ವರದಿಗಾರ-ಮೇ.05: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ-ರಾಜಕಾರಣಿ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ (ಟಿವಿಕೆ)’ ಪಕ್ಷ ಐತಿಹಾಸಿಕ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
“ತಮಿಳುನಾಡು ಚುನಾವಣೆಗಳು… ನಮಸ್ಕಾರ ತಮಿಳುನಾಡು. ಕಾಮರಾಜ್ ಸೋತರು. ಎಂ.ಕೆ. ಸ್ಟಾಲಿನ್ ಸೋತರು. ಸಮಾಜದಲ್ಲಿ ಅಭಿಮಾನಿಗಳ ಪ್ರಾಬಲ್ಯ ಹೆಚ್ಚಾಗಿದೆ. ಇದು ರಾಜಕೀಯವಲ್ಲ ಎಂಬುದನ್ನು ತೋರಿಸಿದೆ,” ಎಂದು ಅವರು ಪೋಸ್ಟ್ ಮಾಡಿದ್ದಾರೆ
“ರಾಜಕೀಯ ಜಾಗೃತಿ ಮೂಡಿಸುವುದು ಸದಾ ವಿರೋಧ ಪಕ್ಷದ ಕರ್ತವ್ಯ. ನಮ್ಮ ಪ್ರಯಾಣ ಮುಂದುವರಿಯಬೇಕು. ವಿಜೇತರಿಗೆ ಅವರ ಸಾರ್ವಜನಿಕ ಸೇವೆಗೆ ಅಭಿನಂದನೆಗಳು… #justasking,” ಎಂದು ತಿಳಿಸಿದ್ದಾರೆ. ದಳಪತಿ ವಿಜಯ್ ಗೆ ದಕ್ಷಿಣ ಭಾರತೀಯ ಚಲನಚಿತ್ರರಂಗದಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ರಜನಿಕಾಂತ್, ಶಿವರಾಜ್ಕುಮಾರ್, ಚಿರಂಜೀವಿ, ರಾಮ್ ಚರಣ್ ಸೇರಿದಂತೆ ಹಲವು ಗಣ್ಯರು ವಿಜಯ್ ಅವರಿಗೆ ಅಭಿನಂದನೆ ಸಲ್ಲಿಸಿ ಹಾಡಿ ಹೊಗಳಿದ್ದಾರೆ.
