ಆಧ್ಯಾತ್ಮಿಕತೆಯ ಹೆಸರಿನಲ್ಲಿ ಸುಶಿಕ್ಷಿತ ಯುವತಿಯರನ್ನು ಸೆಳೆದು ಲೈಂಗಿಕ ಶೋಷಣೆ ಹಾಗೂ ಬ್ಲಾಕ್ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ಐಐಟಿ ರೂರ್ಕಿ ಸಂಸ್ಥೆಯ ಪದವೀಧರನೊಬ್ಬನನ್ನು ಉತ್ತರ ಪ್ರದೇಶದ ಮಥುರಾ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯವಾಗಿ ‘ಐಐಟಿ ಬಾಬಾ’ ಎಂದೇ ಚರ್ಚೆಗೆ ಒಳಗಾಗಿರುವ, ಒಡಿಶಾದ ಭುವನೇಶ್ವರ ಮೂಲದ 29 ವರ್ಷದ ಅಭಿಷೇಕ್ ಮಿಶ್ರಾ ಬಂಧಿತ ಆರೋಪಿಯಾಗಿದ್ದಾನೆ. ಈತ ಮಥುರಾದ ಗೋವರ್ಧನ ವ್ಯಾಪ್ತಿಯ ರಾಧಾ ಕುಂಡ್ ಪ್ರದೇಶದಲ್ಲಿ ಆಶ್ರಮದಂತಹ ವಸತಿ ನಿರ್ಮಿಸಿಕೊಂಡು, ತನ್ನನ್ನು ತಾನು ಆಧ್ಯಾತ್ಮಿಕ ಗುರು ಎಂದು ಬಿಂಬಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಛತ್ತೀಸ್ಗಢ ಮೂಲದ 22 ವರ್ಷದ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿನಿ ನೀಡಿದ ದೂರಿನ ಆಧಾರದ ಮೇಲೆ ಜೂನ್ 1, 2026 ರಂದು ಈ ಬಂಧನ ನಡೆದಿದೆ. ಆರೋಪಿ ಅಭಿಷೇಕ್ ಮಿಶ್ರಾ ಸಾಮಾಜಿಕ ಜಾಲತಾಣಗಳಲ್ಲಿ ‘ಆದಿಕರ್ತ ನಾರಾಯಣ ದಾಸ್’ ಎಂಬ ಹೆಸರಿನಲ್ಲಿ ಸಕ್ರಿಯನಾಗಿದ್ದ. ಭಗವದ್ಗೀತೆಯ ಕುರಿತು ಆನ್ಲೈನ್ ಮೂಲಕ ಪ್ರವಚನಗಳನ್ನು ನೀಡುತ್ತಾ ಐಟಿ ಉದ್ಯೋಗಿಗಳು, ಎಂಜಿನಿಯರ್ಗಳು ಹಾಗೂ ಸುಶಿಕ್ಷಿತ ಯುವತಿಯರನ್ನು ತನ್ನತ್ತ ಆಕರ್ಷಿಸುತ್ತಿದ್ದ ಎನ್ನಲಾಗಿದೆ. ದೂರು ನೀಡಿರುವ ಯುವತಿಯನ್ನು ತನ್ನ ನಿವಾಸಕ್ಕೆ ಕರೆಸಿಕೊಂಡಿದ್ದ ಆರೋಪಿ, ಪ್ರಸಾದ ಎಂದು ನಂಬಿಸಿ ಹಾಲಿನಲ್ಲಿ ಮಾದಕ ದ್ರವ್ಯ ಬೆರೆಸಿ ನೀಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಈ ಕೃತ್ಯವನ್ನು ವಿಡಿಯೋ ಚಿತ್ರೀಕರಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ 5 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಮಥುರಾ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಸುರೇಶ್ ಚಂದ್ರ ರಾವತ್ ಅವರು ನೀಡಿರುವ ಮಾಹಿತಿಯ ಪ್ರಕಾರ, ಆರೋಪಿ ಅಭಿಷೇಕ್ ಮಿಶ್ರಾ ಐಐಟಿ ರೂರ್ಕಿಯಲ್ಲಿ 2017-2021 ರ ಅವಧಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಮುಗಿಸಿದ್ದ. ವಾರ್ಷಿಕ 20 ಲಕ್ಷ ರೂಪಾಯಿ ಪ್ಯಾಕೇಜ್ನ ಕಾರ್ಪೊರೇಟ್ ಕೆಲಸದಲ್ಲಿದ್ದ ಈತ, ಮೂರು ವರ್ಷಗಳ ಹಿಂದೆ ಅದನ್ನು ತೊರೆದು ಮಥುರಾಕ್ಕೆ ಬಂದಿದ್ದ. ಮೊದಲು ಬಾಡಿಗೆ ಮನೆಯಲ್ಲಿದ್ದ ಈತ, ನಂತರ ಸ್ವಂತ ಮನೆ ಖರೀದಿಸಿ ಅದನ್ನು ಆಶ್ರಮದ ಮಾದರಿಯಲ್ಲಿ ಬದಲಾಯಿಸಿಕೊಂಡು ಭಕ್ತರಿಗೆ ಆಶ್ರಯ ನೀಡಲು ಆರಂಭಿಸಿದ್ದ.
AI ಎಡಿಟ್ ಮಾಡಿ ಬಿಹಾರದಲ್ಲಿ ಅಭಿವೃದ್ಧಿ ತೋರಿಸಲು ಪ್ರಯತ್ನಿಸಿದ ಬಿಜೆಪಿ; ಅಸಲಿಯತ್ತನ್ನು ಬಯಲಿಗೆಳೆದ ನೆಟ್ಟಿಗರು!
ಡಿಕೆ ಶಿವಕುಮಾರ್ ನೇತೃತ್ವದ ನೂತನ ಸರ್ಕಾರಕ್ಕೆ ಇಂದು ಪ್ರಮಾಣ ವಚನ: ಉಪಮುಖ್ಯಮಂತ್ರಿ ಸೇರಿ 13 ಸಚಿವರು ಪ್ರಮಾಣ ವಚನ ಸ್ವೀಕಾರ
“ಮಿತಿಮೀರಿದ ಚಮಚಾಗಿರಿ” : ಡಿ.ಕೆ. ಶಿವಕುಮಾರ್ ಅವರನ್ನು ‘ಶಿವ’ನನ್ನಾಗಿ ಬಿಂಬಿಸಿದ ಪತ್ರಿಕೆ; ‘ಹೊಗಳುಭಟ್ಟ’ರ ವಿರುದ್ಧ ಸಾರ್ವಜನಿಕ ಆಕ್ರೋಶ!
ದೇವಾಲಯದ ಬಳಿ ಬಡ ವ್ಯಾಪಾರಿಯ ಬಂಧನದ ಬೆನ್ನಲ್ಲೇ ಮುಗಿಬಿದ್ದು ಸಿಹಿ ತಿಂಡಿ ಲೂಟಿ ಮಾಡಿದ ಜನ; ಎತ್ತ ಸಾಗುತ್ತಿದೆ ನಮ್ಮ ನೈತಿಕತೆ?
“ಆರ್ ಎಸ್ ಎಸ್ ಎಂಬ ಆಧುನಿಕ ಬಸ್ಮಾಸುರ ದೇಶವನ್ನೇ ಸುಡುತ್ತಿದೆ!” ಕಲ್ಲಡ್ಕ ಭಟ್ ಕೋರ್ಟ್ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಕಿಡಿ!
‘ಐಐಟಿ ಬಾಬಾ’ ಬಂಧನ: ಆಧ್ಯಾತ್ಮಿಕತೆಯ ಹೆಸರಲ್ಲಿ ಯುವತಿಯರ ಲೈಂಗಿಕ ಕಿರುಕುಳ, ಬ್ಲಾಕ್ಮೇಲ್ ಆರೋಪ!
ಗಂಗಾ ನದಿಯ ಉಗಮ ಸ್ಥಾನದಲ್ಲೇ ಕುಡಿಯುವ ನೀರಿಗೆ ಹಾಹಾಕಾರ: ಉತ್ತರಾಖಂಡದ ದೇವಪ್ರಯಾಗದಲ್ಲಿ ಗ್ರಾಮಸ್ಥರಿಂದ ಪಂಜಿನ ಮೆರವಣಿಗೆ
ದೆಹಲಿ ಅಗ್ನಿ ದುರಂತ: ತಮ್ಮ ಅಂಗಡಿಯ ಲಕ್ಷಾಂತರ ರೂಪಾಯಿ ಮೌಲ್ಯದ ಹಾಸಿಗೆಗಳನ್ನು ರಸ್ತೆಗೆ ಹಾಸಿ 8 ಜನರ ಪ್ರಾಣ ಉಳಿಸಿದ ರಿಯಾಝುದ್ದೀನ್ – ಅರ್ಮಾನ್
ಅಮೆರಿಕ ಶಾಕ್: ಭಾರತದ ವಸ್ತುಗಳಿಗೆ ಶೇ. 12.5 ಹೆಚ್ಚುವರಿ ಸುಂಕ ಪ್ರಸ್ತಾಪ!
ತನಿಖೆಯ ವೇಳೆ ಅತ್ಯಂತ ಆಘಾತಕಾರಿ ಅಂಶವೊಂದು ಹೊರಬಿದ್ದಿದ್ದು, ಆರೋಪಿಯು ತನ್ನ ಆಶ್ರಮಕ್ಕೆ ಬರುವ ಸುಶಿಕ್ಷಿತ ಯುವತಿಯರನ್ನು ವ್ಯವಸ್ಥಿತವಾಗಿ ಬ್ರೈನ್ವಾಶ್ ಮಾಡುತ್ತಿದ್ದ. ಗುಂಪಿನಲ್ಲಿದ್ದ ಯುವತಿಯರನ್ನು ಪುಸಲಾಯಿಸಲು ಮತ್ತು ತನ್ನ ಕೃತ್ಯಗಳಿಗೆ ಧಾರ್ಮಿಕ ಮುಖವಾಡ ತೊಡಿಸಲು ಈತ ‘ಗಂಧರ್ವ ವಿವಾಹ’ದ ತಂತ್ರವನ್ನು ಬಳಸುತ್ತಿದ್ದ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಪುರಾತನ ಸಂಪ್ರದಾಯದ ಪ್ರಕಾರ ಯಾವುದೇ ಅಗ್ನಿ ಸಾಕ್ಷಿ, ಮಂತ್ರ-ಮಾಂಗಲ್ಯ, ಹಿರಿಯರ ಒಪ್ಪಿಗೆ ಅಥವಾ ಸಾಮಾಜಿಕ ಆಚರಣೆಗಳಿಲ್ಲದೆ ಕೇವಲ ಇಬ್ಬರ ಪರಸ್ಪರ ಒಪ್ಪಿಗೆಯಿಂದ ಆಗುವ ವಿವಾಹ ಪದ್ಧತಿಯನ್ನು ಈತ ತನ್ನ ಶೋಷಣೆಗೆ ದಾಳವಾಗಿಸಿಕೊಂಡಿದ್ದ. ಇಂತಹ ಮುಖವಾಡದ ಅಡಿಯಲ್ಲಿ ಈತ ಯುವತಿಯರೊಂದಿಗೆ ದೈಹಿಕ ಸಂಪರ್ಕ ಬೆಳೆಸುತ್ತಿದ್ದ ಹಾಗೂ ತನ್ನ ಅನುಯಾಯಿಗಳ ನಡುವೆಯೂ ಇಂತಹ ಅನಧಿಕೃತ ಸಂಬಂಧಗಳನ್ನು ಪ್ರೋತ್ಸಾಹಿಸುತ್ತಿದ್ದ ಎಂದು ಗೋವರ್ಧನ ವೃತ್ತದ ಡಿಎಸ್ಪಿ ಅನಿಲ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
#WATCH | Mathura, Uttar Pradesh: SP Rural Suresh Chand Rawat says, "A case has come to light at the Govardhan Police Station in the Mathura district. In the Radha Kund locality, a young man had been residing for approximately 6 years, claiming to be a preacher who delivered… pic.twitter.com/cDFCfkZKfP
— ANI UP/Uttarakhand (@ANINewsUP) June 3, 2026
ಬಂಧನದ ವೇಳೆ ಪೊಲೀಸರು ಆರೋಪಿಯ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದು, ಅದರಲ್ಲಿ 12 ಕ್ಕೂ ಹೆಚ್ಚು ಆಕ್ಷೇಪಾರ್ಹ ಚಿತ್ರಗಳು ಮತ್ತು ವಿಡಿಯೋಗಳು ಪತ್ತೆಯಾಗಿವೆ. ಇದೇ ವೇಳೆ ಆಶ್ರಮದ ಆವರಣದಲ್ಲಿದ್ದ ಬಿಲಾಸಪುರದ ಯುವತಿ, ಮಧ್ಯಪ್ರದೇಶದ ಛತ್ತರಪುರದ ಯುವತಿ ಹಾಗೂ ಒಬ್ಬ ಯುವಕನನ್ನು ಪೊಲೀಸರು ರಕ್ಷಿಸಿ ಅವರ ಪೋಷಕರಿಗೆ ಒಪ್ಪಿಸಿದ್ದಾರೆ. ಮೇ 25 ರಂದೇ ಗೋವರ್ಧನ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯಡಿ ಅತ್ಯಾಚಾರ, ಸುಲಿಗೆ, ಕ್ರಿಮಿನಲ್ ಬೆದರಿಕೆ ಹಾಗೂ ಲೈಂಗಿಕ ಕಿರುಕುಳ ಕಾಯ್ದೆಯಡಿ ಎಫ್ಐಆರ್ ದಾಖಲಾಗಿತ್ತು. ಸದ್ಯ ಆರೋಪಿಯನ್ನು ಜೈಲಿಗಟ್ಟಲಾಗಿದ್ದು, ಈತನ ಜಾಲಕ್ಕೆ ಬಿದ್ದಿರುವ ಇತರ ಸಂತ್ರಸ್ತರ ಬಗ್ಗೆ ತನಿಖೆ ಮುಂದುವರಿದಿದೆ.
