ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸುವ ಐತಿಹಾಸಿಕ ದಿನದಂದೇ ಮಾಧ್ಯಮವೊಂದರ ನಡೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಪ್ರಮುಖ ಕನ್ನಡ ದಿನಪತ್ರಿಕೆಯೊಂದು ತನ್ನ ಮುಖಪುಟದಲ್ಲಿ ಭಾವಿ ಮುಖ್ಯಮಂತ್ರಿಯನ್ನು ಶಿವನ ರೂಪದಲ್ಲಿ ಚಿತ್ರಿಸಿರುವುದು ಸಾರ್ವಜನಿಕರು ಮತ್ತು ಸಾಮಾಜಿಕ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ರಾಜಕೀಯ ಲಾಭ ಹಾಗೂ ಓಲೈಕೆಗಾಗಿ ಧಾರ್ಮಿಕ ಭಾವನೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.
ಬೆಂಗಳೂರು ಮೂಲದ ದಿನಪತ್ರಿಕೆ ‘ವಿಶ್ವವಾಣಿ’ ಬುಧವಾರದ ತನ್ನ ಮುಖ್ಯ ವರದಿಯಲ್ಲಿ ಡಿ.ಕೆ. ಶಿವಕುಮಾರ್ ಅವರ ಮುಖವನ್ನು ಜಟಾಧಾರಿ, ಹುಲಿಚರ್ಮ ಧರಿಸಿದ, ಕೈಯಲ್ಲಿ ತ್ರಿಶೂಲ ಮತ್ತು ಡಮರು ಹಿಡಿದಿರುವ ಶಿವನ ಕಲ್ಪನಾ ಚಿತ್ರದೊಂದಿಗೆ ಪ್ರಕಟಿಸಿತ್ತು. ಇದೇ ಚಿತ್ರವನ್ನು ಪತ್ರಿಕೆಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ್ ಭಟ್ ಅವರು ಸಾಮಾಜಿಕ ಜಾಲತಾಣವಾದ ‘ಎಕ್ಸ್’ ನಲ್ಲಿ ಹಂಚಿಕೊಂಡಿದ್ದರು. ರಾಜ್ಯದ ಅತ್ಯುನ್ನತ ರಾಜಕೀಯ ಅಧಿಕಾರ ಹಿಡಿಯುತ್ತಿರುವ ನಾಯಕನಿಗೆ ಈ ರೀತಿಯ ದೈವತ್ವದ ಪಟ್ಟ ಕಟ್ಟಿರುವುದನ್ನು ಹಲವರು ಕಟುವಾಗಿ ವಿಮರ್ಶಿಸಿದ್ದಾರೆ.
Vishwavani page 1 today pic.twitter.com/KQRTO5LYhx
— Vishweshwar Bhat (@VishweshwarBhat) June 3, 2026
ರಾಜ್ಯ ಸುದ್ದಿ“ಮಿತಿಮೀರಿದ ಚಮಚಾಗಿರಿ” : ಡಿ.ಕೆ. ಶಿವಕುಮಾರ್ ಅವರನ್ನು ‘ಶಿವ’ನನ್ನಾಗಿ ಬಿಂಬಿಸಿದ ಪತ್ರಿಕೆ; ‘ಹೊಗಳುಭಟ್ಟ’ರ ವಿರುದ್ಧ ಸಾರ್ವಜನಿಕ ಆಕ್ರೋಶ!
ಸಾಮಾಜಿಕ ತಾಣದೇವಾಲಯದ ಬಳಿ ಬಡ ವ್ಯಾಪಾರಿಯ ಬಂಧನದ ಬೆನ್ನಲ್ಲೇ ಮುಗಿಬಿದ್ದು ಸಿಹಿ ತಿಂಡಿ ಲೂಟಿ ಮಾಡಿದ ಜನ; ಎತ್ತ ಸಾಗುತ್ತಿದೆ ನಮ್ಮ ನೈತಿಕತೆ?
ಅಂತಾರಾಷ್ಟ್ರೀಯಅಮೆರಿಕ ಶಾಕ್: ಭಾರತದ ವಸ್ತುಗಳಿಗೆ ಶೇ. 12.5 ಹೆಚ್ಚುವರಿ ಸುಂಕ ಪ್ರಸ್ತಾಪ!
ರಾಜ್ಯ ಸುದ್ದಿ“ಆರ್ ಎಸ್ ಎಸ್ ಎಂಬ ಆಧುನಿಕ ಬಸ್ಮಾಸುರ ದೇಶವನ್ನೇ ಸುಡುತ್ತಿದೆ!” ಕಲ್ಲಡ್ಕ ಭಟ್ ಕೋರ್ಟ್ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಕಿಡಿ!
ಕಾಣಿಸದ್ದು - ಕೇಳಿಸದ್ದುಗಂಗಾ ನದಿಯ ಉಗಮ ಸ್ಥಾನದಲ್ಲೇ ಕುಡಿಯುವ ನೀರಿಗೆ ಹಾಹಾಕಾರ: ಉತ್ತರಾಖಂಡದ ದೇವಪ್ರಯಾಗದಲ್ಲಿ ಗ್ರಾಮಸ್ಥರಿಂದ ಪಂಜಿನ ಮೆರವಣಿಗೆ
ಕಾಣಿಸದ್ದು - ಕೇಳಿಸದ್ದುದೆಹಲಿ ಅಗ್ನಿ ದುರಂತ: ತಮ್ಮ ಅಂಗಡಿಯ ಲಕ್ಷಾಂತರ ರೂಪಾಯಿ ಮೌಲ್ಯದ ಹಾಸಿಗೆಗಳನ್ನು ರಸ್ತೆಗೆ ಹಾಸಿ 8 ಜನರ ಪ್ರಾಣ ಉಳಿಸಿದ ರಿಯಾಝುದ್ದೀನ್ – ಅರ್ಮಾನ್
ಸಾಮಾಜಿಕ ತಾಣAI ಎಡಿಟ್ ಮಾಡಿ ಬಿಹಾರದಲ್ಲಿ ಅಭಿವೃದ್ಧಿ ತೋರಿಸಲು ಪ್ರಯತ್ನಿಸಿದ ಬಿಜೆಪಿ; ಅಸಲಿಯತ್ತನ್ನು ಬಯಲಿಗೆಳೆದ ನೆಟ್ಟಿಗರು!
ಕಾಣಿಸದ್ದು - ಕೇಳಿಸದ್ದು‘ಐಐಟಿ ಬಾಬಾ’ ಬಂಧನ: ಆಧ್ಯಾತ್ಮಿಕತೆಯ ಹೆಸರಲ್ಲಿ ಯುವತಿಯರ ಲೈಂಗಿಕ ಕಿರುಕುಳ, ಬ್ಲಾಕ್ಮೇಲ್ ಆರೋಪ!
ರಾಜ್ಯ ಸುದ್ದಿಡಿಕೆ ಶಿವಕುಮಾರ್ ನೇತೃತ್ವದ ನೂತನ ಸರ್ಕಾರಕ್ಕೆ ಇಂದು ಪ್ರಮಾಣ ವಚನ: ಉಪಮುಖ್ಯಮಂತ್ರಿ ಸೇರಿ 13 ಸಚಿವರು ಪ್ರಮಾಣ ವಚನ ಸ್ವೀಕಾರ
ಈ ಚಿತ್ರ ಪ್ರಕಟವಾಗುತ್ತಿದ್ದಂತೆ ಇಂಟರ್ನೆಟ್ನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳನ್ನು ದೇವರ ಸ್ಥಾನದಲ್ಲಿ ಕೂರಿಸುವುದು ಧರ್ಮ ಮತ್ತು ರಾಜಕೀಯ ಎರಡಕ್ಕೂ ಮಾಡುವ ಅಪಚಾರ ಎಂದು ಪ್ರಜ್ಞಾವಂತ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಿರಿಯ ವಕೀಲ ಗಿರೀಶ್ ಭಾರದ್ವಾಜ್ ಸೇರಿದಂತೆ ಹಲವರು ಈ ನಡೆಯನ್ನು ಖಂಡಿಸಿದ್ದು, ರಾಜಕೀಯ ನಿರೂಪಣೆಗಳಿಗಾಗಿ ಧರ್ಮವನ್ನು ಇಷ್ಟು ಲಘುವಾಗಿ ಬಳಸಿಕೊಳ್ಳಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Using Bhagawan Shiva’s image to draw comparisons with politicians like D.K. Shivakumar reflects a disappointing and irresponsible standard of journalism. If this is being done to curry favor with a potential new Chief Minister, it is deeply unfortunate. I never expected such… https://t.co/ntXJTTFAuY
— Girish Bharadwaj (@Girishvhp) June 3, 2026
ಮತ್ತೊಂದೆಡೆ, ಈ ಚಿತ್ರ ಕೇವಲ ಸೃಜನಶೀಲತೆಯಲ್ಲ, ಬದಲಿಗೆ ಪತ್ರಿಕೋದ್ಯಮದ ಮೌಲ್ಯಗಳನ್ನು ಬಲಿಗೊಟ್ಟು ಮಾಡುತ್ತಿರುವ ಅತಿಯಾದ ರಾಜಕೀಯ ಚಮಚಾಗಿರಿ ಎಂದು ನೆಟ್ಟಿಗರು ದೂರಿದ್ದಾರೆ. ಇನ್ನು ಕೆಲವು ಬಳಕೆದಾರರು ಡಿ.ಕೆ. ಶಿವಕುಮಾರ್ ಅವರ ಹಿಂದಿನ ಕಾನೂನು ಹೋರಾಟಗಳು ಹಾಗೂ ತಿಹಾರ್ ಜೈಲುವಾಸದ ದಿನಗಳನ್ನು ನೆನಪಿಸಿ, ಇಂತಹ ಹಿನ್ನೆಲೆಯುಳ್ಳ ರಾಜಕಾರಣಿಯನ್ನು ಪವಿತ್ರ ದೇವರಿಗೆ ಹೋಲಿಸಿರುವುದು ಅತ್ಯಂತ ಆಘಾತಕಾರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಲಾತ್ಮಕವಾಗಿಯೂ ಈ ಚಿತ್ರ ಅತ್ಯಂತ ಕಳಪೆಯಾಗಿ ಮೂಡಿಬಂದಿದೆ ಎಂದು ಕೆಲವರು ವ್ಯಂಗ್ಯವಾಡಿದ್ದಾರೆ.
This is just not acceptable, he may be close to you and favour you, depleting him in this manner is hurting religious sentiments and belief. Very low standard journalism. https://t.co/kGDavjzAag
— Adv.Manjunath B N (@manjunatraj) June 3, 2026
ಭಟ್ಟರೇ,
— Shivakumar GV INDICA (@SaamaanyaJ) June 3, 2026
ಪ್ರತಿದಿನವೂ ಒಂದೊಂದೇ ಮೆಟ್ಟಿಲನ್ನು ಇಳಿಯುತ್ತಿದ್ದೀರಲ್ಲಾ? ಇದು ನಿಮಗೆ ತರವೇ?
ನಿಮಗಿರುವಷ್ಟು ಓದು, ಅನುಭವ ಇನ್ಯಾರಿಗೂ ಇಲ್ಲ. ನೀವು ಎಲ್ಲರಿಗೂ ದಾರಿದೀಪವಾಗುವುದನ್ನು ಬಿಟ್ಟು ಹೀಗೆ ಪ್ರತಿಕೋದ್ಯಮದ ಪ್ರತಿಯೊಂದು ಮೌಲ್ಯವನ್ನೂ ತೊರೆದು ನಿಲ್ಲುವುದು ಅವಶ್ಯಕವೇ?
print ಮಾಡುವುದಕ್ಕೆ ಒಮ್ಮೆ ಪುಟವನ್ನು ನೋಡಿದ್ದರೆ ಸಾಕಿತ್ತು.… https://t.co/xYGueuFoak
If Senior Journalists like him equate DKS to Bhagavan Shiva, what credibility is left in Journalism 🤦 https://t.co/84COdrrlTg
— Adarsh Hegde (@adarshahgd) June 3, 2026
Only Godi media has sycophancy? https://t.co/sfJOWQCUAh
— Anand Sankar (@saybwala) June 3, 2026
Sorry @Akshita_N. I trolled for calling him King of Karnataka. These guys have gone to another level by making him God. 😐😐 https://t.co/2YMwDR0g0B
— Ajay Rotti (@ajayrotti) June 3, 2026
What a fall of journalism.. lack of editorial standards .. try depicting other religions
— Siddarth Pai (@siddarthpaim) June 3, 2026
ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶದ ನಂತರ ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವಿನ ಸುದೀರ್ಘ ಅಧಿಕಾರ ಹಂಚಿಕೆಯ ಗೊಂದಲಕ್ಕೆ ತೆರೆಬಿದ್ದಿದ್ದು, ಬೆಂಗಳೂರಿನ ಲೋಕಭವನದ ಗ್ಲಾಸ್ ಹೌಸ್ನಲ್ಲಿ ಇಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆದಿದೆ. ರಾಜ್ಯದ ರಾಜಕೀಯ ಇತಿಹಾಸದಲ್ಲಿ ಇದೊಂದು ಪ್ರಮುಖ ತಿರುವು ಆಗಿದ್ದರೂ, ಇಂದಿನ ಶುಭ ದಿನದಂದು ಮಾಧ್ಯಮವೊಂದು ಸೃಷ್ಟಿಸಿದ ಈ ಧಾರ್ಮಿಕ ವಿವಾದವೇ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಚರ್ಚೆಗೀಡಾಗಿದೆ. ಸದ್ಯಕ್ಕೆ ಈ ವಿವಾದದ ಕುರಿತು ಪತ್ರಿಕೆಯ ಸಂಪಾದಕರಿಂದಾಗಲಿ ಅಥವಾ ಮುಖ್ಯಮಂತ್ರಿ ಕಚೇರಿಯಿಂದಾಗಲಿ ಯಾವುದೇ ಅಧಿಕೃತ ಸ್ಪಷ್ಟನೆ ಹೊರಬಿದ್ದಿಲ್ಲ.
