ರಾಜ್ಯ ಸುದ್ದಿ

ಪ್ರಧಾನಿ ಮೋದಿ ಪಂಚಾಯತ್ ಸದಸ್ಯರ ರೀತಿ ರಾಜಕಾರಣ ಮಾಡುವುದು ಬಿಡಬೇಕು: ಬಿಕೆ ಹರಿಪ್ರಸಾದ್‌ ತಿರುಗೇಟು

Reading…
Follow Us

ವರದಿಗಾರ-ಮೇ 11: ರಾಜ್ಯ ರಾಜಕೀಯ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ನೀಡಿದ ಹೇಳಿಕೆಗಳಿಗೆ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ. ಪ್ರಧಾನಿ ರಾಷ್ಟ್ರೀಯ ವಿಷಯಗಳಿಗೆ ಆದ್ಯತೆ ನೀಡಬೇಕು ಹೊರತು ರಾಜ್ಯ ಮಟ್ಟದ ರಾಜಕೀಯ ಚರ್ಚೆಗಳಲ್ಲಿ ತಲೆಹಾಕಬಾರದು ಎಂದು ಅವರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಹರಿಪ್ರಸಾದ್, ದೇಶದ ಆರ್ಥಿಕ ಪರಿಸ್ಥಿತಿ, ಇಂಧನ ಬಳಕೆ ಮತ್ತು ಚಿನ್ನ ಖರೀದಿ ಕುರಿತು ನೀಡಲಾಗಿರುವ ಸಲಹೆಗಳ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು. ಜನರಿಗೆ ಮಿತವ್ಯಯದ ಕರೆ ನೀಡುವ ಮೊದಲು ಆಡಳಿತ ತನ್ನ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಅವರು ಹೇಳಿದರು.

ಜಾಗತಿಕ ಸವಾಲುಗಳ ನಡುವೆಯೂ ದೇಶದ ಆರ್ಥಿಕ ಸ್ಥಿರತೆಯನ್ನು ಕಾಪಾಡಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರದ ಕರ್ತವ್ಯ ಎಂದು ಅವರು ಸೂಚಿಸಿದರು. ರಾಜಕೀಯ ಆರೋಪ-ಪ್ರತ್ಯಾರೋಪಗಳಿಗಿಂತ ಆಡಳಿತದ ಸ್ಪಷ್ಟ ದಿಕ್ಕು ಮತ್ತು ನೀತಿಗಳೇ ಮುಖ್ಯ ಎಂದು ಅವರು ಅಭಿಪ್ರಾಯಪಟ್ಟರು.

ನರೇಂದ್ರ ಮೋದಿಯನ್ನು ನಾನು ಯಾವಾಗ ಬೇಕಾದರೂ ಇಳಿಸಬಹುದು ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. ಎಪ್‍ಸ್ಟೀನ್ ಫೈಲ್ಸ್‌ ನಲ್ಲಿ ಇವರ ಲೀಲೆಗಳು ಹೊರಗಡೆ ಬರುತ್ತೆ. ಆಗ ಕುರ್ಚಿ ಹೇಗೆ ಉಳಿಸಿಕೊಳ್ಳುತ್ತಾರೆ ಎಂದು ಜನರಿಗೆ ಹೇಳಿದರೆ ಒಳ್ಳೆಯದು. ಮೊದಲು ಅದಕ್ಕೆ ಉತ್ತರ ಕೊಡಲಿ. ಈಗ ಗುಜರಾತ್ ಮಾಡೆಲ್ ಮರೆತು ಬಿಟ್ಟಿದ್ದಾರೆ. 12 ವರ್ಷಗಳಲ್ಲಿ ಅರಾಜಕತೆ ಸೃಷ್ಟಿ ಮಾಡಿದವರು ಇವರು ಎಂದು ಹರಿಪ್ರಸಾದ್ ಕಿಡಿಗಾರಿದ್ದಾರೆ.

ಬಿಹಾರದಲ್ಲಿ ನಿತೀಶ್ ಕುಮಾರ್, ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ, ಎನ್‍ಸಿಪಿ, ಪಂಜಾಬ್‍ನಲ್ಲಿ ಪ್ರಕಾಶ್‍ಸಿಂಗ್ ಬಾದಲ್ ಅವರನ್ನು ಯಾವ ರೀತಿ ಮುಗಿಸಿದರು. ಇದಕ್ಕೆಲ್ಲ ಕಾರಣ ಭಸ್ಮಾಸುರ ಆಗಿರುವ ನರೇಂದ್ರ ಮೋದಿ. ಅವರು ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ಕೈ ಇಡದಿದ್ದರೆ ಸಾಕು ಎಂದು ಹರಿಪ್ರಸಾದ್ ಇದೇ ಸಂದರ್ಭದಲ್ಲಿ ‌ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Join our WhatsApp Channel Get every Varadigara story instantly
How does this story make you feel?
Share:
POLL

ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿರುವ ಬಿಕೆ ಹರಿಪ್ರಸಾದ್‌ ಬಗ್ಗೆ ನಿಮ್ಮ ಅಭಿಪ್ರಾಯವೇನು?

About Us

ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ. ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'. ಬ್ರೇಕಿಂಗ್ ನ್ಯೂಸಿನ ನಾಗಾಲೋಟದ ಸ್ಪರ್ಧೆಯಲ್ಲಿ ನಾವಿಲ್ಲ!! ನಾ ಮುಂದು, ನಮ್ಮಲ್ಲೇ ಮೊದಲೆಂಬ ಯೋಚನೆ ಸುಳಿಯಲ್ಲ!! ಸುದ್ದಿ ಎಷ್ಟು ಕೊಟ್ಟಿದ್ದೇವೆ ಎನ್ನುವುದಕ್ಕಿಂತ ಏನು ಕೊಟ್ಟಿದ್ದೇವೆ ಎಂಬ ಗುಣಮಟ್ಟದ ಸಿದ್ಧಾಂತವನ್ನು ಮೈಗೂಡಿಸಿಕೊಂಡು ತೆವಳುತ್ತಾ ವರದಿಗಾರ ಸಾಗುತ್ತಿದೆ.

ನಮ್ಮ ಬಗ್ಗೆ ತಿಳಿಯಿರಿ →
Join our WhatsApp Channel Get every Varadigara story instantly
Follow Us
ಹನಿ ಸುದ್ದಿ ⚡ NEW
News Cards · Swipe to read
See All →

More Stories

ಕಾಣಿಸದ್ದು - ಕೇಳಿಸದ್ದು

₹50 ಕೋಟಿ ಮೌಲ್ಯದ ಭೂ ವಂಚನೆ ಆರೋಪ: ವಾರಣಾಸಿ ಬಿಜೆಪಿ ನಾಯಕ ಸೇರಿ 10 ಜನರ ವಿರುದ್ಧ ಎಫ್‌ಐಆರ್ ದಾಖಲು

ರಾಷ್ಟ್ರೀಯ ಸುದ್ದಿ

ನಮ್ಮ ಸರ್ಕಾರ ಉರುಳಿಸಲು ಬಿಜೆಪಿಯಿಂದ ₹30 ಕೋಟಿ ಆಫರ್; ಒಮರ್ ಅಬ್ದುಲ್ಲಾ ಗಂಭೀರ ಆರೋಪ

ರಾಷ್ಟ್ರೀಯ ಸುದ್ದಿ

ರಾಮ ಮಂದಿರ ದೇಣಿಗೆ ದುರುಪಯೋಗ ಆರೋಪ: ಪ್ರಧಾನಿ ಮೋದಿ ಮೌನ ಮುರಿಯಲಿ ಎಂದು ಕಾಂಗ್ರೆಸ್ ಆಗ್ರಹ

ರಾಜ್ಯ ಸುದ್ದಿ

ಪ್ರದೀಪ್ ಈಶ್ವರ್ ಎದೆಗುಂದಬೇಕಿಲ್ಲ, ಅವರ ಜೊತೆ ಕಾಂಗ್ರೆಸ್‌ ಪಕ್ಷ ದೃಢವಾಗಿ ನಿಂತಿದೆ; ಬಿ.ಕೆ. ಹರಿಪ್ರಸಾದ್

ರಾಷ್ಟ್ರೀಯ ಸುದ್ದಿ

“ವೋಟ್ ಚೋರಿ, ಸರ್ಕಾರ ಚೋರಿ ನಂತರ ಇದೀಗ ಸೀಟ್ ಚೋರಿ; BJP – EC ಜುಗಲ್‌ಬಂದಿ” – ರಾಹುಲ್ ಗಾಂಧಿ

From Across Varadigara

ರಾಷ್ಟ್ರೀಯ ಸುದ್ದಿ

ED ದಾಳಿ ನಡೆದ ಕೇವಲ ಒಂದೇ ತಿಂಗಳಲ್ಲಿ ಎನ್‌ಡಿಎ ಬೆಂಬಲಿತ ಬಣ ಸೇರಿದ ತೃಣಮೂಲ ಕಾಂಗ್ರೆಸ್ (TMC) ಶಾಸಕ ಮದನ್ ಮಿತ್ರಾ!

ರಾಷ್ಟ್ರೀಯ ಸುದ್ದಿ

ನಮ್ಮ ಸರ್ಕಾರ ಉರುಳಿಸಲು ಬಿಜೆಪಿಯಿಂದ ₹30 ಕೋಟಿ ಆಫರ್; ಒಮರ್ ಅಬ್ದುಲ್ಲಾ ಗಂಭೀರ ಆರೋಪ

ಕ್ರೀಡೆ

ಕೊನೆಯ ಕ್ಷಣದ ಮೆರಿನೊ ಮ್ಯಾಜಿಕ್! ಬೆಲ್ಜಿಯಂ ಮಣಿಸಿ ಸೆಮಿಫೈನಲ್‌ಗೆ ಸ್ಪೇನ್ ಭರ್ಜರಿ ಎಂಟ್ರಿ

ರಾಜ್ಯ ಸುದ್ದಿ

ಕಣ್ಣೂರಿನಲ್ಲಿ ಭೀಕರ ರಸ್ತೆ ಅಪಘಾತ: ಮರಕ್ಕೆ ಕಾರು ಡಿಕ್ಕಿ, ಕಾಸರಗೋಡು ಯುವಕ ಸೇರಿ ನಾಲ್ವರು ಮೃತ್ಯು

ಸುದ್ದಿ

ಅಯೋಧ್ಯೆ ರಾಮ ಮಂದಿರ ದೇಣಿಗೆ ವಿವಾದ; ‘ತಪ್ಪಿತಸ್ಥರಿಗೆ ಪ್ರಧಾನಿ ರಕ್ಷಣೆ ನೀಡುತ್ತಿದ್ದಾರೆ’ : ಕಾಂಗ್ರೆಸ್ ಗಂಭೀರ ಆರೋಪ

ಕಾಣಿಸದ್ದು - ಕೇಳಿಸದ್ದು

₹50 ಕೋಟಿ ಮೌಲ್ಯದ ಭೂ ವಂಚನೆ ಆರೋಪ: ವಾರಣಾಸಿ ಬಿಜೆಪಿ ನಾಯಕ ಸೇರಿ 10 ಜನರ ವಿರುದ್ಧ ಎಫ್‌ಐಆರ್ ದಾಖಲು

ರಾಷ್ಟ್ರೀಯ ಸುದ್ದಿ

ಆಕಾಶದಲ್ಲಿ ಹಾರುವ ಬಸ್ ತರಲಿದ್ದೇವೆ: ಕೇಂದ್ರ ಸಚಿವ ನಿತಿನ್ ಗಡ್ಕರಿ ಹೊಸ ಘೋಷಣೆ; ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯ

ರಾಷ್ಟ್ರೀಯ ಸುದ್ದಿ

ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲಿನ ದೆಹಲಿ ಪೊಲೀಸರ ಅತಿಯಾದ ಬಲಪ್ರಯೋಗ: ತನಿಖೆಗೆ ಆಮ್ನೆಸ್ಟಿ ಆಗ್ರಹ