ವರದಿಗಾರ (02.12.2017): ಯಾವುದೇ ರೀತಿಯ ಭಯೋತ್ಪಾನೆ ಖಂಡನೀಯವಾಗಿದ್ದು, ಭಯೋತ್ಪಾದನೆಯನ್ನು ಯಾವುದೇ ಧರ್ಮದ ಜೊತೆ ಸಂಬಂಧ ಕಲ್ಪಿಸಬೇಡಿ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಅವರು ರಷ್ಯಾದ ಸೋಚಿಯಲ್ಲಿ ನಡೆದ ಎಸ್ ಸಿಓ ಶೃಂಗಸಭೆಯಲ್ಲಿ ಈ ಬಗ್ಗೆ ಮಾತನಾಡುತ್ತಿದ್ದರು.
ಸುಸ್ಥಿರವಾದ ಭದ್ರತೆ ಮತ್ತು ಸಹಕಾರದ ಸಮಗ್ರತೆಗಾಗಿ ಜೊತೆಯಾಗಿ ಕಾರ್ಯ ನಿರ್ವಹಿಸಲು ಭಾರತ ಸಿದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
