಯಮ: 1950ರ ಕಾಯ್ದೆಯಡಿ ಹೊಸ ಮಾರ್ಗಸೂಚಿ ಪ್ರಕಟ

ರಾಷ್ಟ್ರೀಯ ಸುದ್ದಿ

50 IAS -IPS ಅಧಿಕಾರಿಗಳು ಒಟ್ಟಾಗಿ ಭೂಮಿ ಖರೀದಿ : ಬೈಪಾಸ್ ಯೋಜನೆಗೆ ಗ್ರೀನ್ ಸಿಗ್ನಲ್ ನಂತರ ಮೌಲ್ಯದಲ್ಲಿ 11 ಪಟ್ಟು ಏರಿಕೆ!

ಕಾಣಿಸದ್ದು - ಕೇಳಿಸದ್ದು

‘ಐಐಟಿ ಬಾಬಾ’ ಬಂಧನ: ಆಧ್ಯಾತ್ಮಿಕತೆಯ ಹೆಸರಲ್ಲಿ ಯುವತಿಯರ ಲೈಂಗಿಕ ಕಿರುಕುಳ, ಬ್ಲಾಕ್‌ಮೇಲ್ ಆರೋಪ!

ರಾಷ್ಟ್ರೀಯ ಸುದ್ದಿ

ಪಂಜಾಬ್‌ ಸ್ಥಳೀಯ ಸಂಸ್ಥೆ ಚುನಾವಣೆ: ‘ಆಪ್’ ಭರ್ಜರಿ ಜಯಭೇರಿ; ‘ವೋಟ್ ಚೋರಿ’ ಆರೋಪ ಹೊರಿಸಿದ ಬಿಜೆಪಿ!

ಸಾಮಾಜಿಕ ತಾಣ

ದೇವಾಲಯದ ಬಳಿ ಬಡ ವ್ಯಾಪಾರಿಯ ಬಂಧನದ ಬೆನ್ನಲ್ಲೇ ಮುಗಿಬಿದ್ದು ಸಿಹಿ ತಿಂಡಿ ಲೂಟಿ ಮಾಡಿದ ಜನ; ಎತ್ತ ಸಾಗುತ್ತಿದೆ ನಮ್ಮ ನೈತಿಕತೆ?

ಕಾಣಿಸದ್ದು - ಕೇಳಿಸದ್ದು

ದೆಹಲಿ ಅಗ್ನಿ ದುರಂತ: ತಮ್ಮ ಅಂಗಡಿಯ ಲಕ್ಷಾಂತರ ರೂಪಾಯಿ ಮೌಲ್ಯದ ಹಾಸಿಗೆಗಳನ್ನು ರಸ್ತೆಗೆ ಹಾಸಿ 8 ಜನರ ಪ್ರಾಣ ಉಳಿಸಿದ ರಿಯಾಝುದ್ದೀನ್ – ಅರ್ಮಾನ್

ರಾಷ್ಟ್ರೀಯ ಸುದ್ದಿ

ಬಿಜೆಪಿಯನ್ನು ದೆಹಲಿಯ ಅಧಿಕಾರದಿಂದ ಕೆಳಗಿಳಿಸುವ ಹೋರಾಟ ಮುಂದುವರಿಯುತ್ತದೆ: ಮಮತಾ ಬ್ಯಾನರ್ಜಿ ಶಪಥ