ನವದೆಹಲಿ: ದಕ್ಷಿಣ ದೆಹಲಿಯ ಮಾಳವೀಯ ನಗರದ ಹೌಜ್ ರಾಣಿ ಪ್ರದೇಶದ ‘ಫ್ಲರಿಶ್ ಸ್ಟೇ’ ಹೋಟೆಲ್ನಲ್ಲಿ ಜೂನ್ 3ರ ಬುಧವಾರ ಬೆಳಿಗ್ಗೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 21 ಜನರು ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಬೆಳಿಗ್ಗೆ ಸುಮಾರು 8:48ಕ್ಕೆ ಕಟ್ಟಡದ ನೆಲಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿ ಮತ್ತು ದಟ್ಟ ಹೊಗೆಯಿಂದಾಗಿ ಮೇಲಿನ ಮಹಡಿಯಲ್ಲಿದ್ದವರು ಹೊರಬರಲಾಗದೆ ಸಿಲುಕಿಕೊಂಡಿದ್ದರು. ಈ ಸಂದರ್ಭದಲ್ಲಿ ಹೋಟೆಲ್ ಎದುರಿನ ಹಾಸಿಗೆ ಅಂಗಡಿ ಮಾಲೀಕ ಮೊಹಮ್ಮದ್ ರಿಯಾಝುದ್ದೀನ್ ಮನ್ಸೂರಿ ಮತ್ತು ಅವರ ಪುತ್ರ ಅರ್ಮಾನ್ ತೋರಿದ ಸಮಯಪ್ರಜ್ಞೆ ಹಲವರ ಪ್ರಾಣ ಉಳಿಸಿದೆ.
VIDEO | Delhi Malviya Nagar fire: A shop owner laid out around 20-22 mattresses from his shop so that people could safely jump on them to escape fire.
— Press Trust of India (@PTI_News) June 3, 2026
Shop owner Armaan says, "I have my shop here, I got information about the fire, there was a massive fire, nobody could get… pic.twitter.com/9mY8uaVhQx
ಕಟ್ಟಡದ ಒಳಗೆ ಸಿಲುಕಿದ್ದ ಪ್ರವಾಸಿಗರು ಜೀವ ಉಳಿಸಿಕೊಳ್ಳಲು ಕಿಟಕಿಗಳಿಂದ ಕೆಳಗೆ ಜಿಗಿಯಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿದ ರಿಯಾಜುದ್ದೀನ್, ತಕ್ಷಣವೇ ತಮ್ಮ ಅಂಗಡಿಯಲ್ಲಿದ್ದ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ 20 ರಿಂದ 25 ಹಾಸಿಗೆಗಳು ಮತ್ತು ರಗ್ಗುಗಳನ್ನು ರಸ್ತೆಯ ಮೇಲೆ ತಂದು ಹಾಸಿದರು. ಮೇಲಿನ ಮಹಡಿಗಳಿಂದ ಜಿಗಿಯುವವರಿಗೆ ಇದು ಸುರಕ್ಷಿತ ಆಸರೆಯಾಯಿತು.
ಗಂಗಾ ನದಿಯ ಉಗಮ ಸ್ಥಾನದಲ್ಲೇ ಕುಡಿಯುವ ನೀರಿಗೆ ಹಾಹಾಕಾರ: ಉತ್ತರಾಖಂಡದ ದೇವಪ್ರಯಾಗದಲ್ಲಿ ಗ್ರಾಮಸ್ಥರಿಂದ ಪಂಜಿನ ಮೆರವಣಿಗೆ
ದೆಹಲಿ ಅಗ್ನಿ ದುರಂತ: ತಮ್ಮ ಅಂಗಡಿಯ ಲಕ್ಷಾಂತರ ರೂಪಾಯಿ ಮೌಲ್ಯದ ಹಾಸಿಗೆಗಳನ್ನು ರಸ್ತೆಗೆ ಹಾಸಿ 8 ಜನರ ಪ್ರಾಣ ಉಳಿಸಿದ ರಿಯಾಝುದ್ದೀನ್ – ಅರ್ಮಾನ್
‘ಐಐಟಿ ಬಾಬಾ’ ಬಂಧನ: ಆಧ್ಯಾತ್ಮಿಕತೆಯ ಹೆಸರಲ್ಲಿ ಯುವತಿಯರ ಲೈಂಗಿಕ ಕಿರುಕುಳ, ಬ್ಲಾಕ್ಮೇಲ್ ಆರೋಪ!
“ಆರ್ ಎಸ್ ಎಸ್ ಎಂಬ ಆಧುನಿಕ ಬಸ್ಮಾಸುರ ದೇಶವನ್ನೇ ಸುಡುತ್ತಿದೆ!” ಕಲ್ಲಡ್ಕ ಭಟ್ ಕೋರ್ಟ್ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಕಿಡಿ!
“ಮಿತಿಮೀರಿದ ಚಮಚಾಗಿರಿ” : ಡಿ.ಕೆ. ಶಿವಕುಮಾರ್ ಅವರನ್ನು ‘ಶಿವ’ನನ್ನಾಗಿ ಬಿಂಬಿಸಿದ ಪತ್ರಿಕೆ; ‘ಹೊಗಳುಭಟ್ಟ’ರ ವಿರುದ್ಧ ಸಾರ್ವಜನಿಕ ಆಕ್ರೋಶ!
AI ಎಡಿಟ್ ಮಾಡಿ ಬಿಹಾರದಲ್ಲಿ ಅಭಿವೃದ್ಧಿ ತೋರಿಸಲು ಪ್ರಯತ್ನಿಸಿದ ಬಿಜೆಪಿ; ಅಸಲಿಯತ್ತನ್ನು ಬಯಲಿಗೆಳೆದ ನೆಟ್ಟಿಗರು!
ಡಿಕೆ ಶಿವಕುಮಾರ್ ನೇತೃತ್ವದ ನೂತನ ಸರ್ಕಾರಕ್ಕೆ ಇಂದು ಪ್ರಮಾಣ ವಚನ: ಉಪಮುಖ್ಯಮಂತ್ರಿ ಸೇರಿ 13 ಸಚಿವರು ಪ್ರಮಾಣ ವಚನ ಸ್ವೀಕಾರ
ಅಮೆರಿಕ ಶಾಕ್: ಭಾರತದ ವಸ್ತುಗಳಿಗೆ ಶೇ. 12.5 ಹೆಚ್ಚುವರಿ ಸುಂಕ ಪ್ರಸ್ತಾಪ!
ದೇವಾಲಯದ ಬಳಿ ಬಡ ವ್ಯಾಪಾರಿಯ ಬಂಧನದ ಬೆನ್ನಲ್ಲೇ ಮುಗಿಬಿದ್ದು ಸಿಹಿ ತಿಂಡಿ ಲೂಟಿ ಮಾಡಿದ ಜನ; ಎತ್ತ ಸಾಗುತ್ತಿದೆ ನಮ್ಮ ನೈತಿಕತೆ?
मालवीय नगर के जिस होटल में आग लगी, वहीं एक मुस्लिम दुकानदार रियाजुद्दीन की गद्दों की दुकान थी। दुकानदार ने जब देखा होटल में फंसे लोग दूसरी तीसरी मंज़िल से कूदने वाले हैं तो उन्होंने दुकान के सारे गद्दे सड़क पर डाल दिए। आग में फंसे लोग एक एक करके सड़क पर पड़े गद्दों पर कूदते रहे। pic.twitter.com/9r3paJmHjv
— Muhammad Shaheen (@Md_Shaheen_Rana) June 4, 2026
ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸುವ ಮೊದಲೇ ಈ ತಂದೆ-ಮಗ ಸ್ಥಳೀಯರ ನೆರವಿನೊಂದಿಗೆ ಕನಿಷ್ಠ ಎಂಟು ಜನರ ಪ್ರಾಣವನ್ನು ಪ್ರತ್ಯಕ್ಷವಾಗಿ ಉಳಿಸಿದ್ದಾರೆ. ಮೇಲಿನಿಂದ ಬಿದ್ದ ರಭಸಕ್ಕೆ ಹಾಸಿಗೆಗಳು ರಕ್ಷಣಾ ಕವಚವಾದ ಕಾರಣ ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಈ ರಕ್ಷಣಾ ಕಾರ್ಯದ ವೇಳೆ ರಿಯಾಝುದ್ದೀನ್ ಮತ್ತು ಅರ್ಮಾನ್ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಇವರ ಕಾರ್ಯವನ್ನು ಕಂಡು ಸುತ್ತಮುತ್ತಲಿನ ಸ್ಥಳೀಯರು ಕೂಡ ರಕ್ಷಣೆಗೆ ಕೈಜೋಡಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ.
#NDTVExclusive | ‘दो लाख रुपये के गद्दे मैंने लोगों को बचाने के लिए बिछा दिए… मुझे सुकून है कि इस वजह से 8-12 लोगों की जान बच गई…’- NDTV से बोले गद्दे की दुकान के मालिक रियाजुद्दीन@ravishranjanshu | #Delhi | #MalviyaNagar pic.twitter.com/L71tG4S5d3
— NDTV India (@ndtvindia) June 4, 2026
ತಮ್ಮ ವ್ಯಾಪಾರದ ಸರಕುಗಳು ನಷ್ಟವಾಗುತ್ತಿದ್ದರೂ ಜನರ ಜೀವ ಉಳಿಸಲು ಮುಂದಾದ ರಿಯಾಝುದ್ದೀನ್ ಅವರ ನಡೆಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. NDTV ವರದಿ ಪ್ರಕಾರ,ಈ ಕುರಿತು ಮಾತನಾಡಿದ ಅವರು, “ನಾವೆಲ್ಲರೂ ಹಿಂದುಸ್ತಾನಿಗಳು. ಸಂಕಷ್ಟದಲ್ಲಿದ್ದ ನಮ್ಮ ಸಹೋದರರನ್ನು ರಕ್ಷಿಸುವುದು ನನ್ನ ಕರ್ತವ್ಯವಾಗಿತ್ತು” ಎಂದು ಹೇಳಿದ್ದಾರೆ. ಸದ್ಯ ಹೋಟೆಲ್ನಲ್ಲಿ ಸುರಕ್ಷತಾ ನಿಯಮಗಳ ಉಲ್ಲಂಘನೆ ಆಗಿರುವ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಕಟ್ಟಡದ ಮಾಲೀಕನನ್ನು ಬಂಧಿಸಲಾಗಿದೆ. ಕಿರಿದಾದ ಗಲ್ಲಿಗಳ ನಡುವೆಯೂ ರಿಯಾಜುದ್ದೀನ್ ಮತ್ತು ಸ್ಥಳೀಯರು ತೋರಿದ ಸಮಯಪ್ರಜ್ಞೆಯಿಂದಾಗಿ ಹೆಚ್ಚಿನ ಪ್ರಾಣಹಾನಿ ತಪ್ಪಿದಂತಾಗಿದೆ.
