ರಾಜ್ಯ ಸುದ್ದಿ

“TVK – Try Vijay As King”; ನಟ ವಿಜಯ್‌ ಅದ್ವಿತೀಯ ಗೆಲುವಿಗೆ ಶಿವರಾಜ್‌ ಕುಮಾರ್‌ ಅಭಿನಂದನೆ

Reading…
Follow Us

ವರಿಗಾರ-ಮೇ.05: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ಅದ್ವಿತೀಯ ಗೆಲುವು ಸಾಧಿಸಿರುವ ಬೆನ್ನಲ್ಲೇ, ಕನ್ನಡದ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಅವರು ವಿಜಯ್ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿ ಅಭಿನಂದಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಶುಭ ಹಾರೈಸಿರುವ ಶಿವಣ್ಣ, ಈ ಹಿಂದೆ ತಾವು ನೀಡಿದ್ದ  “TVK – Try Vijay As King” ಹೇಳಿಕೆಯನ್ನು ಮತ್ತೆ ನೆನಪಿಸಿಕೊಂಡಿದ್ದಾರೆ.

ಸತತ ರಾಜಕೀಯ ವಾಗ್ದಾಳಿಗಳ ನಡುವೆಯೂ ವಿಜಯ್ ತೋರಿದ ಸಂಯಮವನ್ನು ಶಿವಣ್ಣ ಕೊಂಡಾಡಿದ್ದಾರೆ. “ನಟ ವಿಜಯ್ ಅವರೇ, ಇದು ನೀವು ಪಡೆಯಲೇಬೇಕಾದ ಅತ್ಯಂತ ಅರ್ಹವಾದ ಗೆಲುವು. ನಿಮ್ಮ ಮೇಲೆ ತೀವ್ರವಾದ ವಾಗ್ದಾಳಿಗಳು ನಡೆದಾಗ ಮೌನವಾಗಿದ್ದು, ನಿಮ್ಮ ಕೆಲಸದ ಮೂಲಕವೇ ಉತ್ತರ ನೀಡುವುದು ನಿಜವಾದ ಮತ್ತು ಅತಿ ದೊಡ್ಡ ವಿಜಯ” ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ.

ಈ ಹಿಂದೆ ಪತ್ರಿಕಾಗೋಷ್ಠಿಯೊಂದರಲ್ಲಿ ವಿಜಯ್ ಅವರ ಪಕ್ಷದ ಹೆಸರಿನ ಬಗ್ಗೆ ಶಿವಣ್ಣ ನೀಡಿದ್ದ ವ್ಯಾಖ್ಯಾನ ಈಗ ನಿಜವಾಗಿದೆ. ಈ ಕುರಿತು ಬರೆದುಕೊಂಡಿರುವ ಅವರು, “ಹಿಂದೊಮ್ಮೆ ಪತ್ರಿಕಾಗೋಷ್ಠಿಯಲ್ಲಿ ನಾನು ತಮಾಷೆಯಾಗಿ ‘TVK ಅಂದರೆ – Try Vijay As King’ (ವಿಜಯ್ ಅವರನ್ನು ರಾಜನನ್ನಾಗಿ ನೋಡಿ) ಎಂದು ಹೇಳಿದ್ದೆ. ಇಂದು ನೀವು ಒಬ್ಬ ರಾಜನಂತೆ ಎತ್ತರವಾಗಿ ನಿಂತಿದ್ದೀರಿ” ಎಂದು ವಿಜಯ್ ಅವರ ರಾಜಕೀಯ ಕ್ರಾಂತಿಯನ್ನು ಶಿವಣ್ಣ ಕೊಂಡಾಡಿದ್ದಾರೆ.

“ತಮಿಳುನಾಡಿನ ಜನತೆಗೆ ನೀವು ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುವಂತಾಗಲಿ ಮತ್ತು ರಾಜ್ಯದಲ್ಲಿ ಸದಾ ಪ್ರಗತಿ ಇರಲಿ” ಎಂದು ಹಾರೈಸಿದ್ದಾರೆ. ಶಿವರಾಜ್‌ಕುಮಾರ್ ಮತ್ತು ವಿಜಯ್ ನಡುವೆ ಮೊದಲಿನಿಂದಲೂ ಉತ್ತಮ ಸ್ನೇಹ ಸಂಬಂಧವಿದ್ದು, ಶಿವಣ್ಣ ಅವರು ವಿಜಯ್ ನಟನೆಯ ‘ಲಿಯೋ’ ಚಿತ್ರದ ಯಶಸ್ಸಿಗೂ ಶುಭ ಹಾರೈಸಿದ್ದರು. ಇದೀಗ ವಿಜಯ್ ಅವರು ರಾಜಕೀಯದಲ್ಲಿ ‘ಕಿಂಗ್’ ಆಗಿ ಹೊರಹೊಮ್ಮಿರುವುದಕ್ಕೆ ಇಡೀ ಸ್ಯಾಂಡಲ್‌ವುಡ್ ಪರವಾಗಿ ಹ್ಯಾಟ್ರಿಕ್ ಹೀರೋ ಸಂಭ್ರಮ ವ್ಯಕ್ತಪಡಿಸಿದ್ದಾರೆ.

Join our WhatsApp Channel Get every Varadigara story instantly
How does this story make you feel?
Share:

About Us

ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ. ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'. ಬ್ರೇಕಿಂಗ್ ನ್ಯೂಸಿನ ನಾಗಾಲೋಟದ ಸ್ಪರ್ಧೆಯಲ್ಲಿ ನಾವಿಲ್ಲ!! ನಾ ಮುಂದು, ನಮ್ಮಲ್ಲೇ ಮೊದಲೆಂಬ ಯೋಚನೆ ಸುಳಿಯಲ್ಲ!! ಸುದ್ದಿ ಎಷ್ಟು ಕೊಟ್ಟಿದ್ದೇವೆ ಎನ್ನುವುದಕ್ಕಿಂತ ಏನು ಕೊಟ್ಟಿದ್ದೇವೆ ಎಂಬ ಗುಣಮಟ್ಟದ ಸಿದ್ಧಾಂತವನ್ನು ಮೈಗೂಡಿಸಿಕೊಂಡು ತೆವಳುತ್ತಾ ವರದಿಗಾರ ಸಾಗುತ್ತಿದೆ.

ನಮ್ಮ ಬಗ್ಗೆ ತಿಳಿಯಿರಿ →
Join our WhatsApp Channel Get every Varadigara story instantly
Follow Us
ಹನಿ ಸುದ್ದಿ ⚡ NEW
News Cards · Swipe to read
See All →

More Stories

ರಾಷ್ಟ್ರೀಯ ಸುದ್ದಿ

‘ಲವ್ ಜಿಹಾದ್’ ಆರೋಪ: ಭೋಪಾಲ್‌ನಲ್ಲಿ ಮುಸ್ಲಿಂ ಯುವಕನ ಮೇಲೆ ದಾಳಿ, ಮುಖಕ್ಕೆ ಮಸಿ, ಸೆಗಣಿ ಬಳಿದು ಅವಮಾನ

ರಾಷ್ಟ್ರೀಯ ಸುದ್ದಿ

ರಾಜಭವನದಲ್ಲಿ ವಿಜಯ್ ಶಿಷ್ಟಾಚಾರದ ನಡೆ: ರಾಜ್ಯಪಾಲರ ಭೇಟಿಯ ಹಿಂದಿನ ಕುತೂಹಲಕಾರಿ ಸಂಗತಿಗಳು ಬಹಿರಂಗ !

ರಾಷ್ಟ್ರೀಯ ಸುದ್ದಿ

ವಿಜಯ್ ಸಂಪುಟದ ‘ನವ ನಾಯಕರು’: ಯುವ ನಟಿ, ಮಾಜಿ IRS ಅಧಿಕಾರಿ ಸೇರಿ 9 ಮಂದಿ ಸಚಿವರಾಗಿ ಪದಗ್ರಹಣ

ರಾಷ್ಟ್ರೀಯ ಸುದ್ದಿ

ತಮಿಳುನಾಡು ರಾಜಕೀಯದಲ್ಲಿ ಹೊಸ ಯುಗ: ಮುಖ್ಯಮಂತ್ರಿಯಾಗಿ ನಟ ವಿಜಯ್ ಅಧಿಕಾರ ಸ್ವೀಕಾರ

ರಾಷ್ಟ್ರೀಯ ಸುದ್ದಿ

ನಟ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಶನಿವಾರ ಅಧಿಕಾರ ಸ್ವೀಕಾರ

From Across Varadigara

ಸುದ್ದಿ

ಅಯೋಧ್ಯೆ ರಾಮ ಮಂದಿರ ದೇಣಿಗೆ ವಿವಾದ; ‘ತಪ್ಪಿತಸ್ಥರಿಗೆ ಪ್ರಧಾನಿ ರಕ್ಷಣೆ ನೀಡುತ್ತಿದ್ದಾರೆ’ : ಕಾಂಗ್ರೆಸ್ ಗಂಭೀರ ಆರೋಪ

ರಾಷ್ಟ್ರೀಯ ಸುದ್ದಿ

ED ದಾಳಿ ನಡೆದ ಕೇವಲ ಒಂದೇ ತಿಂಗಳಲ್ಲಿ ಎನ್‌ಡಿಎ ಬೆಂಬಲಿತ ಬಣ ಸೇರಿದ ತೃಣಮೂಲ ಕಾಂಗ್ರೆಸ್ (TMC) ಶಾಸಕ ಮದನ್ ಮಿತ್ರಾ!

ರಾಷ್ಟ್ರೀಯ ಸುದ್ದಿ

ಆಕಾಶದಲ್ಲಿ ಹಾರುವ ಬಸ್ ತರಲಿದ್ದೇವೆ: ಕೇಂದ್ರ ಸಚಿವ ನಿತಿನ್ ಗಡ್ಕರಿ ಹೊಸ ಘೋಷಣೆ; ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯ

ರಾಷ್ಟ್ರೀಯ ಸುದ್ದಿ

ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲಿನ ದೆಹಲಿ ಪೊಲೀಸರ ಅತಿಯಾದ ಬಲಪ್ರಯೋಗ: ತನಿಖೆಗೆ ಆಮ್ನೆಸ್ಟಿ ಆಗ್ರಹ

ರಾಷ್ಟ್ರೀಯ ಸುದ್ದಿ

ನಮ್ಮ ಸರ್ಕಾರ ಉರುಳಿಸಲು ಬಿಜೆಪಿಯಿಂದ ₹30 ಕೋಟಿ ಆಫರ್; ಒಮರ್ ಅಬ್ದುಲ್ಲಾ ಗಂಭೀರ ಆರೋಪ

ರಾಜ್ಯ ಸುದ್ದಿ

ಕಣ್ಣೂರಿನಲ್ಲಿ ಭೀಕರ ರಸ್ತೆ ಅಪಘಾತ: ಮರಕ್ಕೆ ಕಾರು ಡಿಕ್ಕಿ, ಕಾಸರಗೋಡು ಯುವಕ ಸೇರಿ ನಾಲ್ವರು ಮೃತ್ಯು

ಕಾಣಿಸದ್ದು - ಕೇಳಿಸದ್ದು

₹50 ಕೋಟಿ ಮೌಲ್ಯದ ಭೂ ವಂಚನೆ ಆರೋಪ: ವಾರಣಾಸಿ ಬಿಜೆಪಿ ನಾಯಕ ಸೇರಿ 10 ಜನರ ವಿರುದ್ಧ ಎಫ್‌ಐಆರ್ ದಾಖಲು

ಕ್ರೀಡೆ

ಕೊನೆಯ ಕ್ಷಣದ ಮೆರಿನೊ ಮ್ಯಾಜಿಕ್! ಬೆಲ್ಜಿಯಂ ಮಣಿಸಿ ಸೆಮಿಫೈನಲ್‌ಗೆ ಸ್ಪೇನ್ ಭರ್ಜರಿ ಎಂಟ್ರಿ