ಕೋಮು ಸೌಹಾರ್ದತೆ ಮೆರೆದು ಮುಸ್ಲಿಂ ವ್ಯಾಪಾರಿಯ ರಕ್ಷಣೆಗೆ ನಿಂತಿದ್ದ ಜಿಮ್ ತರಬೇತುದಾರ ದೀಪಕ್ ಕುಮಾರ್ಗೆ ಈಗ ಆರ್ಥಿಕ ಬಹಿಷ್ಕಾರದ ಸಂಕಷ್ಟ; ಬಾಡಿಗೆ ಕಟ್ಟಲಾಗದೆ ಜಿಮ್ ಖಾಲಿ ಮಾಡುವಂತೆ ಮಾಲೀಕನ ನೋಟಿಸ್.
ಕೋತ್ ದ್ವಾರ (ಉತ್ತರಾಖಂಡ): ದೇಶದಾದ್ಯಂತ ತೀವ್ರ ಸದ್ದು ಮಾಡಿದ್ದ ಉತ್ತರಾಖಂಡದ ಕೋತ್ ದ್ವಾರದ ಘಟನೆಯ ನಾಯಕ, “ಮೊಹಮ್ಮದ್ ದೀಪಕ್” ಎಂದೇ ಖ್ಯಾತರಾದ ದೀಪಕ್ ಕುಮಾರ್ ಈಗ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗಣರಾಜ್ಯೋತ್ಸವದ ದಿನದಂದು ಮುಸ್ಲಿಂ ವೃದ್ಧ ವ್ಯಾಪಾರಿಯೊಬ್ಬರನ್ನು ಗುಂಪಿನ ಕಿರುಕುಳದಿಂದ ರಕ್ಷಿಸಿದ್ದ ದೀಪಕ್ ಅವರಿಗೆ ಈಗ ತಮ್ಮ ಜಿಮ್ ನಡೆಸುವುದೇ ದುಸ್ತರವಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ಬಾಡಿಗೆ ಪಾವತಿಸದ ಕಾರಣ ಅವರ ‘ಹಲ್ಕ್ ಜಿಮ್’ ಮಾಲೀಕರು ಜಿಮ್ ಖಾಲಿ ಮಾಡುವಂತೆ ಕಾನೂನು ಕ್ರಮಕ್ಕೆ ಮುಂದಾಗಿದ್ದು, ಕೋಮು ಧ್ರುವೀಕರಣದ ವಿರುದ್ಧ ಧ್ವನಿ ಎತ್ತುವ ವ್ಯಕ್ತಿಗಳು ಎದುರಿಸಬೇಕಾಗಿರುವ ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ.
2026ರ ಜನವರಿ 26 ರಂದು ಕೋತ್ ದ್ವಾರದಲ್ಲಿ ಬಜರಂಗದಳದ ಕಾರ್ಯಕರ್ತರೆನ್ನಲಾದ ಗುಂಪೊಂದು 70 ವರ್ಷದ ವಕೀಲ್ ಅಹ್ಮದ್ ಎಂಬ ವ್ಯಾಪಾರಿಯ ಅಂಗಡಿಯ ಹೆಸರು ಮತ್ತು ಅವರ ಗುರುತನ್ನು ಪ್ರಶ್ನಿಸಿ ಕಿರುಕುಳ ನೀಡುತ್ತಿತ್ತು. ಇದನ್ನು ಗಮನಿಸಿದ 38 ವರ್ಷದ ಜಿಮ್ ಮಾಲೀಕ ದೀಪಕ್ ಕುಮಾರ್ ತಕ್ಷಣವೇ ವೃದ್ಧನ ರಕ್ಷಣೆಗೆ ಧಾವಿಸಿದ್ದರು. ಈ ವೇಳೆ ಆಕ್ರೋಶಿತ ಗುಂಪು ದೀಪಕ್ ಅವರ ಹಿನ್ನೆಲೆಯನ್ನು ಪ್ರಶ್ನಿಸಿದಾಗ, ಸೌಹಾರ್ದತೆಯ ಸಂಕೇತವಾಗಿ ಮತ್ತು ವೃದ್ಧನಿಗೆ ಬೆಂಬಲವಾಗಿ “ನನ್ನ ಹೆಸರು ಮೊಹಮ್ಮದ್ ದೀಪಕ್” ಎಂದು ಧೈರ್ಯದಿಂದ ಉತ್ತರಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ರಾಷ್ಟ್ರಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿತ್ತು.
ದೇವಾಲಯದ ಬಳಿ ಬಡ ವ್ಯಾಪಾರಿಯ ಬಂಧನದ ಬೆನ್ನಲ್ಲೇ ಮುಗಿಬಿದ್ದು ಸಿಹಿ ತಿಂಡಿ ಲೂಟಿ ಮಾಡಿದ ಜನ; ಎತ್ತ ಸಾಗುತ್ತಿದೆ ನಮ್ಮ ನೈತಿಕತೆ?
“ಆರ್ ಎಸ್ ಎಸ್ ಎಂಬ ಆಧುನಿಕ ಬಸ್ಮಾಸುರ ದೇಶವನ್ನೇ ಸುಡುತ್ತಿದೆ!” ಕಲ್ಲಡ್ಕ ಭಟ್ ಕೋರ್ಟ್ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಕಿಡಿ!
AI ಎಡಿಟ್ ಮಾಡಿ ಬಿಹಾರದಲ್ಲಿ ಅಭಿವೃದ್ಧಿ ತೋರಿಸಲು ಪ್ರಯತ್ನಿಸಿದ ಬಿಜೆಪಿ; ಅಸಲಿಯತ್ತನ್ನು ಬಯಲಿಗೆಳೆದ ನೆಟ್ಟಿಗರು!
ದೆಹಲಿ ಅಗ್ನಿ ದುರಂತ: ತಮ್ಮ ಅಂಗಡಿಯ ಲಕ್ಷಾಂತರ ರೂಪಾಯಿ ಮೌಲ್ಯದ ಹಾಸಿಗೆಗಳನ್ನು ರಸ್ತೆಗೆ ಹಾಸಿ 8 ಜನರ ಪ್ರಾಣ ಉಳಿಸಿದ ರಿಯಾಝುದ್ದೀನ್ – ಅರ್ಮಾನ್
“ಮಿತಿಮೀರಿದ ಚಮಚಾಗಿರಿ” : ಡಿ.ಕೆ. ಶಿವಕುಮಾರ್ ಅವರನ್ನು ‘ಶಿವ’ನನ್ನಾಗಿ ಬಿಂಬಿಸಿದ ಪತ್ರಿಕೆ; ‘ಹೊಗಳುಭಟ್ಟ’ರ ವಿರುದ್ಧ ಸಾರ್ವಜನಿಕ ಆಕ್ರೋಶ!
ಅಮೆರಿಕ ಶಾಕ್: ಭಾರತದ ವಸ್ತುಗಳಿಗೆ ಶೇ. 12.5 ಹೆಚ್ಚುವರಿ ಸುಂಕ ಪ್ರಸ್ತಾಪ!
ಡಿಕೆ ಶಿವಕುಮಾರ್ ನೇತೃತ್ವದ ನೂತನ ಸರ್ಕಾರಕ್ಕೆ ಇಂದು ಪ್ರಮಾಣ ವಚನ: ಉಪಮುಖ್ಯಮಂತ್ರಿ ಸೇರಿ 13 ಸಚಿವರು ಪ್ರಮಾಣ ವಚನ ಸ್ವೀಕಾರ
ಗಂಗಾ ನದಿಯ ಉಗಮ ಸ್ಥಾನದಲ್ಲೇ ಕುಡಿಯುವ ನೀರಿಗೆ ಹಾಹಾಕಾರ: ಉತ್ತರಾಖಂಡದ ದೇವಪ್ರಯಾಗದಲ್ಲಿ ಗ್ರಾಮಸ್ಥರಿಂದ ಪಂಜಿನ ಮೆರವಣಿಗೆ
‘ಐಐಟಿ ಬಾಬಾ’ ಬಂಧನ: ಆಧ್ಯಾತ್ಮಿಕತೆಯ ಹೆಸರಲ್ಲಿ ಯುವತಿಯರ ಲೈಂಗಿಕ ಕಿರುಕುಳ, ಬ್ಲಾಕ್ಮೇಲ್ ಆರೋಪ!
ಈ ಸಾಹಸಿಕ ನಡೆಯನ್ನು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಪ್ರಮುಖರು ಶ್ಲಾಘಿಸಿದ್ದರು. ರಾಹುಲ್ ಗಾಂಧಿ ಅವರು ಖುದ್ದಾಗಿ ದೀಪಕ್ ಅವರನ್ನು ಭೇಟಿಯಾಗಿ, “ಇದು ಸಂವಿಧಾನವನ್ನು ರಕ್ಷಿಸುವ ಮತ್ತು ಸಹೋದರತ್ವವನ್ನು ಎತ್ತಿಹಿಡಿಯುವ ನೈಜ ದೇಶಭಕ್ತಿ” ಎಂದು ಪ್ರಶಂಸಿಸಿದ್ದರು. ಆದರೆ, ಈ ವ್ಯಾಪಕ ಜನಪ್ರಿಯತೆಯ ಬೆನ್ನಲ್ಲೇ ದೀಪಕ್ ಕುಮಾರ್ ತೀವ್ರ ಆಕ್ರೋಶ ಮತ್ತು ಸಾಮಾಜಿಕ ಬಹಿಷ್ಕಾರವನ್ನು ಎದುರಿಸಬೇಕಾಗಿ ಬಂತು. ಅವರ ಜಿಮ್ನಲ್ಲಿದ್ದ ಸುಮಾರು 150 ಸದಸ್ಯರ ಸಂಖ್ಯೆ ದಿಢೀರನೆ ಕಡಿಮೆ ಆಗಿ ಕೇವಲ 15 ಕ್ಕೆ ಕುಸಿಯಿತು. ಸ್ಥಳೀಯವಾಗಿ ನಡೆದ ವ್ಯವಸ್ಥಿತ ಬಹಿಷ್ಕಾರದಿಂದಾಗಿ ಅವರ ಆದಾಯದ ಮೂಲವೇ ಕಡಿತಗೊಂಡಿತು.. ತಮಗೆ ಬಂದ ಅಲ್ಪಸ್ವಲ್ಪ ಆದಾಯದಲ್ಲಿ ಮಕ್ಕಳ ಶಾಲಾ ಶುಲ್ಕ ಪಾವತಿಸಲು ಮೊದಲ ಆದ್ಯತೆ ನೀಡಿದ್ದರಿಂದ ಜಿಮ್ ಬಾಡಿಗೆ ಪಾವತಿಸಲು ಸಾಧ್ಯವಾಗಿಲ್ಲ ಎಂದು ದೀಪಕ್ ಅಳಲು ತೋಡಿಕೊಂಡಿದ್ದಾರೆ.
कोटद्वार के दीपक कुमार ने मोहम्मद दीपक बनकर भाईचारे की एक मिसाल क़ायम की. सांप्रदायिक सोच वाले नफरती झुंड की परवाह किए बग़ैर अपने इरादों पर टिके रहे तो हमारी इतनी जिम्मेदारी भी नहीं बनती है कि हम सब मिलकर दीपक की मदद करें ताकि उन्हें जिम बंद न करना पड़े ? सिर्फ तारीफ़ कर देने भर… pic.twitter.com/PK3iANpyBW
— Ajit Anjum (@ajitanjum) May 26, 2026
ಪ್ರಸ್ತುತ ಲಭ್ಯವಿರುವ ಮಾಹಿತಿಯ ಪ್ರಕಾರ, ದೀಪಕ್ ಅವರ ಜಿಮ್ನ ಬಾಡಿಗೆ ಬಾಕಿ ಸುಮಾರು 1.6 ಲಕ್ಷದಿಂದ 2.2 ಲಕ್ಷ ರೂಪಾಯಿಗಳಷ್ಟಾಗಿದ್ದು, ಮನೆ ಸಾಲದ ಇಎಂಐ (EMI) ಪಾವತಿಸಲೂ ಅವರು ಪರದಾಡುತ್ತಿದ್ದಾರೆ. ದೀಪಕ್ ಅವರ ಸಾರ್ವಜನಿಕ ನಿಲುವಿನ ಕಾರಣಕ್ಕಾಗಿಯೇ ಜಿಮ್ ಮಾಲೀಕರು ಈಗ ಕಠಿಣ ನಿಲುವು ತಳೆದಿದ್ದಾರೆ ಎನ್ನಲಾಗಿದೆ. ಈ ನಡುವೆ, ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಮತ್ತು ಹಿರಿಯ ಪತ್ರಕರ್ತ ಅಜಿತ್ ಅಂಜುಮ್ ಸೇರಿದಂತೆ ಕೆಲವು ಗಣ್ಯರು ಅವರಿಗೆ ಆರ್ಥಿಕ ಸಹಾಯ ಹಸ್ತ ಚಾಚಿದ್ದಾರೆ. ಇದರೊಂದಿಗೆ, ಅಂದಿನ ಘಟನೆಗೆ ಸಂಬಂಧಿಸಿದಂತೆ ದೀಪಕ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ನ್ಯಾಯಾಲಯವು ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗದಂತೆ ನಿರ್ಬಂಧ ವಿಧಿಸಿದೆ.
किसी शख़्स को इस बात की सज़ा नहीं मिलनी चाहिए कि उसने इंसानियत की ख़ातिर एक मुस्लिम बुजुर्ग की मदद की।
— Sanjay Singh AAP (@SanjayAzadSln) May 26, 2026
दीपक का जिम आज बंद होने के कगार पर है।
दीपक की सहायता कीजिए मैंने अपनी सैलरी से उन्हें 50 हज़ार की सहायता की है।
आप भी मदद का हाथ बढ़ाइये अच्छे लोगों का हौसला बुलंद रहना चाहिए। pic.twitter.com/1kur2i0H1x
ಸಮಾಜದಲ್ಲಿ ಹೆಚ್ಚುತ್ತಿರುವ ಕೋಮು ದ್ವೇಷದ ವಿರುದ್ಧ ಧ್ವನಿ ಎತ್ತುವ ಸಾಮಾನ್ಯ ನಾಗರಿಕರು ಎಂತಹ ಭೀಕರ ಆರ್ಥಿಕ ಮತ್ತು ಸಾಮಾಜಿಕ ಬೆಲೆ ತೆರಬೇಕಾಗುತ್ತದೆ ಎಂಬುದಕ್ಕೆ ದೀಪಕ್ ಕುಮಾರ್ ಸದ್ಯದ ಉದಾಹರಣೆಯಾಗಿದ್ದಾರೆ.
