ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ (ಸಿಬಿಎಸ್ಇ) ಹೊಸ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯಲ್ಲಾದ ಎಡವಟ್ಟನ್ನು ಪ್ರಶ್ನಿಸಿ ಸೋಷಿಯಲ್ ಮೀಡಿಯಾದಲ್ಲಿ ಧ್ವನಿ ಎತ್ತಿದ ದೆಹಲಿಯ 12ನೇ ತರಗತಿಯ ವಿದ್ಯಾರ್ಥಿಯೊಬ್ಬ ತೀವ್ರ ಸೈಬರ್ ದಾಳಿಗೆ ತುತ್ತಾಗಿದ್ದಾನೆ. ತನಗಾದ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಆತನನ್ನು ‘ಪಾಕಿಸ್ತಾನಿ’ ಮತ್ತು ‘ದೇಶದ್ರೋಹಿ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಲಾಗಿದೆ. ತೀವ್ರ ಆಕ್ರೋಶದ ಬಳಿಕ ಎಚ್ಚೆತ್ತ ಸಿಬಿಎಸ್ಇ ಮಂಡಳಿಯು ತನ್ನ ತಪ್ಪನ್ನು ಒಪ್ಪಿಕೊಂಡು, ವಿದ್ಯಾರ್ಥಿಗೆ ಸರಿಯಾದ ಉತ್ತರ ಪತ್ರಿಕೆಯನ್ನು ಒದಗಿಸಿದೆ. ಸಾಂಸ್ಥಿಕ ಲೋಪದೋಷಗಳ ವಿರುದ್ಧ ಧ್ವನಿ ಎತ್ತುವ ಸಾಮಾನ್ಯ ನಾಗರಿಕರು ಮತ್ತು ವಿದ್ಯಾರ್ಥಿಗಳು ಎದುರಿಸುತ್ತಿರುವ ಆನ್ಲೈನ್ ದೌರ್ಜನ್ಯಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ.
ದೆಹಲಿಯ ವಿದ್ಯಾರ್ಥಿ ವೇದಾಂತ್ ಶ್ರೀವಾಸ್ತವ್ ಮೇ 13 ರಂದು ಪ್ರಕಟವಾದ ಸಿಬಿಎಸ್ಇ 12ನೇ ತರಗತಿಯ ಫಲಿತಾಂಶದಲ್ಲಿ ಭೌತಶಾಸ್ತ್ರ (Physics) ವಿಷಯದಲ್ಲಿ ತನಗೆ ಬಂದ ಅಂಕಗಳನ್ನು ನೋಡಿ ಆಘಾತಕ್ಕೊಳಗಾಗಿದ್ದ. ತಾನು ಚೆನ್ನಾಗಿ ಪರೀಕ್ಷೆ ಬರೆದಿದ್ದರೂ ಕಡಿಮೆ ಅಂಕ ಬಂದಿದ್ದರಿಂದ ಅನುಮಾನಗೊಂಡು ಉತ್ತರ ಪತ್ರಿಕೆಯ ನಕಲು ಪ್ರತಿಗಾಗಿ ಅರ್ಜಿ ಸಲ್ಲಿಸಿದ್ದ. ಮೇ 23 ರಂದು ಸಿಕ್ಕ ಸ್ಕ್ಯಾನ್ ಪ್ರತಿಯನ್ನು ಪರಿಶೀಲಿಸಿದಾಗ, ಆ ಉತ್ತರ ಪತ್ರಿಕೆಯಲ್ಲಿದ್ದ ಕೈಬರಹವಾಗಲಿ ಅಥವಾ ಉತ್ತರಿಸಿದ್ದ ಪ್ರಶ್ನೆಗಳಾಗಲಿ ಆತನದ್ದಾಗಿರಲಿಲ್ಲ. ತನ್ನದೇ ರೋಲ್ ನಂಬರ್ ಅಡಿಯಲ್ಲಿ ಬೇರೆ ಯಾರದ್ದೋ ಉತ್ತರ ಪತ್ರಿಕೆಯನ್ನು ಅಪ್ಲೋಡ್ ಮಾಡಿರುವುದನ್ನು ಆತ ಪತ್ತೆಹಚ್ಚಿದ್ದ. ತನ್ನ ಇಂಗ್ಲಿಷ್ ಮತ್ತು ಕಂಪ್ಯೂಟರ್ ಸೈನ್ಸ್ ಪರೀಕ್ಷೆಯ ಉತ್ತರ ಪತ್ರಿಕೆಗಳ ಕೈಬರಹದೊಂದಿಗೆ ಇದನ್ನು ಹೋಲಿಸಿ ತನಗಾದ ಅನ್ಯಾಯವನ್ನು ಸಾಬೀತುಪಡಿಸಿದ್ದ.
ಈ ಸಾಕ್ಷ್ಯಗಳನ್ನು ವೇದಾಂತ್ ‘ಎಕ್ಸ್’ (ಟ್ವಿಟರ್) ಜಾಲತಾಣದಲ್ಲಿ ಹಂಚಿಕೊಂಡು, ಸಿಬಿಎಸ್ಇ ಹೊಸದಾಗಿ ಜಾರಿಗೆ ತಂದಿರುವ ‘ಆನ್-ಸ್ಕ್ರೀನ್ ಮಾರ್ಕಿಂಗ್’ (OSM) ಡಿಜಿಟಲ್ ವ್ಯವಸ್ಥೆಯ ಲೋಪವನ್ನು ಸಾರ್ವಜನಿಕವಾಗಿ ಪ್ರಶ್ನಿಸಿದ್ದ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಿದ್ದಂತೆ ಸಿಬಿಎಸ್ಇ ಅಧಿಕಾರಿಗಳು ವಿದ್ಯಾರ್ಥಿಯ ಕುಟುಂಬವನ್ನು ಸಂಪರ್ಕಿಸಿದ್ದಾರೆ. ಮೇ 25 ರಂದು ಇಮೇಲ್ ಮೂಲಕ ಪ್ರತಿಕ್ರಿಯಿಸಿದ ಸಿಬಿಎಸ್ಇ ಜಂಟಿ ಕಾರ್ಯದರ್ಶಿ, ಉತ್ತರ ಪತ್ರಿಕೆ ಅದಲುಬದಲಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ತಾಂತ್ರಿಕ ದೋಷದಿಂದ ಈ ಎಡವಟ್ಟಾಗಿದೆ ಎಂದು ಸ್ಪಷ್ಟಪಡಿಸಿದ ಮಂಡಳಿಯು, ವೇದಾಂತ್ ಅವರ ಅಸಲಿ ಉತ್ತರ ಪತ್ರಿಕೆಯನ್ನು ಕಳುಹಿಸಿಕೊಟ್ಟಿದ್ದು, ಅಂಕಗಳನ್ನು ಪರಿಷ್ಕರಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ತಿಳಿಸಿದೆ.
ದೇವಾಲಯದ ಬಳಿ ಬಡ ವ್ಯಾಪಾರಿಯ ಬಂಧನದ ಬೆನ್ನಲ್ಲೇ ಮುಗಿಬಿದ್ದು ಸಿಹಿ ತಿಂಡಿ ಲೂಟಿ ಮಾಡಿದ ಜನ; ಎತ್ತ ಸಾಗುತ್ತಿದೆ ನಮ್ಮ ನೈತಿಕತೆ?
‘ಐಐಟಿ ಬಾಬಾ’ ಬಂಧನ: ಆಧ್ಯಾತ್ಮಿಕತೆಯ ಹೆಸರಲ್ಲಿ ಯುವತಿಯರ ಲೈಂಗಿಕ ಕಿರುಕುಳ, ಬ್ಲಾಕ್ಮೇಲ್ ಆರೋಪ!
“ಮಿತಿಮೀರಿದ ಚಮಚಾಗಿರಿ” : ಡಿ.ಕೆ. ಶಿವಕುಮಾರ್ ಅವರನ್ನು ‘ಶಿವ’ನನ್ನಾಗಿ ಬಿಂಬಿಸಿದ ಪತ್ರಿಕೆ; ‘ಹೊಗಳುಭಟ್ಟ’ರ ವಿರುದ್ಧ ಸಾರ್ವಜನಿಕ ಆಕ್ರೋಶ!
“ಆರ್ ಎಸ್ ಎಸ್ ಎಂಬ ಆಧುನಿಕ ಬಸ್ಮಾಸುರ ದೇಶವನ್ನೇ ಸುಡುತ್ತಿದೆ!” ಕಲ್ಲಡ್ಕ ಭಟ್ ಕೋರ್ಟ್ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಕಿಡಿ!
AI ಎಡಿಟ್ ಮಾಡಿ ಬಿಹಾರದಲ್ಲಿ ಅಭಿವೃದ್ಧಿ ತೋರಿಸಲು ಪ್ರಯತ್ನಿಸಿದ ಬಿಜೆಪಿ; ಅಸಲಿಯತ್ತನ್ನು ಬಯಲಿಗೆಳೆದ ನೆಟ್ಟಿಗರು!
ಗಂಗಾ ನದಿಯ ಉಗಮ ಸ್ಥಾನದಲ್ಲೇ ಕುಡಿಯುವ ನೀರಿಗೆ ಹಾಹಾಕಾರ: ಉತ್ತರಾಖಂಡದ ದೇವಪ್ರಯಾಗದಲ್ಲಿ ಗ್ರಾಮಸ್ಥರಿಂದ ಪಂಜಿನ ಮೆರವಣಿಗೆ
ಡಿಕೆ ಶಿವಕುಮಾರ್ ನೇತೃತ್ವದ ನೂತನ ಸರ್ಕಾರಕ್ಕೆ ಇಂದು ಪ್ರಮಾಣ ವಚನ: ಉಪಮುಖ್ಯಮಂತ್ರಿ ಸೇರಿ 13 ಸಚಿವರು ಪ್ರಮಾಣ ವಚನ ಸ್ವೀಕಾರ
ಅಮೆರಿಕ ಶಾಕ್: ಭಾರತದ ವಸ್ತುಗಳಿಗೆ ಶೇ. 12.5 ಹೆಚ್ಚುವರಿ ಸುಂಕ ಪ್ರಸ್ತಾಪ!
ದೆಹಲಿ ಅಗ್ನಿ ದುರಂತ: ತಮ್ಮ ಅಂಗಡಿಯ ಲಕ್ಷಾಂತರ ರೂಪಾಯಿ ಮೌಲ್ಯದ ಹಾಸಿಗೆಗಳನ್ನು ರಸ್ತೆಗೆ ಹಾಸಿ 8 ಜನರ ಪ್ರಾಣ ಉಳಿಸಿದ ರಿಯಾಝುದ್ದೀನ್ – ಅರ್ಮಾನ್
Dear Vedant,
— CBSE HQ (@cbseindia29) May 25, 2026
Thank you for bringing your concern regarding your Physics answer book to our attention.
Upon review, the matter has been examined, and the correct copy of your answer book has been sent to your registered email address. Necessary action for updating your result,…
ಆದರೆ, ವ್ಯವಸ್ಥೆಯ ತಪ್ಪನ್ನು ಎತ್ತಿ ತೋರಿಸಿದ ವೇದಾಂತ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಸಂಘಟಿತ ಟ್ರೋಲಿಂಗ್ ಆರಂಭವಾಗಿತ್ತು. ಆತ ಇತ್ತೀಚೆಗಷ್ಟೇ ‘ಎಕ್ಸ್’ ಖಾತೆ ತೆರೆದಿರುವುದು ಮತ್ತು ಆತನ ಪ್ರೊಫೈಲ್ನಲ್ಲಿ ಲೋಕೇಶನ್ ‘ಇಂಡಿಯಾ’ ಬದಲಿಗೆ ‘ಸೌತ್ ಏಷ್ಯಾ’ ಎಂದು ತೋರಿಸುತ್ತಿರುವುದನ್ನೇ ಮುಂದಿಟ್ಟುಕೊಂಡು ಆತನ ದೇಶಭಕ್ತಿಯನ್ನು ಪ್ರಶ್ನಿಸಲಾಯಿತು. ಖಾತೆ ತೆರೆಯುವಾಗ ಆದ ತಾಂತ್ರಿಕ ದೋಷದಿಂದ ಲೋಕೇಶನ್ ಹಾಗೆ ತೋರಿಸುತ್ತಿತ್ತಾದರೂ, ಟ್ರೋಲಿಗರು ಇದನ್ನು ಸಿಬಿಎಸ್ಇ ಮತ್ತು ದೇಶದ ಸಂಸ್ಥೆಗಳ ತೇಜೋವಧೆ ಮಾಡಲು ನಡೆಸಿರುವ ಸಂಚು ಎಂದು ಬಿಂಬಿಸಿದರು.
Rajma chawal after such a hectic day a big thanks to all who supported us from Vedant and Siddhant and we are not Pakistani pic.twitter.com/JNdf2szqvN
— Siddhant Srivastava (@iamsidddhant) May 25, 2026
ದೂರದರ್ಶನ ಸುದ್ದಿ ವಾಹಿನಿಯ ನಿರೂಪಕ ಅಶೋಕ್ ಶ್ರೀವಾಸ್ತವ್ ಸೇರಿದಂತೆ ಹಲವರು ಈ ವಿದ್ಯಾರ್ಥಿಯ ಖಾತೆಯ ಲೋಕೇಶನ್ ಅನ್ನು ಪ್ರಶ್ನಿಸಿ ಟ್ವೀಟ್ ಮಾಡುವ ಮೂಲಕ ಈ ವಿವಾದಕ್ಕೆ ಕೋಮು ಹಾಗೂ ಪ್ರಾದೇಶಿಕ ಬಣ್ಣ ಬಳಿಯುವ ಪ್ರಯತ್ನಕ್ಕೆ ಪ್ರೇರಣೆ ನೀಡಿದರು. ನೂರಾರು ‘ಎಕ್ಸ್’(X) ಬಳಕೆದಾರರು ಈ ವಿದ್ಯಾರ್ಥಿಯನ್ನು ‘ಪಾಕಿಸ್ತಾನಿ’ ಮತ್ತು ‘ರಾಷ್ಟ್ರವಿರೋಧಿ’ ಎಂದು ನಿಂದಿಸಿದ್ದಾರೆ. ಸೈಬರ್ ದಾಳಿ ತೀವ್ರಗೊಳ್ಳುತ್ತಿದ್ದಂತೆ ವೇದಾಂತ್ ಸಹೋದರ ಸಿದ್ಧಾಂತ್ ಶ್ರೀವಾಸ್ತವ್ ಮೇ 26 ರಂದು ಕುಟುಂಬದ ಫೋಟೋ ಹಂಚಿಕೊಂಡು, “ನಾವು ಪಾಕಿಸ್ತಾನಿಗಳಲ್ಲ” ಎಂದು ಸ್ಪಷ್ಟನೆ ನೀಡಬೇಕಾಗಿ ಬಂದಿತು. ವಿದ್ಯಾರ್ಥಿ ಅನುಭವಿಸಿದ ಈ ಮಾನಸಿಕ ದೌರ್ಜನ್ಯದ ಬಗ್ಗೆ ಸಿಬಿಎಸ್ಇ ಆಗಲಿ ಅಥವಾ ಕೇಂದ್ರ ಶಿಕ್ಷಣ ಸಚಿವಾಲಯವಾಗಲಿ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
अभी जानकारी मिली है कि वेदांत नाम का स्टूडेंट वास्तव में एक छात्र है। हालांकि उसके ट्वीट की लोकेशन भारत से बाहर की क्यों दिखाई जा रही है इसकी पर्याय जानकारी अभी भी नहीं मिली है। लेकिन @vineetJindal19 जी मेरे मित्र हैं और विश्वसनीय व्यक्ति हैं इसलिए उनकी जानकारी गलत नहीं होगी। सही…
— Ashok Shrivastav (@AshokShrivasta6) May 25, 2026
ಈ ವರ್ಷ ಸಿಬಿಎಸ್ಇ ಮೌಲ್ಯಮಾಪನ ಪ್ರಕ್ರಿಯೆಯನ್ನು ಸುಧಾರಿಸಲು ತಂದ ‘ಆನ್-ಸ್ಕ್ರೀನ್ ಮಾರ್ಕಿಂಗ್’ (OSM) ವ್ಯವಸ್ಥೆಯ ವಿರುದ್ಧ ದೇಶಾದ್ಯಂತ ಹಲವು ದೂರುಗಳು ಕೇಳಿಬಂದಿದ್ದವು. ಪೋರ್ಟಲ್ ಕೈಕೊಡುವುದು, ಸ್ಕ್ಯಾನಿಂಗ್ ಗುಣಮಟ್ಟ ಸರಿಯಿಲ್ಲದಿರುವುದು ಸೇರಿದಂತೆ ಹಲವು ತಾಂತ್ರಿಕ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಬಿಎಸ್ಇ ಮರು-ಮೌಲ್ಯಮಾಪನದ ಶುಲ್ಕವನ್ನು ಕಡಿತಗೊಳಿಸಿ, ದಿನಾಂಕವನ್ನು ವಿಸ್ತರಿಸಿದೆ ಹಾಗೂ ಐಐಟಿ ತಜ್ಞರ ನೆರವು ಕೋರಿದೆ. ಸದ್ಯ ವೇದಾಂತ್ ಶ್ರೀವಾಸ್ತವ್ ಅವರ ಅಂಕಗಳ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದ್ದು, ವಿದ್ಯಾರ್ಥಿಯು ತನ್ನ ಅಸಲಿ ಉತ್ತರ ಪತ್ರಿಕೆಯ ಮರುಮೌಲ್ಯಮಾಪನೆಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾನೆ. ಆದರೆ, ತರ್ಕಬದ್ಧವಾಗಿ ಹಕ್ಕು ಕೇಳುವ ವಿದ್ಯಾರ್ಥಿಗಳನ್ನು ಇಂಟರ್ನೆಟ್ನಲ್ಲಿ ಇಷ್ಟೊಂದು ಕ್ರೂರವಾಗಿ ಗುರಿಪಡಿಸುವ ಪ್ರವೃತ್ತಿ ಡಿಜಿಟಲ್ ಜಗತ್ತಿನ ಕರಾಳ ಮುಖವನ್ನು ಅನಾವರಣಗೊಳಿಸಿದೆ.
