
ವರದಿಗಾರ (ಮೇ.11): ‘ಹೊಟೇಲ್ಗಳನ್ನು ತೆರೆಯಲು ಮಹಾರಾಷ್ಟ್ರ ಮುಖ್ಯಮಂತ್ರಿಯ ಮನವೊಲಿಸುತ್ತಿರುವ ಮಾಲಕರು, ಇದೇ ಕಾರಣಕ್ಕೆ ರೈಲ್ವೆ ವ್ಯವಸ್ಥೆ ಮಾಡದಂತೆ ಎರಡೂ ರಾಜ್ಯಗಳ ಸರಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆಂಬ ಆರೋಪವಿದೆ. ಇದು ಕಾರ್ಮಿಕರಿಗೆ ಎರಡೂ ರಾಜ್ಯಗಳ ಸರಕಾರಗಳು ಬಗೆಯುತ್ತಿರುವ ದ್ರೋಹ’ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, “ಮುಂಬೈನ ಹೊಟೇಲ್ಗಳಲ್ಲಿ ದುಡಿಯುತ್ತಿರುವ ಕರ್ನಾಟಕದ ಸಾವಿರಾರು ಕಾರ್ಮಿಕರು ಲಾಕ್ಡೌನ್ನಿಂದಾಗಿ ಸಂಬಳ, ಊಟ, ಸರಿಯಾದ ವಸತಿ ಇಲ್ಲದೆ ಅತಂತ್ರರಾಗಿದ್ದಾರೆ. ಅವರನ್ನು ರಾಜ್ಯಕ್ಕೆ ಕರೆತಂದು ತಪಾಸಣೆ, ಕ್ವಾರಂಟೈನ್ಗೊಳಪಡಿಸಿ ಮನೆಗೆ ಕಳುಹಿಸಲು ಮುಖ್ಯಮಂತ್ರಿ ಯಡಿಯೂರಪ್ಪ ತಕ್ಷಣವೇ ವ್ಯವಸ್ಥೆ ಮಾಡಬೇಕು” ಎಂದು ರಾಜ್ಯ ಸರಕಾರವನ್ನು ಅವರು ಒತ್ತಾಯಿಸಿದ್ದಾರೆ.
ಮಹಾರಾಷ್ಟ್ರದಿಂದ ಬೇರೆ ರಾಜ್ಯಗಳಿಗೆ ರೈಲಿನಲ್ಲಿ ಕಾರ್ಮಿಕರು ತೆರಳುತ್ತಿದ್ದು, ಕರ್ನಾಟಕದಲ್ಲಿ ಮಾತ್ರ ರೈಲು-ಬಸ್ ವ್ಯವಸ್ಥೆ ಇಲ್ಲ. ಇದಕ್ಕೆ ಕರ್ನಾಟಕ ಸರಕಾರದ ಅಸಹಕಾರ ಕಾರಣ ಎಂದು ಮಹಾರಾಷ್ಟ್ರ ಹೇಳುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ತಕ್ಷಣ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದ್ದಾರೆ.
ಖಾಸಗಿ ವಾಹನಗಳಲ್ಲಿ ರಾಜ್ಯಕ್ಕೆ ಬರಲು ಮಹಾರಾಷ್ಟ್ರ ಮುಖ್ಯಮಂತ್ರಿ ಅನುಮತಿ ನೀಡಿರುವುದರಿಂದ ದುಡ್ಡಿದ್ದವರು ನಿಶ್ಚಿಂತೆಯಾಗಿ ಊರು ಸೇರುತ್ತಿದ್ದಾರೆ. ದುಡ್ಡಿಲ್ಲದವರು ಏನು ಮಾಡಬೇಕು? ಮುಖ್ಯಮಂತ್ರಿ ಯಡಿಯೂರಪ್ಪ ಮಾತುಕತೆ ನಡೆಸಿ ಎರಡೂ ರಾಜ್ಯಗಳ ನಡುವೆ ರೈಲು-ಬಸ್ ಸಂಚಾರಕ್ಕೆ ತಕ್ಷಣ ವ್ಯವಸ್ಥೆ ಮಾಡಬೇಕು’ ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಮುಂಬೈನ ಹೊಟೇಲ್ ಗಳಲ್ಲಿ ದುಡಿಯುತ್ತಿರುವ ಕರ್ನಾಟಕದ ಸಾವಿರಾರು ಕಾರ್ಮಿಕರು ಲಾಕ್ ಡೌನ್ ನಿಂದಾಗಿ ಸಂಬಳ,ಊಟ, ಸರಿಯಾದ ವಸತಿಇಲ್ಲದೆ ಅತಂತ್ರರಾಗಿದ್ದಾರೆ.
ಅವರನ್ನು ರಾಜ್ಯಕ್ಕೆ ಕರೆತಂದು ತಪಾಸಣೆ,ಕ್ವಾರಂಟೈನ್ಗೊಳಪಡಿಸಿ ಮನೆಗೆ ಕಳಿಸಲು @CMofKarnataka ತಕ್ಷಣ ವ್ಯವಸ್ಥೆ ಮಾಡಬೇಕು.#coronavirus
1/4— Siddaramaiah (@siddaramaiah) May 11, 2020
ಮಹಾರಾಷ್ಟ್ರದಿಂದ ಬೇರೆ ರಾಜ್ಯಗಳಿಗೆ ರೈಲಿನಲ್ಲಿ ಕಾರ್ಮಿಕರು ತೆರಳುತ್ತಿದ್ದು, ಕರ್ನಾಟಕಕ್ಕೆ ಮಾತ್ರ ರೈಲು-ಬಸ್ ವ್ಯವಸ್ಥೆ ಇಲ್ಲ. ಇದಕ್ಕೆ ಕರ್ನಾಟಕ ಸರ್ಕಾರದ ಅಸಹಕಾರ ಕಾರಣ ಎಂದು @CMOMaharashtra ಹೇಳುತ್ತಿದೆ. @CMofKarnataka ತಕ್ಷಣ ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು.#coronavirus
2/4— Siddaramaiah (@siddaramaiah) May 11, 2020
ಹೋಟೆಲ್ಗಳನ್ನು ತೆರೆಯಲು @CMOMaharashtra ಮನ ಒಲಿಸುತ್ತಿರುವ ಮಾಲೀಕರು, ಇದೇ ಕಾರಣಕ್ಕೆ ರೈಲು ವ್ಯವಸ್ಥೆ ಮಾಡದಂತೆ ಎರಡು ರಾಜ್ಯಗಳ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪ ಇದೆ.
ಇದು ಕಾರ್ಮಿಕರಿಗೆ ಎರಡೂ ರಾಜ್ಯಗಳ ಸರ್ಕಾರಗಳು ಬಗೆಯುತ್ತಿರುವ ದ್ರೋಹ.#coronavirus
3/4— Siddaramaiah (@siddaramaiah) May 11, 2020
ಖಾಸಗಿ ವಾಹನಗಳಲ್ಲಿ ರಾಜ್ಯಕ್ಕೆ ಬರಲು @CMOMaharashtra ಅನುಮತಿ ನೀಡಿರುವುದರಿಂದ ದುಡ್ಡಿದ್ದವರು ನಿಶ್ಚಿಂತೆಯಾಗಿ ಊರು ಸೇರುತ್ತಿದ್ದಾರೆ.
ದುಡ್ಡಿಲ್ಲದವರು ಏನು ಮಾಡ್ಬೇಕು?@CMofKarnataka ಮಾತುಕತೆ ನಡೆಸಿ ಎರಡು ರಾಜ್ಯಗಳ ನಡುವೆ ರೈಲು-ಬಸ್ ಸಂಚಾರಕ್ಕೆ ತಕ್ಷಣ ವ್ಯವಸ್ಥೆ ಮಾಡಬೇಕು.#coronavirus
4/4— Siddaramaiah (@siddaramaiah) May 11, 2020
