ರಾಷ್ಟ್ರೀಯ ಸುದ್ದಿ

UAPA ಕಾಯ್ದೆಯಡಿ ಶಿಕ್ಷೆಯಾಗುವ ಪ್ರಮಾಣ ಕೇವಲ 1.5% – 4% ಮಾತ್ರ : ಸುಪ್ರೀಂ ಕೋರ್ಟ್

Reading…
Follow Us

ಸಾರಾಂಶ

2019-2023 ರ ಅವಧಿಯಲ್ಲಿ ದೇಶಾದ್ಯಂತ UAPA ಕಾಯ್ದೆಯಡಿಯಲ್ಲಿ ದಾಖಲಾದ ಪ್ರಕರಣಗಳಲ್ಲಿ ಶಿಕ್ಷೆಯಾಗುವ ಪ್ರಮಾಣ ಕೇವಲ 1.5% ರಿಂದ 4% ರಷ್ಟಿದೆ ಎಂಬ NCRB ಅಂಕಿ-ಅಂಶಗಳನ್ನು ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ. ಕೇವಲ ಗಂಭೀರ ಆರೋಪ ಹೊರಿಸಲಾಗಿದೆ ಎಂಬ ಕಾರಣಕ್ಕೆ ವಿಚಾರಣೆ ಆರಂಭವಾಗುವ ಮುನ್ನವೇ ಆರೋಪಿಗಳನ್ನು ಸುದೀರ್ಘ ಕಾಲ ಜೈಲಿನಲ್ಲಿಡುವುದು ಅವರ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ನವದೆಹಲಿ: ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆಯಡಿಯಲ್ಲಿ (UAPA) ಬಂಧನಕ್ಕೊಳಗಾಗುವವರ ಸಂಖ್ಯೆ ಹೆಚ್ಚುತ್ತಿದ್ದರೂ, ನ್ಯಾಯಾಲಯದಲ್ಲಿ ಆರೋಪ ಸಾಬೀತಾಗಿ ಶಿಕ್ಷೆಯಾಗುವ ಪ್ರಮಾಣ ಮಾತ್ರ ದೇಶಾದ್ಯಂತ ಅತ್ಯಂತ ಕಡಿಮೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಮಾದಕವಸ್ತು ಪೂರೈಕೆ – ಭಯೋತ್ಪಾದನೆ ಪ್ರಕರಣವೊಂದರಲ್ಲಿ ಸುದೀರ್ಘ ಕಾಲ ಜೈಲಿನಲ್ಲಿದ್ದ ಆರೋಪಿಗೆ ಜಾಮೀನು ಮಂಜೂರು ಮಾಡುವ ಸಂದರ್ಭದಲ್ಲಿ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಿಡುಗಡೆ ಮಾಡಿರುವ ಅಧಿಕೃತ ಅಂಕಿ-ಅಂಶಗಳನ್ನು ಸರ್ವೋಚ್ಚ ನ್ಯಾಯಾಲಯ ಉಲ್ಲೇಖಿಸಿದೆ. ತನಿಖಾ ಸಂಸ್ಥೆಗಳು ಕಠಿಣ ಕಾನೂನುಗಳ ಅಡಿಯಲ್ಲಿ ದಾಖಲಿಸುವ ಪ್ರಕರಣಗಳು ಅಂತಿಮವಾಗಿ ನ್ಯಾಯಾಲಯದಲ್ಲಿ ಹೇಗೆ ಬದಲಾಗುತ್ತವೆ ಎಂಬುದಕ್ಕೆ ಈ ಅಂಕಿ-ಅಂಶಗಳು ಕನ್ನಡಿ ಹಿಡಿದಿವೆ.

ಕೇಂದ್ರ ಗೃಹ ಸಚಿವಾಲಯವು ಸಂಸತ್ತಿನಲ್ಲಿ ಮಂಡಿಸಿರುವ ಎನ್‌ಸಿಆರ್‌ಬಿ ವರದಿಗಳ ಪ್ರಕಾರ, 2019 ರಿಂದ 2023 ರವರೆಗಿನ ಐದು ವರ್ಷಗಳ ಅವಧಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಯುಎಪಿಎ ಪ್ರಕರಣಗಳ ಒಟ್ಟು ಶಿಕ್ಷೆಯ ಪ್ರಮಾಣ (Conviction Rate) ಕೇವಲ ಕನಿಷ್ಠ 1.5% ರಿಂದ ಗರಿಷ್ಠ 4% ರಷ್ಟಿದೆ. ಇನ್ನು ಭಯೋತ್ಪಾದನಾ ಪೀಡಿತ ಪ್ರದೇಶ ಎನ್ನಲಾಗುವ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಪ್ರಮಾಣ ಸತತವಾಗಿ 1% ಕ್ಕಿಂತಲೂ ಕೆಳಗಿದೆ. ವಿಶೇಷವೆಂದರೆ, 2019 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಯುಎಪಿಎ ಅಡಿಯಲ್ಲಿ ಒಬ್ಬರಿಗೂ ಶಿಕ್ಷೆಯಾಗಿರಲಿಲ್ಲ (0%) ಮತ್ತು 2022 ರಲ್ಲಿ ದಾಖಲಾದ 0.89% ಶಿಕ್ಷೆಯ ಪ್ರಮಾಣವೇ ಅಲ್ಲಿನ ಐದು ವರ್ಷಗಳ ಗರಿಷ್ಠ ಸಾಧನೆಯಾಗಿದೆ!

ಸಂಸತ್ತಿಗೆ ಸಲ್ಲಿಕೆಯಾಗಿರುವ ಅಧಿಕೃತ ಮಾಹಿತಿಯ ಪ್ರಕಾರ, 2019-2023 ರ ಅವಧಿಯಲ್ಲಿ ದೇಶಾದ್ಯಂತ ಯುಎಪಿಎ ಕಾಯ್ದೆಯಡಿ ಒಟ್ಟು 10,440 ಜನರನ್ನು ಬಂಧಿಸಲಾಗಿತ್ತು. ಆದರೆ ಈ ಪೈಕಿ ಕೇವಲ 335 ಜನರಿಗೆ ಮಾತ್ರ ನ್ಯಾಯಾಲಯದಲ್ಲಿ ಶಿಕ್ಷೆ ವಿಧಿಸಲು ಸಾಧ್ಯವಾಗಿದೆ. ಅಂದರೆ ಒಟ್ಟಾರೆ ಶಿಕ್ಷೆಯ ಪ್ರಮಾಣ ಕೇವಲ 3.2% ಮಾತ್ರ. ಇನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಇದೇ ಅವಧಿಯಲ್ಲಿ ಭಾರಿ ಪ್ರಮಾಣದಲ್ಲಿ ಅಂದರೆ 3,662 ಜನರನ್ನು ಬಂಧಿಸಲಾಗಿದ್ದರೂ, ಶಿಕ್ಷೆಯಾಗಿರುವುದು ಕೇವಲ 23 ಜನರಿಗೆ ಮಾತ್ರ ಎಂಬ ಆಘಾತಕಾರಿ ಸತ್ಯ ಹೊರಬಿದ್ದಿದೆ.

ಈ ಕಣ್ಣು ತೆರೆಸುವ ಅಂಕಿ-ಅಂಶಗಳನ್ನು ಮುಂದಿಟ್ಟುಕೊಂಡೇ ಸುಪ್ರೀಂ ಕೋರ್ಟ್ ಪ್ರಾಸಿಕ್ಯೂಷನ್ ಮತ್ತು ತನಿಖಾ ಸಂಸ್ಥೆಗಳ ಧೋರಣೆಯನ್ನು ಪ್ರಶ್ನಿಸಿದೆ. ಯುಎಪಿಎ ಅಡಿಯಲ್ಲಿ ಬಂಧಿತರಾದವರು ವಿಚಾರಣೆ ಮುಗಿಯುವ ಹೊತ್ತಿಗೆ ದೋಷಮುಕ್ತರಾಗುವ ಸಾಧ್ಯತೆ ಶೇಕಡಾ 96 ಕ್ಕಿಂತಲೂ ಹೆಚ್ಚಿರುತ್ತದೆ. ಇಂತಹ ಪರಿಸ್ಥಿತಿ ಇರುವಾಗ, ಕೇವಲ ಗಂಭೀರ ಆರೋಪ ಹೊರಿಸಲಾಗಿದೆ ಎಂಬ ಕಾರಣಕ್ಕೆ ವಿಚಾರಣೆ ಆರಂಭವಾಗುವ ಮುನ್ನವೇ ಆರೋಪಿಗಳನ್ನು ಸುದೀರ್ಘ ಕಾಲ ಜೈಲಿನಲ್ಲಿಡುವುದು ಅವರ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಸುಧಾರಣೆಯಾಗದ ತನಿಖಾ ವ್ಯವಸ್ಥೆ

ಡಿಸೆಂಬರ್ 2025 ರಲ್ಲಿ ಲೋಕಸಭೆಯಲ್ಲಿ ಗೃಹ ಸಚಿವಾಲಯವೇ ಮಂಡಿಸಿದ ಈ ಅಂಕಿ-ಅಂಶಗಳು, ದೇಶದ ಪ್ರಮುಖ ತನಿಖಾ ಸಂಸ್ಥೆಗಳಾದ ಎನ್‌ಐಎ ಮತ್ತು ರಾಜ್ಯ ಪೊಲೀಸರ ತನಿಖಾ ಗುಣಮಟ್ಟದ ಮೇಲೆಯೇ ಪ್ರಶ್ನೆಗಳನ್ನು ಎಬ್ಬಿಸಿವೆ. ಯುಎಪಿಎ ಕಾಯ್ದೆಯಲ್ಲಿ ಜಾಮೀನು ಸಿಗುವುದು ಅತ್ಯಂತ ಕಠಿಣವಾಗಿರುವುದರಿಂದ, ತನಿಖಾ ಸಂಸ್ಥೆಗಳು ಸಾಕ್ಷ್ಯಾಧಾರಗಳ ಕೊರತೆಯಿದ್ದರೂ ಸುಲಭವಾಗಿ ಈ ಕಾಯ್ದೆಯನ್ನು ಬಳಸುತ್ತಿವೆ ಎಂಬ ಆರೋಪಗಳಿಗೆ ಈ ಅಂಕಿ-ಅಂಶಗಳು ಪುಷ್ಟಿ ನೀಡಿದೆ.

Join our WhatsApp Channel Get every Varadigara story instantly
How does this story make you feel?
Share:

About Us

ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ. ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'. ಬ್ರೇಕಿಂಗ್ ನ್ಯೂಸಿನ ನಾಗಾಲೋಟದ ಸ್ಪರ್ಧೆಯಲ್ಲಿ ನಾವಿಲ್ಲ!! ನಾ ಮುಂದು, ನಮ್ಮಲ್ಲೇ ಮೊದಲೆಂಬ ಯೋಚನೆ ಸುಳಿಯಲ್ಲ!! ಸುದ್ದಿ ಎಷ್ಟು ಕೊಟ್ಟಿದ್ದೇವೆ ಎನ್ನುವುದಕ್ಕಿಂತ ಏನು ಕೊಟ್ಟಿದ್ದೇವೆ ಎಂಬ ಗುಣಮಟ್ಟದ ಸಿದ್ಧಾಂತವನ್ನು ಮೈಗೂಡಿಸಿಕೊಂಡು ತೆವಳುತ್ತಾ ವರದಿಗಾರ ಸಾಗುತ್ತಿದೆ.

ನಮ್ಮ ಬಗ್ಗೆ ತಿಳಿಯಿರಿ →
Join our WhatsApp Channel Get every Varadigara story instantly
Follow Us
ಹನಿ ಸುದ್ದಿ ⚡ NEW
News Cards · Swipe to read
See All →

More Stories

ರಾಷ್ಟ್ರೀಯ ಸುದ್ದಿ

ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲಿನ ದೆಹಲಿ ಪೊಲೀಸರ ಅತಿಯಾದ ಬಲಪ್ರಯೋಗ: ತನಿಖೆಗೆ ಆಮ್ನೆಸ್ಟಿ ಆಗ್ರಹ

ರಾಷ್ಟ್ರೀಯ ಸುದ್ದಿ

ED ದಾಳಿ ನಡೆದ ಕೇವಲ ಒಂದೇ ತಿಂಗಳಲ್ಲಿ ಎನ್‌ಡಿಎ ಬೆಂಬಲಿತ ಬಣ ಸೇರಿದ ತೃಣಮೂಲ ಕಾಂಗ್ರೆಸ್ (TMC) ಶಾಸಕ ಮದನ್ ಮಿತ್ರಾ!

ರಾಷ್ಟ್ರೀಯ ಸುದ್ದಿ

ಆಕಾಶದಲ್ಲಿ ಹಾರುವ ಬಸ್ ತರಲಿದ್ದೇವೆ: ಕೇಂದ್ರ ಸಚಿವ ನಿತಿನ್ ಗಡ್ಕರಿ ಹೊಸ ಘೋಷಣೆ; ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯ

ರಾಷ್ಟ್ರೀಯ ಸುದ್ದಿ

ನಮ್ಮ ಸರ್ಕಾರ ಉರುಳಿಸಲು ಬಿಜೆಪಿಯಿಂದ ₹30 ಕೋಟಿ ಆಫರ್; ಒಮರ್ ಅಬ್ದುಲ್ಲಾ ಗಂಭೀರ ಆರೋಪ

ರಾಷ್ಟ್ರೀಯ ಸುದ್ದಿ

ರಾಮ ಮಂದಿರ ದೇಣಿಗೆ ದುರುಪಯೋಗ ಆರೋಪ: ಪ್ರಧಾನಿ ಮೋದಿ ಮೌನ ಮುರಿಯಲಿ ಎಂದು ಕಾಂಗ್ರೆಸ್ ಆಗ್ರಹ

From Across Varadigara

ರಾಷ್ಟ್ರೀಯ ಸುದ್ದಿ

ED ದಾಳಿ ನಡೆದ ಕೇವಲ ಒಂದೇ ತಿಂಗಳಲ್ಲಿ ಎನ್‌ಡಿಎ ಬೆಂಬಲಿತ ಬಣ ಸೇರಿದ ತೃಣಮೂಲ ಕಾಂಗ್ರೆಸ್ (TMC) ಶಾಸಕ ಮದನ್ ಮಿತ್ರಾ!

ರಾಷ್ಟ್ರೀಯ ಸುದ್ದಿ

ಆಕಾಶದಲ್ಲಿ ಹಾರುವ ಬಸ್ ತರಲಿದ್ದೇವೆ: ಕೇಂದ್ರ ಸಚಿವ ನಿತಿನ್ ಗಡ್ಕರಿ ಹೊಸ ಘೋಷಣೆ; ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯ

ಕ್ರೀಡೆ

ಕೊನೆಯ ಕ್ಷಣದ ಮೆರಿನೊ ಮ್ಯಾಜಿಕ್! ಬೆಲ್ಜಿಯಂ ಮಣಿಸಿ ಸೆಮಿಫೈನಲ್‌ಗೆ ಸ್ಪೇನ್ ಭರ್ಜರಿ ಎಂಟ್ರಿ

ಸುದ್ದಿ

ಅಯೋಧ್ಯೆ ರಾಮ ಮಂದಿರ ದೇಣಿಗೆ ವಿವಾದ; ‘ತಪ್ಪಿತಸ್ಥರಿಗೆ ಪ್ರಧಾನಿ ರಕ್ಷಣೆ ನೀಡುತ್ತಿದ್ದಾರೆ’ : ಕಾಂಗ್ರೆಸ್ ಗಂಭೀರ ಆರೋಪ

ರಾಜ್ಯ ಸುದ್ದಿ

ಕಣ್ಣೂರಿನಲ್ಲಿ ಭೀಕರ ರಸ್ತೆ ಅಪಘಾತ: ಮರಕ್ಕೆ ಕಾರು ಡಿಕ್ಕಿ, ಕಾಸರಗೋಡು ಯುವಕ ಸೇರಿ ನಾಲ್ವರು ಮೃತ್ಯು

ಕಾಣಿಸದ್ದು - ಕೇಳಿಸದ್ದು

₹50 ಕೋಟಿ ಮೌಲ್ಯದ ಭೂ ವಂಚನೆ ಆರೋಪ: ವಾರಣಾಸಿ ಬಿಜೆಪಿ ನಾಯಕ ಸೇರಿ 10 ಜನರ ವಿರುದ್ಧ ಎಫ್‌ಐಆರ್ ದಾಖಲು

ರಾಷ್ಟ್ರೀಯ ಸುದ್ದಿ

ನಮ್ಮ ಸರ್ಕಾರ ಉರುಳಿಸಲು ಬಿಜೆಪಿಯಿಂದ ₹30 ಕೋಟಿ ಆಫರ್; ಒಮರ್ ಅಬ್ದುಲ್ಲಾ ಗಂಭೀರ ಆರೋಪ

ರಾಷ್ಟ್ರೀಯ ಸುದ್ದಿ

ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲಿನ ದೆಹಲಿ ಪೊಲೀಸರ ಅತಿಯಾದ ಬಲಪ್ರಯೋಗ: ತನಿಖೆಗೆ ಆಮ್ನೆಸ್ಟಿ ಆಗ್ರಹ