ವರದಿಗಾರ: ಬಿಹಾರದ ಬಿಜೆಪಿ ಅಧ್ಯಕ್ಷ ಹಾಗೂ ಉಜಿಯಾರ್ಪುರ್ ಕ್ಷೇತ್ರದ ಸಂಸದ ನಿತ್ಯಾನಂದ ರೈ ಅವರು ಸೋಮವಾರದಂದು ಸಭೆಯೊಂದನ್ನುದ್ದೇಶಿಸಿ ಮಾತನಾಡುತ್ತಿರುವಾಗ ಆಕ್ರೋಶಭರಿತರಾಗಿ ” ಪ್ರಧಾನಮಂತ್ರಿಯವರ ವಿರುದ್ಧ ಎತ್ತಿದ ಕೈ ಅಥವಾ ಬೆರಳನ್ನು ಮುರಿಯಲಾಗುವುದು ಅಥವಾ ಕಡಿದು ಹಾಕಲಾಗುವುದು” ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶವನ್ನು ಮುನ್ನಡೆಸಲು ಹಲವು ಅಡೆ-ತಡೆಗಳನ್ನು ಮೀರಿ ಸಾಗುತ್ತಿದ್ದಾರೆ, ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿರಬೇಕು ಎಂದು ಹೇಳಿ ನಂತರ ಮೇಲಿನ ವಿವಾದಾತ್ಮಕ ಹೇಳಿಕೆ ನೀಡಿದರು.
