ಸಸಿಕಾಂತ ಸೆಂಥಿಲ್
ಸಿದ್ದರಾಮಯ್ಯ ಅವರ ಕುರಿತು ಬರೆದದ್ದು..
ನನ್ನ ಆಡಳಿತಾತ್ಮಕ ವೃತ್ತಿಜೀವನದಲ್ಲಿ ಮನಸ್ಸಿನಲ್ಲಿ ಅಳಿಸಲಾಗದ ನೆನಪೊಂದಿದೆ..
ಆ ದಿನಗಳಲ್ಲಿ, ನನ್ನನ್ನು ಜಿಲ್ಲಾಧಿಕಾರಿಯಾಗಿ ಮಂಗಳೂರಿಗೆ ವರ್ಗಾಯಿಸಲಾಯಿತು, ಅದು ಕೋಮು ಘರ್ಷಣೆಗಳು ಮತ್ತು ಮರಳು ಮಾಫಿಯಾದ ಕಾಟದ ನೆರಳಿನಲ್ಲಿತ್ತು. ಅಲ್ಲಿಂದ ಹೊರಡುವ ಮೊದಲು, ಮುಖ್ಯಮಂತ್ರಿಗಳು ನನ್ನನ್ನು ವೈಯಕ್ತಿಕವಾಗಿ ಭೇಟಿಯಾಗಲು ಬಯಸುತ್ತಾರೆ ಎಂಬ ಮಾಹಿತಿ ಸಿಕ್ಕಿತು. ಅದು ಸಾಮಾನ್ಯ ಘಟನೆಯಾಗಿರಲಿಲ್ಲ. ಜಿಲ್ಲಾಧಿಕಾರಿಯನ್ನು ವೈಯಕ್ತಿಕವಾಗಿ ಕರೆಯುವುದು ಅಪರೂಪ. ನಾನು ಅವರ ಕೋಣೆಗೆ ಸ್ವಲ್ಪ ನಡುಕದಿಂದ ಪ್ರವೇಶಿಸಿದೆ.
ಅಮೆರಿಕ ಶಾಕ್: ಭಾರತದ ವಸ್ತುಗಳಿಗೆ ಶೇ. 12.5 ಹೆಚ್ಚುವರಿ ಸುಂಕ ಪ್ರಸ್ತಾಪ!
‘ಐಐಟಿ ಬಾಬಾ’ ಬಂಧನ: ಆಧ್ಯಾತ್ಮಿಕತೆಯ ಹೆಸರಲ್ಲಿ ಯುವತಿಯರ ಲೈಂಗಿಕ ಕಿರುಕುಳ, ಬ್ಲಾಕ್ಮೇಲ್ ಆರೋಪ!
ಗಂಗಾ ನದಿಯ ಉಗಮ ಸ್ಥಾನದಲ್ಲೇ ಕುಡಿಯುವ ನೀರಿಗೆ ಹಾಹಾಕಾರ: ಉತ್ತರಾಖಂಡದ ದೇವಪ್ರಯಾಗದಲ್ಲಿ ಗ್ರಾಮಸ್ಥರಿಂದ ಪಂಜಿನ ಮೆರವಣಿಗೆ
ಡಿಕೆ ಶಿವಕುಮಾರ್ ನೇತೃತ್ವದ ನೂತನ ಸರ್ಕಾರಕ್ಕೆ ಇಂದು ಪ್ರಮಾಣ ವಚನ: ಉಪಮುಖ್ಯಮಂತ್ರಿ ಸೇರಿ 13 ಸಚಿವರು ಪ್ರಮಾಣ ವಚನ ಸ್ವೀಕಾರ
“ಮಿತಿಮೀರಿದ ಚಮಚಾಗಿರಿ” : ಡಿ.ಕೆ. ಶಿವಕುಮಾರ್ ಅವರನ್ನು ‘ಶಿವ’ನನ್ನಾಗಿ ಬಿಂಬಿಸಿದ ಪತ್ರಿಕೆ; ‘ಹೊಗಳುಭಟ್ಟ’ರ ವಿರುದ್ಧ ಸಾರ್ವಜನಿಕ ಆಕ್ರೋಶ!
AI ಎಡಿಟ್ ಮಾಡಿ ಬಿಹಾರದಲ್ಲಿ ಅಭಿವೃದ್ಧಿ ತೋರಿಸಲು ಪ್ರಯತ್ನಿಸಿದ ಬಿಜೆಪಿ; ಅಸಲಿಯತ್ತನ್ನು ಬಯಲಿಗೆಳೆದ ನೆಟ್ಟಿಗರು!
ದೆಹಲಿ ಅಗ್ನಿ ದುರಂತ: ತಮ್ಮ ಅಂಗಡಿಯ ಲಕ್ಷಾಂತರ ರೂಪಾಯಿ ಮೌಲ್ಯದ ಹಾಸಿಗೆಗಳನ್ನು ರಸ್ತೆಗೆ ಹಾಸಿ 8 ಜನರ ಪ್ರಾಣ ಉಳಿಸಿದ ರಿಯಾಝುದ್ದೀನ್ – ಅರ್ಮಾನ್
ದೇವಾಲಯದ ಬಳಿ ಬಡ ವ್ಯಾಪಾರಿಯ ಬಂಧನದ ಬೆನ್ನಲ್ಲೇ ಮುಗಿಬಿದ್ದು ಸಿಹಿ ತಿಂಡಿ ಲೂಟಿ ಮಾಡಿದ ಜನ; ಎತ್ತ ಸಾಗುತ್ತಿದೆ ನಮ್ಮ ನೈತಿಕತೆ?
“ಆರ್ ಎಸ್ ಎಸ್ ಎಂಬ ಆಧುನಿಕ ಬಸ್ಮಾಸುರ ದೇಶವನ್ನೇ ಸುಡುತ್ತಿದೆ!” ಕಲ್ಲಡ್ಕ ಭಟ್ ಕೋರ್ಟ್ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಕಿಡಿ!
ಅವರು ತಮ್ಮ ಎಂದಿನ ಪ್ರಶಾಂತ, ಭಾವರಹಿತ ಮುಖದಿಂದ ನನ್ನನ್ನು ನೋಡಿದರು.
“ಬಾ…” ಎಂದು ಅವರು ಹೇಳಿದರು.
ನಂತರ ಅವರು ನಿಧಾನವಾಗಿ ಮತ್ತು ದೃಢವಾಗಿ ಹೇಳಿದರು:
“ನಿಮಗಿರುವ ಏಕೈಕ ಜವಾಬ್ದಾರಿ ಎಂದರೆ, ಅಲ್ಲಿ ಇನ್ನು ಮುಂದೆ ಕೋಮು ಗಲಭೆಗಳು ನಡೆಯಬಾರದಷ್ಟೆ..’
ಅಷ್ಟೇ.
ಯಾವುದೇ ಮುನ್ನುಡಿ ಇಲ್ಲ. ಯಾವುದೇ ರಾಜಕೀಯ ವಿವರಣೆಗಳಿಲ್ಲ. ಯಾವುದೇ ಬಹಿರಂಗ ನಟನೆ ಇಲ್ಲ. ಒಬ್ಬ ಮುಖ್ಯಮಂತ್ರಿ ಒಬ್ಬ ಯುವ ಐಎಎಸ್ ಅಧಿಕಾರಿಯೊಂದಿಗೆ ಏಕಾಂಗಿಯಾಗಿ ಕುಳಿತು ನಿಜವಾಗಿಯೂ ಮುಖ್ಯವಾದದ್ದನ್ನು ಸ್ಪಷ್ಟವಾಗಿ ಹೇಳಿದ್ದರು.
ಆ ಒಂದು ವಾಕ್ಯವು ಆಡಳಿತದ ಸಂಪೂರ್ಣ ತತ್ವಶಾಸ್ತ್ರವನ್ನು ಒಳಗೊಂಡಿತ್ತು. ಅದು ಕೇವಲ ರಾಜಕೀಯ ಪ್ರದರ್ಶನವಾಗಿರಲಿಲ್ಲ; ಸಾಮಾನ್ಯ ಜನರನ್ನು ಅಸಾಧಾರಣ ದ್ವೇಷದಿಂದ ರಕ್ಷಿಸುವ ಜವಾಬ್ದಾರಿಯ ಪ್ರಜ್ಞೆಯ ಅಭಿವ್ಯಕ್ತಿ.
ಹದಿನೈದು ದಿನಗಳ ನಂತರ, ಮಂಗಳೂರು ಮತ್ತೆ ಉದ್ವಿಗ್ನತೆಗೆ ಒಳಗಾಯಿತು. ಎರಡೂ ಧರ್ಮಗಳ ಇಬ್ಬರು ಕೊಲ್ಲಲ್ಪಟ್ಟರು. ನಗರವು ಸ್ಫೋಟದ ಅಂಚಿನಲ್ಲಿತ್ತು. ನಂತರ ಅವರು ಮತ್ತೆ ಕರೆ ಮಾಡಿದರು.
ಹಿಂದಿನಂತೆಯೇ ಅದೇ ನೇರ ಧ್ವನಿಯಲ್ಲಿ, ಅವರು ಹೇಳಿದರು:
“ಜಿಲ್ಲಾಧಿಕಾರಿ… ಅಗತ್ಯವಿರುವುದನ್ನು ಮಾಡಿ. ಯಾರನ್ನಾದರೂ ಬಂಧಿಸಿ; ಅವರು ನಮ್ಮ ಪಕ್ಷದವರಾಗಿದ್ದರೂ ಹಿಂಜರಿಯಬೇಡಿ. ಆದರೆ ಈ ಪರಿಸ್ಥಿತಿಯನ್ನು ಒಂದು ದಿನದೊಳಗೆ ನಿಯಂತ್ರಣಕ್ಕೆ ತರಬೇಕು.”
ಆ ಮಾತುಗಳು ಯುವ ಜಿಲ್ಲಾಧಿಕಾರಿಗೆ ಅಪಾರ ವಿಶ್ವಾಸ ಮತ್ತು ದೃಢಸಂಕಲ್ಪವನ್ನು ನೀಡಿತು. ಇದು ಕೇವಲ ಆದೇಶವಾಗಿರಲಿಲ್ಲ; ಅದು ಕಾರ್ಯನಿರ್ವಹಿಸಲು ಸಂಪೂರ್ಣ ಅನುಮತಿಯಾಗಿತ್ತು. ರಾಜಕೀಯ ಬೆಂಬಲ. ಪ್ರಾಮಾಣಿಕ ರಾಜಕೀಯ ಇಚ್ಛಾಶಕ್ತಿ.
ಈ ನಡೆಗೆ ಪೂರಾ ವಿರುದ್ಧವಾದ ಅನುಭವಗಳೂ ನನಗಿವೆ. ಮತ್ತೊಂದು ಆಡಳಿತದ ಅವಧಿಯಲ್ಲಿ, ಇದೇ ರೀತಿಯ ಪರಿಸ್ಥಿತಿಯಲ್ಲಿ, ಮೇಲಿನಿಂದ ಬಂದ ಆದೇಶವು ಸಂಪೂರ್ಣವಾಗಿ ಭಿನ್ನವಾಗಿತ್ತು. ಆಗ ಬಂದ ಕರೆಯಲ್ಲಿ ”ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳಬೇಡಿ; ಪರಿಸ್ಥಿತಿ ಹಾಗೆಯೇ ಇರಲಿ.” ಎಂದಿದ್ದರು. ಆ ಮಾತು ‘ಯಾರು ಯಾರಿಗಾಗಿ ಆಳುತ್ತಿದ್ದಾರೆ’ ಎಂಬುದನ್ನು ಬಹಿರಂಗಪಡಿಸುತ್ತದೆ.
ಸಿದ್ದರಾಮಯ್ಯ ಎಂದಿಗೂ ಆ ರೀತಿಯ ನಾಯಕನಾಗಿರಲಿಲ್ಲ.
ಅವರು ರಾಜ್ಯದ ಹಣಕಾಸಿನ ಲೆಕ್ಕವನ್ನು ಬೆರಳ ತುದಿಯಲ್ಲಿಟ್ಟುಕೊಂಡಿದ್ದರು; ಪ್ರತಿ ನಡೆಯಲ್ಲಿ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿ ನಿಖರತೆಯಿಂದ ಆಳ್ವಿಕೆ ಮಾಡಿದ ವ್ಯಕ್ತಿ; ಸಮಾಜದ ತಳಮಟ್ಟದಲ್ಲಿರುವ ಜನರ ಪರವಾಗಿ ದೃಢವಾಗಿ ನಿಂತ ವ್ಯಕ್ತಿ.
ನಾನೊಬ್ಬ ರಾಜಕೀಯ ನಾಯಕನಾಗಿ ನಿಜವಾಗಿಯೂ ಗೌರವಿಸುವ ನಾಯಕ ಸಿದ್ದರಾಮಯ್ಯ ಅವರು.
ಅವರ ನಡೆಯ ಉದಾತ್ತ ಪರಂಪರೆ ಅವರು ಘೋಷಿಸಿದ ಯೋಜನೆಗಳಲ್ಲಿಲ್ಲ; ಅವರು ಓದಿದ ಬಜೆಟ್ಗಳಲ್ಲಿಯೂ ಇಲ್ಲ. ಅವರು ಮುಖ್ಯಮಂತ್ರಿಯಾಗಿ ನಡೆದುಕೊಂಡ ರೀತಿಯಲ್ಲೇ ಇದೆ. ಆ ಅಧಿಕಾರಿಗಳಿಗೆ ದೈರ್ಯ ತುಂಬುವ ಆತ್ಮೀಯ ಫೋನ್ ಕರೆಯಲ್ಲಿದೆ. ಆತಂಕಗೊಂಡ ಯುವ ಅಧಿಕಾರಿಗೆ “ಹೋಗಿ ಶಾಂತಿ ಕಾಪಾಡು” ಎಂದು ಅವರು ಹೇಳಿದ ರೀತಿಯಲ್ಲಿದೆ.
ಈಗ, ಅವರು ಅದೇ ಘನತೆಯೊಂದಿಗೆ ತಮ್ಮ ಹುದ್ದೆಯಿಂದ ಕೆಳಗಿಳಿಯುತ್ತಿರುವಾಗ, ನನ್ನ ಹೃದಯವು ಆಳವಾಗಿ ಕಲಕುತ್ತದೆ. ತತ್ವಗಳು ಸ್ಥಾನಗಳಿಗಿಂತ ಹೆಚ್ಚು ಬಾಳಿಕೆ ಬರುವವು ಎಂದು ಯಾವಾಗಲೂ ಅರ್ಥಮಾಡಿಕೊಂಡಿದ್ದ ವ್ಯಕ್ತಿಯ ಉದಾತ್ತ ನಡೆ ಇದು.
ಸಿದ್ದರಾಮಯ್ಯನವರೇ..
ನೀವು ದೀರ್ಘಕಾಲ ಆರೋಗ್ಯದಿಂದಿರಿ ಮತ್ತು ನಮ್ಮನ್ನು ನಿಮ್ಮ ಸುಧೀರ್ಘ ಅನುಭವದಿಂದ ಮಾರ್ಗದರ್ಶನ ಮಾಡಿ ಮುನ್ನಡೆಸಿ. ಕಾಂಗ್ರೆಸ್ ಪಕ್ಷ ಮತ್ತು ಈ ದೇಶಕ್ಕೆ ನೀವು ಎತ್ತಿಹಿಡಿದ ಸಮತೆಯ ತತ್ವ ಮತ್ತು ಆದರ್ಶಗಳ ಮಾರ್ಗದರ್ಶನದ ಅಗತ್ಯವಿದೆ.
