ವರಿಗಾರ-ಮೇ.05: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ಅದ್ವಿತೀಯ ಗೆಲುವು ಸಾಧಿಸಿರುವ ಬೆನ್ನಲ್ಲೇ, ಕನ್ನಡದ ಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮಾರ್ ಅವರು ವಿಜಯ್ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿ ಅಭಿನಂದಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಶುಭ ಹಾರೈಸಿರುವ ಶಿವಣ್ಣ, ಈ ಹಿಂದೆ ತಾವು ನೀಡಿದ್ದ “TVK – Try Vijay As King” ಹೇಳಿಕೆಯನ್ನು ಮತ್ತೆ ನೆನಪಿಸಿಕೊಂಡಿದ್ದಾರೆ.
ಸತತ ರಾಜಕೀಯ ವಾಗ್ದಾಳಿಗಳ ನಡುವೆಯೂ ವಿಜಯ್ ತೋರಿದ ಸಂಯಮವನ್ನು ಶಿವಣ್ಣ ಕೊಂಡಾಡಿದ್ದಾರೆ. “ನಟ ವಿಜಯ್ ಅವರೇ, ಇದು ನೀವು ಪಡೆಯಲೇಬೇಕಾದ ಅತ್ಯಂತ ಅರ್ಹವಾದ ಗೆಲುವು. ನಿಮ್ಮ ಮೇಲೆ ತೀವ್ರವಾದ ವಾಗ್ದಾಳಿಗಳು ನಡೆದಾಗ ಮೌನವಾಗಿದ್ದು, ನಿಮ್ಮ ಕೆಲಸದ ಮೂಲಕವೇ ಉತ್ತರ ನೀಡುವುದು ನಿಜವಾದ ಮತ್ತು ಅತಿ ದೊಡ್ಡ ವಿಜಯ” ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ.
ಈ ಹಿಂದೆ ಪತ್ರಿಕಾಗೋಷ್ಠಿಯೊಂದರಲ್ಲಿ ವಿಜಯ್ ಅವರ ಪಕ್ಷದ ಹೆಸರಿನ ಬಗ್ಗೆ ಶಿವಣ್ಣ ನೀಡಿದ್ದ ವ್ಯಾಖ್ಯಾನ ಈಗ ನಿಜವಾಗಿದೆ. ಈ ಕುರಿತು ಬರೆದುಕೊಂಡಿರುವ ಅವರು, “ಹಿಂದೊಮ್ಮೆ ಪತ್ರಿಕಾಗೋಷ್ಠಿಯಲ್ಲಿ ನಾನು ತಮಾಷೆಯಾಗಿ ‘TVK ಅಂದರೆ – Try Vijay As King’ (ವಿಜಯ್ ಅವರನ್ನು ರಾಜನನ್ನಾಗಿ ನೋಡಿ) ಎಂದು ಹೇಳಿದ್ದೆ. ಇಂದು ನೀವು ಒಬ್ಬ ರಾಜನಂತೆ ಎತ್ತರವಾಗಿ ನಿಂತಿದ್ದೀರಿ” ಎಂದು ವಿಜಯ್ ಅವರ ರಾಜಕೀಯ ಕ್ರಾಂತಿಯನ್ನು ಶಿವಣ್ಣ ಕೊಂಡಾಡಿದ್ದಾರೆ.
“ತಮಿಳುನಾಡಿನ ಜನತೆಗೆ ನೀವು ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುವಂತಾಗಲಿ ಮತ್ತು ರಾಜ್ಯದಲ್ಲಿ ಸದಾ ಪ್ರಗತಿ ಇರಲಿ” ಎಂದು ಹಾರೈಸಿದ್ದಾರೆ. ಶಿವರಾಜ್ಕುಮಾರ್ ಮತ್ತು ವಿಜಯ್ ನಡುವೆ ಮೊದಲಿನಿಂದಲೂ ಉತ್ತಮ ಸ್ನೇಹ ಸಂಬಂಧವಿದ್ದು, ಶಿವಣ್ಣ ಅವರು ವಿಜಯ್ ನಟನೆಯ ‘ಲಿಯೋ’ ಚಿತ್ರದ ಯಶಸ್ಸಿಗೂ ಶುಭ ಹಾರೈಸಿದ್ದರು. ಇದೀಗ ವಿಜಯ್ ಅವರು ರಾಜಕೀಯದಲ್ಲಿ ‘ಕಿಂಗ್’ ಆಗಿ ಹೊರಹೊಮ್ಮಿರುವುದಕ್ಕೆ ಇಡೀ ಸ್ಯಾಂಡಲ್ವುಡ್ ಪರವಾಗಿ ಹ್ಯಾಟ್ರಿಕ್ ಹೀರೋ ಸಂಭ್ರಮ ವ್ಯಕ್ತಪಡಿಸಿದ್ದಾರೆ.
“TVK – Try Vijay As King”; ನಟ ವಿಜಯ್ ಅದ್ವಿತೀಯ ಗೆಲುವಿಗೆ ಶಿವರಾಜ್ ಕುಮಾರ್ ಅಭಿನಂದನೆ
Reading…
How does this story make you feel?
More Stories
ರಾಷ್ಟ್ರೀಯ ಸುದ್ದಿ
‘ಲವ್ ಜಿಹಾದ್’ ಆರೋಪ: ಭೋಪಾಲ್ನಲ್ಲಿ ಮುಸ್ಲಿಂ ಯುವಕನ ಮೇಲೆ ದಾಳಿ, ಮುಖಕ್ಕೆ ಮಸಿ, ಸೆಗಣಿ ಬಳಿದು ಅವಮಾನ
ರಾಷ್ಟ್ರೀಯ ಸುದ್ದಿ
ರಾಜಭವನದಲ್ಲಿ ವಿಜಯ್ ಶಿಷ್ಟಾಚಾರದ ನಡೆ: ರಾಜ್ಯಪಾಲರ ಭೇಟಿಯ ಹಿಂದಿನ ಕುತೂಹಲಕಾರಿ ಸಂಗತಿಗಳು ಬಹಿರಂಗ !
ರಾಷ್ಟ್ರೀಯ ಸುದ್ದಿ
ವಿಜಯ್ ಸಂಪುಟದ ‘ನವ ನಾಯಕರು’: ಯುವ ನಟಿ, ಮಾಜಿ IRS ಅಧಿಕಾರಿ ಸೇರಿ 9 ಮಂದಿ ಸಚಿವರಾಗಿ ಪದಗ್ರಹಣ
ರಾಷ್ಟ್ರೀಯ ಸುದ್ದಿ
ತಮಿಳುನಾಡು ರಾಜಕೀಯದಲ್ಲಿ ಹೊಸ ಯುಗ: ಮುಖ್ಯಮಂತ್ರಿಯಾಗಿ ನಟ ವಿಜಯ್ ಅಧಿಕಾರ ಸ್ವೀಕಾರ
ರಾಷ್ಟ್ರೀಯ ಸುದ್ದಿ
ನಟ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಶನಿವಾರ ಅಧಿಕಾರ ಸ್ವೀಕಾರ
From Across Varadigara
ಸಾಮಾಜಿಕ ತಾಣ
AI ಎಡಿಟ್ ಮಾಡಿ ಬಿಹಾರದಲ್ಲಿ ಅಭಿವೃದ್ಧಿ ತೋರಿಸಲು ಪ್ರಯತ್ನಿಸಿದ ಬಿಜೆಪಿ; ಅಸಲಿಯತ್ತನ್ನು ಬಯಲಿಗೆಳೆದ ನೆಟ್ಟಿಗರು!
ರಾಷ್ಟ್ರೀಯ ಸುದ್ದಿ
ರಾಜಕೀಯ ನಿರ್ಧಾರಗಳ ವಿಮರ್ಶೆ ತಡೆಯಲು ಸಾಧ್ಯವಿಲ್ಲ: ರಾಘವ್ ಚಡ್ಡಾಗೆ ಮಧ್ಯಂತರ ಪರಿಹಾರ ನಿರಾಕರಿಸಿದ ದೆಹಲಿ ಹೈಕೋರ್ಟ್
ಅಂತಾರಾಷ್ಟ್ರೀಯ
ಡಾಲರ್ ವಿರುದ್ಧ ರೂಪಾಯಿ ಭಾರೀ ಕುಸಿತ; ಆರಂಭಿಕ ವಹಿವಾಟಿನಲ್ಲಿ 1.39 ರೂ. ಇಳಿಕೆ
ರಾಷ್ಟ್ರೀಯ ಸುದ್ದಿ
ಪಶ್ಚಿಮ ಬಂಗಾಳ : ನಿಧಾನವಾದ ಮತ ಎಣಿಕೆ ಬಿಜೆಪಿಯ ಗೆಲುವಿಗೆ ದಾರಿಯಾಯಿತೇ?
ರಾಷ್ಟ್ರೀಯ ಸುದ್ದಿ
“ದೇಶ ಆರ್ಥಿಕ ಬಿರುಗಾಳಿ ಎದುರಿಸಲಿದೆ”; ಇಂಧನ ಬೆಲೆ ಏರಿಕೆಗೆ ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ರಾಷ್ಟ್ರೀಯ ಸುದ್ದಿ
ವಾಣಿಜ್ಯ ಸಿಲಿಂಡರ್ ಬೆಲೆ ಮತ್ತಷ್ಟು ದುಬಾರಿ: ಐದೇ ತಿಂಗಳಲ್ಲಿ ದುಪ್ಪಟ್ಟಾದ ದರ!
ರಾಷ್ಟ್ರೀಯ ಸುದ್ದಿ
ಬಿಜೆಪಿಯನ್ನು ದೆಹಲಿಯ ಅಧಿಕಾರದಿಂದ ಕೆಳಗಿಳಿಸುವ ಹೋರಾಟ ಮುಂದುವರಿಯುತ್ತದೆ: ಮಮತಾ ಬ್ಯಾನರ್ಜಿ ಶಪಥ
ಕಾಣಿಸದ್ದು - ಕೇಳಿಸದ್ದು
ಗಂಗಾ ನದಿಯ ಉಗಮ ಸ್ಥಾನದಲ್ಲೇ ಕುಡಿಯುವ ನೀರಿಗೆ ಹಾಹಾಕಾರ: ಉತ್ತರಾಖಂಡದ ದೇವಪ್ರಯಾಗದಲ್ಲಿ ಗ್ರಾಮಸ್ಥರಿಂದ ಪಂಜಿನ ಮೆರವಣಿಗೆ
ರಾಷ್ಟ್ರೀಯ ಸುದ್ದಿ
ಗುಜರಾತ್: ₹2,000 ಬಾಡಿಗೆ ಹಣದ ಬದಲು ಹೆಂಡತಿ, 13 ವರ್ಷದ ಮಗಳ ಮೇಲೆಯೇ ಅತ್ಯಾಚಾರಕ್ಕೆ ಅವಕಾಶ ಮಾಡಿಕೊಟ್ಟ ವ್ಯಕ್ತಿ ಬಂಧನ
ರಾಜ್ಯ ಸುದ್ದಿ
ಡಿಕೆ ಶಿವಕುಮಾರ್ ನೇತೃತ್ವದ ನೂತನ ಸರ್ಕಾರಕ್ಕೆ ಇಂದು ಪ್ರಮಾಣ ವಚನ: ಉಪಮುಖ್ಯಮಂತ್ರಿ ಸೇರಿ 13 ಸಚಿವರು ಪ್ರಮಾಣ ವಚನ ಸ್ವೀಕಾರ
ಕಾಣಿಸದ್ದು - ಕೇಳಿಸದ್ದು
ದೆಹಲಿ ಅಗ್ನಿ ದುರಂತ: ತಮ್ಮ ಅಂಗಡಿಯ ಲಕ್ಷಾಂತರ ರೂಪಾಯಿ ಮೌಲ್ಯದ ಹಾಸಿಗೆಗಳನ್ನು ರಸ್ತೆಗೆ ಹಾಸಿ 8 ಜನರ ಪ್ರಾಣ ಉಳಿಸಿದ ರಿಯಾಝುದ್ದೀನ್ – ಅರ್ಮಾನ್
ರಾಷ್ಟ್ರೀಯ ಸುದ್ದಿ
NEET ಪ್ರಶ್ನೆಪತ್ರಿಕೆ ಸೋರಿಕೆ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಜಾಕ್ಕೆ ರಾಹುಲ್ ಗಾಂಧಿ ಆಗ್ರಹ
ರಾಷ್ಟ್ರೀಯ ಸುದ್ದಿ
ಗಿರಿರಾಜ್ ಸಿಂಗ್ ಕೋಮು ಹೇಳಿಕೆಗೆ ಓವೈಸಿ ತಿರುಗೇಟು: ಪವರ್ಲೂಮ್ ನೂಲು ದರ ಏರಿಕೆ ಬಿಕ್ಕಟ್ಟಿನತ್ತ ಜವಳಿ ಸಚಿವರ ಗಮನ ಸೆಳೆದ ಹೈದರಾಬಾದ್ ಸಂಸದ
ರಾಜ್ಯ ಸುದ್ದಿ
ಕೇರಳ ನೂತನ ಸಿಎಂ ಸತೀಶನ್ ಗೆ ಸಿದ್ದರಾಮಯ್ಯ ಅಭಿನಂದನೆ
ಕಾಣಿಸದ್ದು - ಕೇಳಿಸದ್ದು
ಉತ್ತರ ಪ್ರದೇಶ: ವಾರ್ಡ್ ಅಭಿವೃದ್ಧಿ ನಿರ್ಲಕ್ಷ್ಯದ ವಿರುದ್ಧ ತಲೆ ಬೋಳಿಸಿ ಪ್ರತಿಭಟಿಸಿದ ಬಿಜೆಪಿ ಕೌನ್ಸಿಲರ್
ರಾಷ್ಟ್ರೀಯ ಸುದ್ದಿ
ಮಳೆಗಾಲಕ್ಕೂ ಮುನ್ನವೇ ಉತ್ತರ ಪ್ರದೇಶದಲ್ಲಿ ರುದ್ರತಾಂಡವ: ಸಿಡಿಲು, ಬಿರುಗಾಳಿಗೆ 111 ಬಲಿ, ನೂರಾರು ಮನೆಗಳು ಧ್ವಂಸ
ರಾಷ್ಟ್ರೀಯ ಸುದ್ದಿ
ಮಧ್ಯಪ್ರದೇಶ: ವಾಟ್ಸ್ಅಪ್ನಲ್ಲಿ ಉರ್ದು ನಜ್ಮ್ ಹಂಚಿದ ಶಿಕ್ಷಕನ ವಿರುದ್ಧದ FIR ರದ್ದು ಮಾಡಿದ ಹೈಕೋರ್ಟ್
ರಾಷ್ಟ್ರೀಯ ಸುದ್ದಿ
‘ಲವ್ ಜಿಹಾದ್’ ಆರೋಪ: ಭೋಪಾಲ್ನಲ್ಲಿ ಮುಸ್ಲಿಂ ಯುವಕನ ಮೇಲೆ ದಾಳಿ, ಮುಖಕ್ಕೆ ಮಸಿ, ಸೆಗಣಿ ಬಳಿದು ಅವಮಾನ
ರಾಷ್ಟ್ರೀಯ ಸುದ್ದಿ
ಉತ್ತರ ಪ್ರದೇಶ: ಮದ್ರಸಾ ಫ್ಯಾನ್ ಮೇಲೆ ‘Made in Pakistan’ ಲೇಬಲ್; ಭದ್ರತಾ ಆತಂಕಕ್ಕೆ ಕಾರಣವಾದ ವೈರಲ್ ಫೋಟೋ!
ಸಾಮಾಜಿಕ ತಾಣ
